Friday, June 12, 2026
Friday, June 12, 2026

Department of Kannada and Culture ವಿವಿಧ ವಯೋಮಾನದ ಕಲಾವಿದರಾಗಿ ನಿರ್ದಿಷ್ಟಪಡಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನ

Date:

Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ವಯೋಮಾನದ ಕಲಾವಿದರಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲಾಖೆಯು ಮಕ್ಕಳಿಗಾಗಿ ‘ಚಿಗುರು’, ಯುವಕರಿಗಾಗಿ ‘ಯುವಸೌರಭ’ ಹಾಗೂ ಹಿರಿಯ ಕಲಾವಿದರಿಗಾಗಿ ‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಆಯಾ ವಿಭಾಗಗಳಲ್ಲಿ ಈ ಕೆಳಗಿನ ಕಲಾ ಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ:
ಚಿಗುರು ಕಾರ್ಯಕ್ರಮ (8 ರಿಂದ 14 ವರ್ಷದೊಳಗಿನ ಮಕ್ಕಳಿಗೆ):
ಶಾಸ್ತ್ರೀಯ ಸಂಗೀತ / ಕರ್ನಾಟಕ / ಹಿಂದೂಸ್ತಾನಿ / ಗಾಯನ ಮತ್ತು ವಾದ್ಯಸಂಗೀತ.
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಏಕಪಾತ್ರಾಭಿನಯ.
ಯುವಸೌರಭ ಕಾರ್ಯಕ್ರಮ (15 ರಿಂದ 30 ವರ್ಷದೊಳಗಿನ ಯುವಕರಿಗೆ):
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ಜನಪದ ಪ್ರದರ್ಶನ ಕಲಾತಂಡ (ವಿವಿಧ 02 ಕಲಾ ಪ್ರಕಾರಗಳು).
ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಸಾಂಸ್ಕೃತಿಕ ಸೌರಭ ಕಾರ್ಯಕ್ರಮ (30 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರಿಗೆ):
ಶಾಸ್ತ್ರೀಯ ಸಂಗೀತ / ಕರ್ನಾಟಕ / ಹಿಂದೂಸ್ತಾನಿ / ಗಾಯನ ಮತ್ತು ವಾದ್ಯಸಂಗೀತ.
ಸುಗಮ ಸಂಗೀತ / ವಚನ ಸಂಗೀತ.
ಜನಪದ ಗೀತೆಗಳು.
ಸಮೂಹ ನೃತ್ಯ / ನೃತ್ಯ ರೂಪಕ.
ಜನಪದ ಪ್ರದರ್ಶನ ಕಲಾತಂಡ (ವಿವಿಧ 03 ಕಲಾ ಪ್ರಕಾರಗಳು).
ನಾಟಕ, ಯಕ್ಷಗಾನ, ಬಯಲಾಟ, ಗೊಂಬೆಯಾಟ ಇತ್ಯಾದಿ ಸಮೂಹ ಕಾರ್ಯಕ್ರಮಗಳು.
ಗಮಕ / ಕಥಾಕೀರ್ತನೆ.
Department of Kannada and Culture ಆಸಕ್ತ ಕಲಾವಿದರು ತಮ್ಮ ವಯಸ್ಸಿನ ಧೃಢೀಕರಣ ದಾಖಲೆಗಳೊಂದಿಗೆ, ಸಂಗೀತ ವಿದ್ಯಾಭ್ಯಾಸದ ಪ್ರಥಮ ದರ್ಜೆ (ಜೂನಿಯರ್ ಗ್ರೇಡ್), ಪ್ರೌಢದರ್ಜೆ (ಸೀನಿಯರ್ ಗ್ರೇಡ್), ವಿದ್ವತ್ ಶ್ರೇಣಿ, ಆಕಾಶವಾಣಿ ‘ಬಿ’ ಗ್ರೇಡ್ ಅಥವಾ ಸರ್ಕಾರದಿಂದ ನೀಡುವ ಪ್ರಶಸ್ತಿ ಪುರಸ್ಕೃತ ದಾಖಲೆಗಳನ್ನು ಲಗತ್ತಿಸಬೇಕು.
ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಬಿಳಿ ಹಾಳೆಯ ಮೇಲೆ ಬರೆದು, ಅಗತ್ಯ ದಾಖಲೆಗಳೊಂದಿಗೆ “ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ” ಈ ವಿಳಾಸಕ್ಕೆ ದಿನಾಂಕ: 25-06-2026ರ ಸಂಜೆ 5.00 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಶೇಷ ಸೂಚನೆ: ಈ ಹಿಂದೆ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡಿದ ಕಲಾವಿದರು ಈ ಬಾರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08182-223354 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of School Education ಹೆಚ್ಚಿನ ಶುಲ್ಕ ವಸೂಲಿಮಾಡುವ ಖಾಸಗಿ ಶಾಲೆ-ಸಂಸ್ಥೆಗಳ ವಿರುದ್ಧ ಕ್ರಮ : ಮಂಜುನಾಥ ಸ್ವಾಮಿ

Department of School Education ಸರ್ಕಾರ ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ...

Election Commission of India ಬೆಂಗಳೂರಿನಲ್ಲಿ “ತಂತ್ರಜ್ಞಾನ ಚಾಲಿತ ಮತದಾರರ ನೋಂದಣಿ ” ಒಂದು ದಿನದ ಕಾರ್ಯಾಗಾರ

Election Commission of India ಭಾರತದ ಚುನಾವಣಾ ಆಯೋಗವು, ಭಾರತೀಯ ಅಂತರಾಷ್ಟ್ರೀಯ...

National Vaccination Day ಜೂನ್ 28, ಭಾನುವಾರ “ರಾಷ್ಟ್ರೀಯ ಲಸಿಕಾ ದಿನ”-ರಿತ್ವಿಕ್ ಪಾಂಡೆ

National Vaccination Day ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ...