ಶಿವಮೊಗ್ಗ ನಗರದ ಬ್ರಾಹ್ಮಣ ಸೇವಾ ಸಂಘ (ರಿ), ಗೋಪಾಳದವತಿಯಿಂದ ಜೂ:14ರ ಭಾನುವಾರ ಸಂಜೆ:5 ಗಂಟೆಗೆ ಸರಿಯಾಗಿ ಅಧಿಕ ಜೇಷ್ಟ- ಮಾಧುರ್ಯಲಹರಿ- 2026 ಎಂಬ ದಾಸರವಾಣಿಗಳ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ಸಂಜೆ:5 ಗಂಟೆಗೆ ಸರಿಯಾಗಿ ಏರ್ಪಡಿಸಲಾಗಿದೆ.
ಅಂಗವಾಗಿ ಅಂದು ಚಾಲುಕ್ಯನಗರ,ಕೆ.ಹೆಚ್.ಬಿ.ಕಾಲೋನಿಯ ಸುರಭಿ ಸಮುದಾಯ ಭವನದಲ್ಲಿ ಬೆಂಗಳೂರಿನ ಹೆಸರಾಂತ ಗಾಯಕರಾದ ವಿದ್ವಾನ್.ವಸುಧೇಂದ್ರ.ಎಲ್.ವೈದ್ಯ ಮತ್ತು ತಂಡದವರಿಂದ ದಾಸರವಾಣಿಗಳ ಗಾಯನ
ಕಾರ್ಯಕ್ರಮ ನಡೆಯಲಿದೆ.
ಹೆಚಿನ ಮಾಹಿತಿಗಾಗಿ ಖಜಾಂಚಿ ಬಾಲಾಜಿರಾವ್ರನ್ನು ಮೊಬೈಲ್ ಸಂಖ್ಯೆ: 9449943222 ರಲ್ಲಿ
ಸಂಪರ್ಕಿಸಬಹುದು .
ಕಲಾಭಿಮಾನಿಗಳು ಸಮಯಕ್ಕೆ ಸರಿಯಾಗಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷ ಸುರೇಶ್ ಉಮರಾಣಿ ಮತ್ತು ಕಾರ್ಯದರ್ಶಿ ಶ್ರೀಧರಮೂರ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
