Tuesday, June 9, 2026
Tuesday, June 9, 2026

B.Y. Raghavendra ಪ್ರತೀ ಮನೆಯ ಮುಂದೆ ಸಸಿ ನೆಡುವ ಅಪೂರ್ವ ಸಂಕಲ್ಪ, ನಿವಾಸಿಗಳ ಪ್ರಯತ್ನ ಶ್ಲಾಘನೀಯ- ಬಿ.ವೈ.ರಾಘವೇಂದ್ರ

Date:

B.Y. Raghavendra ಹಸಿರು ಶಿವಮೊಗ್ಗ ಮತ್ತು ಸುಸ್ಥಿರ ಪರಿಸರದ ಆಶಯದೊಂದಿಗೆ, ಪಶು ವೈದ್ಯಕೀಯ ಕಾಲೇಜು ಮುಖ್ಯ ರಸ್ತೆ ನಿವಾಸಿಗಳ ಸಂಘ (ರಿ.), ಕಾಶಿಪುರ ಹಾಗೂ ಸ್ಟೇಟ್ ಪಿಯು ಕಾಲೇಜ್, ಶಿವಮೊಗ್ಗ ಇವರ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಘದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಚಾಲನೆ ನೀಡಲಾಯಿತು.

“ಪ್ರತಿ ಮನೆಯ ಮುಂದೆ ಸಸಿ ನೆಡುವ” ಅಪೂರ್ವ ಸಂಕಲ್ಪ:
ಈ ಸಂಘದ ಉದ್ಘಾಟನೆಯನ್ನು ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಬಡಾವಣೆಯ ಪ್ರತಿಯೊಂದು ಮನೆಯ ಮುಂಭಾಗದಲ್ಲೂ ಸಸಿಗಳನ್ನು ನೆಡುವ (Planting Drive) ಅತ್ಯಂತ ಪರಿಸರ ಪೂರಕ ಹಾಗೂ ವಿಶಿಷ್ಟ ಮಾದರಿಯ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಗಿಡ ನೆಡುವ ಈ ಜನಾಂದೋಲನದಲ್ಲಿ ನಿವಾಸಿಗಳೊಂದಿಗೆ ಖುದ್ದಾಗಿ ಭಾಗವಹಿಸಿ ಸಸಿಗಳನ್ನು ನೆಟ್ಟು, ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಹಂಚಿಕೊಳ್ಳಲಾಯಿತು. ಬಡಾವಣೆಯ ಮೂಲಭೂತ ಸಮಸ್ಯೆಗಳ ಪರಿಹಾರದ ಜೊತೆಗೆ ಪರಿಸರದ ಸಮತೋಲನ ಕಾಪಾಡಲು ಒಗ್ಗಟ್ಟಾಗಿರುವ ಇಲ್ಲಿನ ನಿವಾಸಿಗಳ ಪ್ರಯತ್ನ ನಿಜಕ್ಕೂ ಹೆಮ್ಮೆ ತರುವಂತದ್ದು.

B.Y. Raghavendra ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಶ್ರೀ ಧನಂಜಯ ಸರ್ಜಿ, ಸಂಘದ ಅಧ್ಯಕ್ಷರಾದ ಶ್ರೀ ನಟರಾಜ್ ಹಾಗೂ ಬಡಾವಣೆಯ ನೂರಾರು ನಿವಾಸಿಗಳು ಕುಟುಂಬ ಸಮೇತರಾಗಿ ಪಾಲ್ಗೊಂಡು ಗಿಡ ನೆಡುವ ಅಭಿಯಾನವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಮಕ್ಕಳ ಆಸಕ್ತಿಗೆ ಅನುಗುಣ ಅವರ ಕಲಿಕೆಯನ್ನ ಪ್ರೋತ್ಸಾಹಿಸಬೇಕು- ಶಕುಂತಲಾ ಚಂದ್ರಶೇಖರ್

Bharat Scouts and Guides ಮಕ್ಕಳ ಆಸಕ್ತಿಗನುಗುಣವಾಗಿ ಅವರ ಕಲಿಕೆಯನ್ನು ಉತ್ತಮ...

Rotary Shimoga ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ನಿರ್ಲಕ್ಷ್ಯ – ಎಂ.ಎನ್.ಸುಂದರ ರಾಜ್

Rotary Shimoga ನಾಡಿನ ಆದಾಯದ ಮೂಲ ಆಗಬೇಕಿದ್ದ ಪ್ರವಾಸೋದ್ಯಮ ನಿರ್ಲಕ್ಷ್ಯಕ್ಕೆ...

World Environment Day ಶಿವಮೊಗ್ಗದಲ್ಲಿ ಗಮನ ಸೆಳೆದ ವಿಶಿಷ್ಟ ರೀತಿಯ “ಪರಿಸರ ದಿನಾಚರಣೆ”

ದಿನಾಂಕ ೦೫.೦೬.೨೦೨೬ ರಂದು ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಶಿವಮೊಗ್ಗರಾಜೇಂದ್ರನಗರ ಬಡಾವಣೆಯ...

Bhadra Achukattu Area Development ರೈತರು ನೀರನ್ನ ಮಿತ ಬಳಸಿ,ಬಹುಬೆಳೆ ಮಾದರಿ ಅನುಸರಿಸಿ ಮಣ್ಣಿನ ಫಲವತ್ತತೆ ಕಾಪಾಡಬೇಕು,- ಡಾ.ಕೆ.ಪಿ.ಅಂಶುಮಂತ್.

Bhadra Achukattu Area Development ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ...