DK Shivakumar “ನಾಗರಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ”
ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿಯ ವಾತಾವರಣವನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಗುರಿಯಾಗಿದ್ದು, ರಾಜ್ಯದ ಇತಿಹಾಸದಲ್ಲೆ ನಾವೊಂದು ವಿನೂತನ ಹಾಗೂ ದಿಟ್ಟ ಹೆಜ್ಜೆಯನ್ನು ಇರಿಸಿದ್ದೇವೆ.
DK Shivakumar ರೌಡಿ ಗ್ಯಾಂಗ್ಗಳು, ಹ್ಯಾಬಿಚ್ಯುಯಲ್ ಅಫೆಂಡರ್ಸ್ಗಳ ಮೇಲೆ ನಿರಂತರ ನಿಗಾ ಇಡಲು ಪ್ರತಿ ಪೊಲೀಸ್ ವೃತ್ತದಲ್ಲೂ ವಿಶೇಷ ರೌಡಿ ನಿಗ್ರಹ ಪಡೆ ಇನ್ನು ಮುಂದೆ ಕಾರ್ಯಾಚರಣೆ ನಡೆಸಲಿದೆ. ಬೆದರಿಕೆ, ದೌರ್ಜನ್ಯ, ಸುಲಿಗೆ ಮತ್ತು ಬಲವಂತದಿಂದ ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದೆ. ಇಂತಹ ಸಮಾಜ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಶೂನ್ಯ ಸಂವೇದನಾ ನೀತಿ ನಮ್ಮದಾಗಿದ್ದು, ರೌಡಿಸಂ ಅನ್ನು ಬೇರುಸಹಿತ ಕಿತ್ತಸೆದು ನಾಡನ್ನು ಶಾಂತಿಯ ತೋಟವಾಗಿಸಲು ನಾವು ಕಟಿಬದ್ಧರಾಗಿದ್ದೇವೆ.
ಸುರಕ್ಷಿತ ಸಮಾಜ ನಿರ್ಮಾಣದ ಸಂಕಲ್ಪ ನಮ್ಮದು, ಇದಕ್ಕೆ ನಿಮ್ಮೆಲ್ಲರ ಸಹಕಾರವೂ ಇರಲಿ.
