Rotary Shimoga ನಾಡಿನ ಆದಾಯದ ಮೂಲ ಆಗಬೇಕಿದ್ದ ಪ್ರವಾಸೋದ್ಯಮ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸಾಹಿತಿ, ಅಂಕಣಕಾರ ಎಂ.ಎನ್.ಸುಂದರ್ರಾಜ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ಸ್ಥಳಗಳ ಬಗ್ಗೆ ಮಾತನಾಡಿ, ನಾಡಿನ ಪ್ರಕೃತಿ ಸಂಪತ್ತು, ಜಲಪಾತಗಳು, ದೇವಾಲಯಗಳು, ಪಕ್ಷಿ ಧಾಮಗಳು, ಮತ್ತಿತರ ಅನೇಕ ಪ್ರೇಕ್ಷಣೀಯ ಸ್ಥಳಗಳು ಸಮೃದ್ಧವಾಗಿದೆ. ಆದರೆ ಅವುಗಳ ಸಂರಕ್ಷಣೆ ಮತ್ತು ಸರಿಯಾದ ಪ್ರಕಾರದ ಕೊರತೆ ಮತ್ತು ಮಾರ್ಗದರ್ಶನವಿಲ್ಲದೆ ಎಲ್ಲವೂ ನಿರ್ಲಕ್ಷಕ್ಕೆ ಒಳಪಟ್ಟಿದೆ ಎಂದು ತಿಳಿಸಿದರು.
ಸರ್ಕಾರದ ಪ್ರವಾಸೋದ್ಯಮ ಇಲಾಖೆ ಇಂತಹ ಸ್ಥಳಗಳ ಮಾಹಿತಿ ಪಡೆದು ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಪ್ರವಾಸೋದ್ಯಮ ಒಂದು ಉದ್ಯಮವಾಗದೆ ನಿರುಪಯೋಗವಾಗಿದೆ. ಎಂದು ಹೇಳಿದರು.
ಪ್ರವಾಸೋದ್ಯಮದಲ್ಲಿ ರಾಜ್ಯ ತುಂಬಾ ಹಿಂದುಳಿದಿದೆ. ಅದಕ್ಕೆ ಮುಖ್ಯ ಕಾರಣ ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷö್ಯ ಮನೋಭಾವನೆ. ಜಿಲ್ಲೆಯಲ್ಲಿರುವ 80ಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳ ವಿವರವಾದ ಮಾಹಿತಿಗಳನ್ನು ಜನರಿಗೆ ತಲುಪಿಸಿದಲ್ಲಿ ಮತ್ತು ಅಂತಹ ಸ್ಥಳಗಳ ಬಗ್ಗೆ ಮಾರ್ಗದರ್ಶಕ ಫಲಕಗಳನ್ನು ಅಳವಡಿಸುವುದು ಮತ್ತು ಸಾಹಿತ್ಯವನ್ನು ಪ್ರಕಟಿಸುವುದರಿಂದ ಹೆಚ್ಚು ಹೆಚ್ಚು ಹೆಚ್ಚು ಪ್ರವಾಸಿಗರು ಬಂದು ಹೋಗಲು ಸಾಧ್ಯವಾಗುತ್ತದೆ. ದೇಶ ವಿದೇಶಗಳಿಂದ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಹರಿದು ಬರಲು ಸಾಧ್ಯವಾಗಿ ರಾಜ್ಯದ ಆದಾಯ ಹೆಚ್ಚುತ್ತದೆ. ಈ ರೀತಿ ಮಾಡುವುದರಿಂದ ಅನೇಕ ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚಂಪಕ ಸರಸು, ಹೊಸನಗರ ತಾಲ್ಲೂಕಿನ ದೇವಗಂಗೆ, ಸಾಗರ ತಾಲ್ಲೂಕಿನ ದೇವರ ಗದ್ದೆ ಮತ್ತು ಹಿರೇಭಾಸ್ಕರ ಡ್ಯಾಮ್ ಸೇರಿ ಪ್ರಮುಖ ತಾಣಗಳಿವೆ. ಈ ಸ್ಥಳಗಳನ್ನು ಒಮ್ಮೆಯಾದರೂ ಸಂದರ್ಶಿಸಬೇಕು. ನಮ್ಮ ನಾಡಿನ ಅನೇಕ ಪ್ರವಾಸಿ ಸ್ಥಳಗಳು ದೇಶದಲ್ಲಿಯೇ ಪ್ರಸಿದ್ಧವಾಗಿದ್ದು, ಅವುಗಳ ಪ್ರಾಮುಖ್ಯತೆ ಅರಿಯಬೇಕು ಎಂದರು.
ಸುಂದರರಾಜ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಕಾರ್ಯದರ್ಶಿ ಬಿ.ಆರ್.ಧನಂಜಯ, ನಿಯೋಜಿತ ಜಿಲ್ಲಾ ಗವರ್ನರ್ ವಸಂತ ಹೋಬಳಿದಾರ್, ಡಾ. ಗುಡದಪ್ಪ ಕಸಬಿ, ಆದಿಮೂರ್ತಿ, ಶ್ರೀನಿವಾಸ ಗೌಡ, ಮನೋಹರ, ಗಣೇಶ, ವಿಜಯಪ್ರಕಾಶ್, ರಮೇಶ್ ಭಟ್, ನಿಯೋಜಿತ ಅಧ್ಯಕ್ಷ ಶೇಷಗಿರಿ.ಡಿ.ಕೆ., ಗಂಗಪ್ಪ.ಬಿ., ವೀಣಾ ಕಿಶೋರ್, ರೂಪಾ, ಅರುಣ್ ದೀಕ್ಷಿತ್, ಸಂಜೀವ್ ಇತರರಿದ್ದರು.
