ಜೀವರಾಶಿ ಪ್ರಾರಂಭ ವಾಗಿರುವುದೇ ಪ್ರಕೃತಿಯಿಂದ, ಅದನ್ನು ಸುಸ್ತಿತಿಯಲ್ಲಿ ಇಟ್ಟು ಕೊಳ್ಳದೇ ಹೋದರೆ, ವಿಶ್ವದಲ್ಲಿ ಯಾವ ಜೀವಿಯು ಉಳಿಯುವುದಿಲ್ಲ. ನಾವು
ಮುಂದಿನ ಪೀಳಿಗೆಗೆ ಉಳಿಸಿಕೊಡುವ ಪ್ರಕೃತಿಯೇ, ಜೀವನ ಕಟ್ಟಿಕೊಳ್ಳಲು ಉತ್ತಮ ಕೊಡುಗೆ ಎಂದು ಸಹಾಯಕ ಅರಣ್ಯಾಧಿಕಾರಿ ರವೀಂದ್ರನಾಯ್ಕ್, ಶಿಕಾರಿಪುರದ ಯೂತ್ ಹಾಸ್ಟೆಲ್ಸ್ ಕುಮುದ್ವತಿ ಘಟಕ ಆಯೋಜಿಸಿದ್ದ ವಿಶ್ವ ಪರಿಸರ ದಿನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲಾ ದೇಶಗಳಲ್ಲಿಯೂ ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ನಮ್ಮ ದೇಶದಲ್ಲಿ ಜನಸಂಖ್ಯೆ ಸ್ಪೋಟದಿಂದ ಸ್ವಲ್ಪ ಹಿನ್ನಡೆ ಯಾಗಿದೆ. ನಾವೇಲ್ಲರು ಎಚ್ಚೆತ್ತು ಇಂದಿನಿಂದಲೇ ಪ್ರಕೃತಿ ಉಳಿಸುವ ವಾಗ್ದಾನ ಮಾಡೋಣ, ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸಿ ಕೊಟ್ಟರೆ ಸಾಕು, ಅವರು ಜೀವನ ಕಟ್ಟಿಕೊಳ್ಳುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಿರೀಶ್ ಕುಮಾರ್ ಮಾತನಾಡುತ್ತ, ನಮ್ಮ ಪೂರ್ವಜರು ನಮಗೆ ಅತ್ಯ ಅಮೂಲ್ಯ ಕೊಡುಗೆಯಾಗಿ ಪರಿಸರ ನೀಡಿದ್ದರು. ಆದರೆ ಆಧುನಿಕತೆ ಬೆಳೆದಂತೆ, ಅದರ ಬೆನ್ನತ್ತಿ ನಮ್ಮ ನಾಡನ್ನೇ ನಾವೆಲ್ಲರೂ ಸೇರಿ ನಾಶ ಮಾಡುತ್ತಿದ್ದೇವೆ. ಕಾಡು ಕಡಿಯುವುದನ್ನು ನೋಡಿ ಸುಮ್ಮನ್ನಿರುವುದು ನಾವೇ ಮರ ಕಡಿದಂತೆ. ಆದ್ದರಿಂದ ಎಲ್ಲರೂ ಪ್ರಕೃತಿ ರಕ್ಷಣೆಗೆ ಪಣ ತೊಡೋಣ ಆದಷ್ಟು ಸಸಿ ನೆಟ್ಟು ಆಗಿರುವ ನಷ್ಟವನ್ನು ಸರಿ ತೂಗಿಸಲು ಪ್ರಯತ್ನಿಸೋಣ ಎಂದರು.
ಪ್ರಸ್ಥಾವಿಕವಾಗಿ ಮಾತನಾಡಿದ ಯೂತ್ ಹಾಸ್ಟೆಲ್ಸ್ ರಾಜ್ಯ ಘಟಕದ ಛೇರ್ಮನ್ ಸುದರ್ಶನ್ ಪೈ ಯೂತ್ ಹಾಸ್ಟೆಲ್ ರಾಷ್ಟ್ರಾದ್ಯಂತ ಪ್ರಕೃತಿಯೊಂದಿಗೆ ಬೆರೆಯುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತದೆ. ಇದರಿಂದ ದೇಹಕ್ಕೆ ಹಸುವು, ಮನಃಶಾಂತಿ ದೊರಕುತ್ತದೆ ಮತ್ತು ಆರೋಗ್ಯವು ಸುದಾರಿಸುತ್ತದೆ. ಎಲ್ಲರೂ ಸದಸ್ಯಸತ್ವಪಡೆದು, ಚಾರಣದ ಸವಿ ಸವಿಯಬೇಕೆಂದು ಕೋರಿದರು.
ಕಾರ್ಯದರ್ಶಿ ಮಂಜುನಾಥ್ ಸ್ವಾಗತಿಸಿದರು, ಪುಟ್ಟಣ್ಣ ವಂದಿಸಿದರು, ರಾಜ್ಯ ಖಚಾಂಚಿ ಜಯರಾಮ್ ಪೂಜಾರಿ,
ಗೋಕುಲ್ ಹೊಂಡ ಸಿಬ್ಬಂದಿ, ಮುರುಳಿಧರ್ ನಗರದ ನಾಗರೀಕರು ಭಾಗವಹಿಸಿದ್ದರು.
