ಮಧ್ಯಮ ದರ್ಜೆಯ ಬುದ್ಧಿಮಾಂದ್ಯ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಚಿತವಾಗಿ ತರಬೇತಿ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಕಳೆದ 45ವರ್ಷಗಳಿಂದ ತೊಡಗಿಸಿಕೊಂಡು ಬಂದಿರುವ ವಿದ್ಯಾನಗರದ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇಲ್ಲಿಯವರೆಗೆ ಸುಮಾರು 2ಸಾವಿರಕ್ಕೂ ಹೆಚ್ಚು ಬುದ್ಧಿಮಾಂದ್ಯ ವಿದ್ಯಾರ್ಥಿಗಳು ತಮ್ಮ ಸ್ವಂತಿಗೆಯಿಂದ ಮತ್ತೊಬ್ಬರಿಗೆ ಹೊರೆಯಾಗದಂತೆ ಸಮಾಜದಲ್ಲಿ ಭಾಳ್ವೆ ಮಾಡುತ್ತಿದ್ದಾರೆ. ಹಾಗೂ ಶಾಲೆಯಲ್ಲಿನ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಪ್ರವೇಶಕ್ಕೆ 6ರಿಂದ 18ವರ್ಷದ ಒಳಗಿನ ಬುದ್ಧಿಮಾಂದ್ಯ ಮಕ್ಕಳು ಅರ್ಹರಾಗಿದ್ದು, ದಾಖಲಾತಿ ಪ್ರಾರಂಭವಾಗಿದೆ. ಅರ್ಜಿಯನ್ನು ಜೂ. 30ರೊಳಗೆ ಶಾಲೆಯ ಕಛೇರಿಯಲ್ಲಿ ಪಡೆಯಲು ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿಗಳಾದ ಎ. ಮಂಜುನಾಥ್ ಕೋರಿದ್ದಾರೆ.
ರೋಟರಿ 75ನೇ ವಾರ್ಷಿಕ ದತ್ತಿ ನಿದಿ, ರೋಟರಿಕ್ಲಬ್ ಅವರ ಪ್ರಾಯೋಜಕತ್ವ ಹಾಗೂ ಜಿ.ಪಂ. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅನುದಾನದೊಂದಿಗೆ ನಡೆಸಲಾಗುತ್ತಿರುವ ಈ ಸಂಸ್ಥೆಗೆ ಬುದ್ದಿ ಮಾಂಧ್ಯ ಮಕ್ಕಳನ್ನು ಸೇರಬಯಸುವವರು ಮಾಹಿತಿಗೆ ಅಧ್ಯಕ್ಷರಾದ ಡಾ| ರಜನಿ.ಎ.ಪೈ, ಮೊ. 94482 88487, ಎ. ಮಂಜುನಾಥ್ ಮೊ. 98440 55267, ಮುಖ್ಯೋಪಾಧ್ಯಾಯ ಎಂ. ಚಂದ್ರಯ್ಯ ಮೊ. 99457 97120ರಲ್ಲಿ ಸಂಪರ್ಕಿಸಿ.
