Sunday, June 7, 2026
Sunday, June 7, 2026

ರಾಜ್ಯಮಟ್ಟದ ಮೊದಲನೇ ರ್ಯಾಕಿಂಗ್ ಸ್ಪರ್ಧೆ:ಶಿವಮೊಗ್ಗದ ಮೂವರಿಗೆ ಪದಕ ಗೌರವ

Date:

ತುಮಕೂರಿನ ಚಿಕ್ಕಹಳ್ಳಿ ಸ್ಪೂರ್ತಿ ಸ್ಮಾರ್ಟ್ ಸಿಟಿ ಲೇ ಔಟ್ ನಲ್ಲಿ ನಡೆದ ರಾಜ್ಯಮಟ್ಟದ ಸೀಜನ್ ನ ಮೊದಲನೇ ರ್ಯಾಕಿಂಗ್ (ranking) ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಮೂವರು ಕ್ರೀಡಾಪಟುಗಳು ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿ, ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಸಂಸ್ಥೆಯ ಅದ್ವಿಕಾ ನಾಯರ್ ಅವರು ರೋಡ್ 1, ರೋಡ್ 2 ನಲ್ಲಿ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದಾರೆ. ಅದ್ವಿಕಾ ಅವರು ಆರ್. ಎಲ್. ರಂಜಿತ್ ಹಾಗೂ ಗಾಯತ್ರಿ ಅವರ ಪುತ್ರಿ.

ಅಂತೆಯೇ ವೇದಾಂಶ್ ಗಣೇಂದ್ರ ಪರಡಿ ಅವರು ರೋಡ್ 2, ರೋಡ್ 3 ರೇಸ್ ನಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ. ವೇಧಾಂಶವು ಅವರು ಗಣೇಂದ್ರ ಪರಡಿ ಹಾಗೂ ಶಾಲಿನಿ ಪರಡಿ ಅವರ ಪುತ್ರ.
ಈ ಇಬ್ಬರು ಕ್ರೀಡಾಟುಗಳು ಪೋದಾರ್ ಇಂಟರ್ ನ್ಯಾಷನಲ್ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ.
ಆರು ವರ್ಷದೊಳಗಿನ ವಯೋಮಿತಿಯ ರೋಡ್1, ರೋಡ್2 ಪಂದ್ಯದಲ್ಲಿ ಪುನರ್ವಿಕ ಪ್ರವೀಣ್ ಅವರು ಎರಡು ಕಂಚಿನ ಪದಕ ಪಡೆದಿದ್ದಾರೆ. ಪುನರ್ವಿಕ ಪ್ರವೀಣ್ ಕುಮಾರ್ ಹೆಚ್, ಪ್ರಿಯಾಂಕಾ ಎಂ.ಎಸ್. ಅವರ ಪುತ್ರಿ. ಜ್ಣಾನದೀಪ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ.
ಈ ಮೂವರು ಕ್ರೀಡಾಪಟುಗಳು ತರಬೇತುದಾರರಾದ ವಿಶ್ವಾಸ್ ಹಾಗೂ ಆತೀಶ್ ಗರಡಿಯಲ್ಲಿ ಕಲಿಯುತ್ತಿದ್ದಾರೆ.
ಅಭಿನಂದನೆ:
ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಎಂ ರವಿ, ಪದಾದಿಕಾರಿ ಎಸ್. ಕೆ. ಗಜೇಂದ್ರ ಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00...

DK Shivakumar ಕೆಂಪೇಗೌಡ ದಿನಾಚರಣೆಯಂದು 15 ಲಕ್ಷ ಸಸಿನೆಡುವ ವಿಶೇಷ ಕಾರ್ಯಕ್ರಮ- ಸೀಎಂ ಡಿ.ಕೆ.ಶಿವಕುಮಾರ್

DK Shivakumar ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ...

World Environment Day ಪರಿಸರ ಮಾಲಿನ್ಯ ರಕ್ಷಣೆಗೆ ಕೃತಕ‌ ಬುದ್ಧಿಮತ್ತೆ ಬಳಕೆ ಅಗತ್ಯ- ಜಿ.ಎ.ಹಿರೇಮಠ್.

World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ,...