Thursday, September 10, 2026
Thursday, September 10, 2026

ಯೋಗ ಪ್ರಾಣಾಯಾಮಗಳು ನಮ್ಮ ಪ್ರತಿನಿತ್ಯದ ಅವಿಭಾಜ್ಯ ಅಂಗವಾಗಬೇಕು- ಡಾ.ಸಿ.ವಿ.ರುದ್ರಾರಾಧ್ಯ

Date:

ಶಿವಮೊಗ್ಗದ ವಿನೋಬನಗರ -ಕಾಶಿಪುರದ ಕಲ್ಲಳ್ಳಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಮುಖ್ಯ ಕಚೇರಿ ಯಲ್ಲಿ 38 ಕೇಂದ್ರದ ಶಿಕ್ಷಕರಿಗೆ ಹಾಗೂ ತರಬೇತುದಾರರಿಗೆ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಧಾ ಡಾ. ಸಿವಿ ರುದ್ರಾರಾಧ್ಯರು ಮಾತನಾಡಿದರು.

ಒತ್ತಡದ ಪ್ರಪಂಚದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ ಪ್ರತಿನಿತ್ಯ ಅನಾವು ಸೇವಿಸುವ ಆಹಾರದಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಹಾಗೂ ನಾರಿನಂಶ ಇದೆ ಎಂಬುದನ್ನು ಅರಿತುಕೊಳ್ಳಬೇಕು ಹಾಗೆ ಪ್ರತಿನಿತ್ಯ ಸಕಾರಾತ್ಮಕ ಭಾವನೆಯಿಂದ ನಮ್ಮ ಜೀವನ ಶೈಲಿಯನ್ನು ಮುಂದುವರಿಸುವುದರ ಜೊತೆಗೆ ಯೋಗ ಪ್ರಾಣಾಯಾಮ ಧ್ಯಾನ ಇವುಗಳು ನಮ್ಮ ಪ್ರತಿನಿತ್ಯದ ಅವಿಭಾಜ್ಯ ಅಂಗವಾಗಬೇಕು‌. ಇತ್ತೀಚಿನ ವರದಿಗಳ ಪ್ರಕಾರ ಯೋಗ ಪ್ರಾಣಾಯಾಮ ಧ್ಯಾನ ಮಾಡುವವರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಣುವುದಿಲ್ಲ ಅವರು ಸದಾ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಪೋಷಕರು ಬಾಲ್ಯದಲ್ಲೇ ತಮ್ಮ ಮಕ್ಕಳಿಗೆ ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿಸಿದರೆ ಯಾವ ಕಾಯಿಲೆಗಳು ಸಹ ಅವರ ಬಳಿ ಸುಳಿಯುವುದಿಲ್ಲ ಹಾಗೆ ನಮ್ಮ ಟ್ರಸ್ಟಿಗಳು ಮತ್ತು ಯೋಗ ಬಂಧುಗಳು ಹಾಗೂ ಶಿಕ್ಷಕರ ಸಹಕಾರದಿಂದ ಇಂದು ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಸಾವಿರಾರು ಜನರು ಯೋಗ ಪ್ರಾಣಾಯಾಮ ಧ್ಯಾನವನ್ನು ಅಭ್ಯಾಸ ಮಾಡುತ್ತಾ ಆರೋಗ್ಯವಂತರಾಗಿ ಸಂಸಾರ ನಡೆಸುತ್ತಿದ್ದಾರೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರಯ್ಯನವರು ಮಾತನಾಡುತ್ತಾ ನಮ್ಮ ಶಿವಗಂಗಾ ಯುವ ಕೇಂದ್ರ ವಿದೇಶದಲ್ಲಿಯೂ ಸಹ ಮನೆ ಮಾತಾಗಿದೆ ಹಾಗೆ ಪ್ರತಿಯೊಂದು ಕ್ಷೇತ್ರಗಳನ್ನು ಸಹ ತರಬೇತಿ ಬಹಳ ಮುಖ್ಯ ಶಿಕ್ಷಕರು ಪರಿಪಕ್ವವಾಗಿ ತರಬೇತಿಯನ್ನು ಪಡೆದರೆ ಶಿಬಿರಾರ್ಥಿಗಳಿಗೆ. ಅಭ್ಯಾಸ ಮಾಡಿಸಲು ಉತ್ತಮವಾಗುತ್ತದೆ ಯೋಗ ಪ್ರಾಣಾಯಾಮ ಧ್ಯಾನವನ್ನು ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡದಿದ್ದರೆ ಅಡ್ಡ ಪರಿಣಾಮಗಳು ಆಗುತ್ತದೆ ಆದ್ದರಿಂದ ತರಬೇತಿಗಳು ಹೆಚ್ಚು ಮಹತ್ವವನ್ನು ಪಡೆದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ 38 ಯೋಗ ಕೇಂದ್ರದ ಶಿಕ್ಷಕರು ಸಹ ಶಿಕ್ಷಕರು ಹಾಗೂ ಶಿವರಾತ್ರಿಗಳು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಯೋಗ ಶಿಕ್ಷಕರಾದ ಶ್ರೀಕಾಂತ್ ಅವರಿಂದ ಒಂದು ಗಂಟೆಗಳ ಕಾಲ ಯೋಗ ಧ್ಯಾನ ನಡೆಯಿತು. ಶಿಬಿರದಲ್ಲಿ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್. ಹರೀಶ್. ಹಾಗೂ ಜಿ ವಿಜಯಕುಮಾರ್. ಲವಕುಮಾರ್ ನಾಗರತ್ನಮ್ಮ ಚಂದ್ರಶೇಖರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...