Monday, June 1, 2026
Monday, June 1, 2026

ಯೋಗ ಪ್ರಾಣಾಯಾಮಗಳು ನಮ್ಮ ಪ್ರತಿನಿತ್ಯದ ಅವಿಭಾಜ್ಯ ಅಂಗವಾಗಬೇಕು- ಡಾ.ಸಿ.ವಿ.ರುದ್ರಾರಾಧ್ಯ

Date:

ಶಿವಮೊಗ್ಗದ ವಿನೋಬನಗರ -ಕಾಶಿಪುರದ ಕಲ್ಲಳ್ಳಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಮುಖ್ಯ ಕಚೇರಿ ಯಲ್ಲಿ 38 ಕೇಂದ್ರದ ಶಿಕ್ಷಕರಿಗೆ ಹಾಗೂ ತರಬೇತುದಾರರಿಗೆ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಧಾ ಡಾ. ಸಿವಿ ರುದ್ರಾರಾಧ್ಯರು ಮಾತನಾಡಿದರು.

ಒತ್ತಡದ ಪ್ರಪಂಚದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ ಪ್ರತಿನಿತ್ಯ ಅನಾವು ಸೇವಿಸುವ ಆಹಾರದಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಹಾಗೂ ನಾರಿನಂಶ ಇದೆ ಎಂಬುದನ್ನು ಅರಿತುಕೊಳ್ಳಬೇಕು ಹಾಗೆ ಪ್ರತಿನಿತ್ಯ ಸಕಾರಾತ್ಮಕ ಭಾವನೆಯಿಂದ ನಮ್ಮ ಜೀವನ ಶೈಲಿಯನ್ನು ಮುಂದುವರಿಸುವುದರ ಜೊತೆಗೆ ಯೋಗ ಪ್ರಾಣಾಯಾಮ ಧ್ಯಾನ ಇವುಗಳು ನಮ್ಮ ಪ್ರತಿನಿತ್ಯದ ಅವಿಭಾಜ್ಯ ಅಂಗವಾಗಬೇಕು‌. ಇತ್ತೀಚಿನ ವರದಿಗಳ ಪ್ರಕಾರ ಯೋಗ ಪ್ರಾಣಾಯಾಮ ಧ್ಯಾನ ಮಾಡುವವರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಾಣುವುದಿಲ್ಲ ಅವರು ಸದಾ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ ಪೋಷಕರು ಬಾಲ್ಯದಲ್ಲೇ ತಮ್ಮ ಮಕ್ಕಳಿಗೆ ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿಸಿದರೆ ಯಾವ ಕಾಯಿಲೆಗಳು ಸಹ ಅವರ ಬಳಿ ಸುಳಿಯುವುದಿಲ್ಲ ಹಾಗೆ ನಮ್ಮ ಟ್ರಸ್ಟಿಗಳು ಮತ್ತು ಯೋಗ ಬಂಧುಗಳು ಹಾಗೂ ಶಿಕ್ಷಕರ ಸಹಕಾರದಿಂದ ಇಂದು ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉಚಿತವಾಗಿ ಸಾವಿರಾರು ಜನರು ಯೋಗ ಪ್ರಾಣಾಯಾಮ ಧ್ಯಾನವನ್ನು ಅಭ್ಯಾಸ ಮಾಡುತ್ತಾ ಆರೋಗ್ಯವಂತರಾಗಿ ಸಂಸಾರ ನಡೆಸುತ್ತಿದ್ದಾರೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರಯ್ಯನವರು ಮಾತನಾಡುತ್ತಾ ನಮ್ಮ ಶಿವಗಂಗಾ ಯುವ ಕೇಂದ್ರ ವಿದೇಶದಲ್ಲಿಯೂ ಸಹ ಮನೆ ಮಾತಾಗಿದೆ ಹಾಗೆ ಪ್ರತಿಯೊಂದು ಕ್ಷೇತ್ರಗಳನ್ನು ಸಹ ತರಬೇತಿ ಬಹಳ ಮುಖ್ಯ ಶಿಕ್ಷಕರು ಪರಿಪಕ್ವವಾಗಿ ತರಬೇತಿಯನ್ನು ಪಡೆದರೆ ಶಿಬಿರಾರ್ಥಿಗಳಿಗೆ. ಅಭ್ಯಾಸ ಮಾಡಿಸಲು ಉತ್ತಮವಾಗುತ್ತದೆ ಯೋಗ ಪ್ರಾಣಾಯಾಮ ಧ್ಯಾನವನ್ನು ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡದಿದ್ದರೆ ಅಡ್ಡ ಪರಿಣಾಮಗಳು ಆಗುತ್ತದೆ ಆದ್ದರಿಂದ ತರಬೇತಿಗಳು ಹೆಚ್ಚು ಮಹತ್ವವನ್ನು ಪಡೆದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ 38 ಯೋಗ ಕೇಂದ್ರದ ಶಿಕ್ಷಕರು ಸಹ ಶಿಕ್ಷಕರು ಹಾಗೂ ಶಿವರಾತ್ರಿಗಳು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಯೋಗ ಶಿಕ್ಷಕರಾದ ಶ್ರೀಕಾಂತ್ ಅವರಿಂದ ಒಂದು ಗಂಟೆಗಳ ಕಾಲ ಯೋಗ ಧ್ಯಾನ ನಡೆಯಿತು. ಶಿಬಿರದಲ್ಲಿ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್. ಹರೀಶ್. ಹಾಗೂ ಜಿ ವಿಜಯಕುಮಾರ್. ಲವಕುಮಾರ್ ನಾಗರತ್ನಮ್ಮ ಚಂದ್ರಶೇಖರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ದೇಗುಲದ ವಾಸ್ತು- ವಿನ್ಯಾಸ ಮತ್ತು ಮನುಷ್ಯ ಶರೀರ, ಒಂದು ವಿವೇಚನೆ ...

Klive Special Article ದೇವಸ್ಥಾನದ ವಾಸ್ತುಶಿಲ್ಪ ಮತ್ತು ಮಾನವ ಶರೀರ ರಚನೆಯ...

B.Y. Raghavendra ದೇಶದ ತಳಮಟ್ಟದ ಸಾಧಕರ ಯಶಸ್ಸಿನ ಕತೆ ತಿಳಿಸುವ ಪ್ರಧಾನಿ ಮೋದಿ ಅವರ “ಮನ್ ಕಿ ಬಾತ್”- ಬಿ.ವೈ.ರಾಘವೇಂದ್ರ

B.Y. Raghavendra ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಸಾರ್ವಜನಿಕರೊಂದಿಗೆ...