ಈ ವರ್ಷ ಪೂಜ್ಯ ಶಾಸ್ತ್ರೀಜಿಯವರ ಜಯಂತಿಯನ್ನು ಎರಡು ದಿನ ಆಚರಿಸಲಾಗುತ್ತದೆ.
ಮೊದಲಿಗೆ 22-05-2026ರಂದು ಬೆಳಗೆರೆಯಲ್ಲಿ ಅವರ ಸ್ಮಾರಕದ ಗಡಿಸಲಿನಲ್ಲಿ ಬೆಳಗ್ಗೆ 10-30ಕ್ಕೆ ಸರ್ವ ಸಿಬ್ಬಂದಿಗಳು ಶಾಸ್ತ್ರೀಜಿಯವರಿಗೆ ಮಾಲಾರ್ಪಣೆ ಮಾಡಿ ನುಡಿನಮನ ಸಲ್ಲಿಸುತ್ತಾರೆ. ಜೊತೆಗೆ ಉಪಸ್ಥತರೆಲ್ಲರೂ ಶಾಸ್ತ್ರಿಗಳು ಉದ್ದೇಶಿಸಿದಂತೆ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಅರ್ಥಪೂರ್ಣವಾಗಿ, ಆಚರಿಸುವ ಸಂಕಲ್ಪ ದೀಕ್ಷಿತರಾಗುತ್ತಾರೆ.
ಎರಡನೆಯದಾಗಿ ಶಾಸ್ತ್ರೀಜಿಯವರ ಕರ್ಮಶೀಲತೆಗೆ 1990ರ ದಶಕದ ನಂತರ ಒಂದು ಆರ್ಥಿಕ ಹಾಗೂ ಸಾತ್ವಿಕ ಚೈತನ್ಯ ಒದಗಿಸಿದ್ದು ದಾವಣಗೆರೆಯ ಅಭಿಮಾನಿಗಳ ಬಳಗ. ಹಾಗಾಗಿ ಶಾಸ್ತ್ರೀಜಿಯವರಿಗೆ ಅದು ಅತ್ಯಂತ ಆತ್ಮೀಯ ತಾಣವಾಗಿತ್ತು. ಆದ್ದರಿಂದ ಅವರಿಗೆ ಸಂಬಂಧಿಸಿದ ಅನೇಕ ಪ್ರಮುಖ ಕಾರ್ಯಕ್ರಮಗಳಾದ ʼನಾನಿದ್ದೂ ನನ್ನದೇನಿಲ್ಲʼ, ಪುಸ್ತಕ ಬಿಡುಗಡೆ., ಅವರ ನೂರು ವರ್ಷದ ವರ್ಧಂತಿಯ ಆಚರಣೆ, ಅವರ ಸಮಗ್ರ ಸಾಹಿತ್ಯವನ್ನೊಳಗೊಂಡ ʼನೂರರ ನೆನಪುʼ ಪುಸ್ತಕ ಬಿಡುಗಡೆ. ಇದೆಲ್ಲದರ ಜೊತೆಗೆ ಪ್ರತಿವರ್ಷ 22-5ರ ಸಂಜೆ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಬೆಳಗೆರೆಯಲ್ಲಿ ಕೃಷ್ಣಶಾಸ್ತ್ರಿಗಳ 111 ನೇ ಜಯಂತಿಗೆ ಸಿದ್ಧತೆ
Date:
