Wednesday, September 16, 2026
Wednesday, September 16, 2026

Karnataka Yakshagana Academy ಶೃಂಗೇರಿಯಲ್ಲಿ ಮೇ4 ರಂದು ಯಕ್ಷಗಾನ ಉತ್ಸವ

Date:

Karnataka Yakshagana Academy ಶೃಂಗೇರಿಯ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್ ಇವರು ಪ್ರದರ್ಶನ ಕಲೆಗಳ ಸಂವರ್ಧನೆ ಮತ್ತು ಸಂರಕ್ಷಣೆ ಉದ್ದೇಶದಿಂದ ಮಲೆನಾಡು ಮತ್ತು ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಯಕ್ಷಗಾನ ಉತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ.
ಈ ಟ್ರಸ್ಟ್ ನ ಮತ್ತು ಉತ್ಸವದ ರೂವಾರಿ , ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ರಮೇಶ್ ಬೇಗಾರ್ ಇವರ ಸಾಂಸ್ಕೃತಿಕ ಪಯಣ ದ 40 ನೇ ವರ್ಷದ ಈ ಯಕ್ಷಗಾನ ಉತ್ಸವವು 2026 ರ ಮೇ 4 ರ ಸೋಮವಾರದಂದು ಶೃಂಗೇರಿ ಮಾನುಗಾರಿನಲ್ಲಿರುವ ಜ್ಞಾನಭಾರತೀ ಶಾಲಾ ಮೈದಾನದಲ್ಲಿ ರಾತ್ರಿ 7 ರಿಂದ ಆಯೋಜಿಸಲಾಗಿದೆ.
Karnataka Yakshagana Academy ಬಡಗುತಿಟ್ಟಿನ ಪ್ರಸಿದ್ದ ವೃತ್ತಿಪರ ಯಕ್ಷಗಾನ ತಂಡವಾದ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಪೆರ್ಡೂರು ಇವರು ಪೌಂಡ್ರಕ ವಾಸುದೇವ, ಲಂಕಾ ದಹನ ಮತ್ತು ಕಾರ್ತವೀರ್ಯ – ರಾವಣ ಕಾಳಗ ಎಂಬ ಮೂರು ಪೌರಾಣಿಕ ಪ್ರಸಂಗಗಳನ್ನು ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರ ಭಾಗವತಿಕೆ ಮತ್ತು ಪ್ರಧಾನ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಪ್ರದರ್ಶನದಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಪೌಂಡ್ರಕ ವಾಸುದೇವ ನ ಪಾತ್ರವನ್ನೂ, ನಿಲ್ಕೋಡು ಶಂಕರ ಹೆಗ್ಡೆ ಹನುಮಂತ ನ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದ್ದು, ಈ ಪ್ರದರ್ಶನ ದಲ್ಲಿ ಬಾಳ್ಕಲ್ ಪ್ರಸನ್ನ ಭಟ್, ಯಲಗುಪ್ಪ ಸುಬ್ರಮಣ್ಯ, ಚಂದ್ರಹಾಸ ಗೌಡ ಹೊಸ ಪಟ್ಟಣ , ಕಾರ್ತಿಕ್ ಚಿಟ್ಟಾಣಿ ಮೊದಲಾದ ಪ್ರತಿಭಾವಂತ ಕಲಾವಿದರ ದಂಡು ಈ ಪ್ರದರ್ಶನದಲ್ಲಿ ಪೌರಾಣಿಕ ವೈಭವ ವನ್ನು ರಂಗಕ್ಕೆ ತರಲಿದ್ದಾರೆ. ಹೆಚ್ಚಿನ ಮಾಹಿತಿಗೆ ರಮೇಶ್ ಬೇಗಾರ್ ಇವರನ್ನು 9448101708 ಮೂಲಕ ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...