Thursday, June 18, 2026
Thursday, June 18, 2026

Karnataka Yakshagana Academy ಶೃಂಗೇರಿಯಲ್ಲಿ ಮೇ4 ರಂದು ಯಕ್ಷಗಾನ ಉತ್ಸವ

Date:

Karnataka Yakshagana Academy ಶೃಂಗೇರಿಯ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್ ಇವರು ಪ್ರದರ್ಶನ ಕಲೆಗಳ ಸಂವರ್ಧನೆ ಮತ್ತು ಸಂರಕ್ಷಣೆ ಉದ್ದೇಶದಿಂದ ಮಲೆನಾಡು ಮತ್ತು ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಯಕ್ಷಗಾನ ಉತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ.
ಈ ಟ್ರಸ್ಟ್ ನ ಮತ್ತು ಉತ್ಸವದ ರೂವಾರಿ , ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ರಮೇಶ್ ಬೇಗಾರ್ ಇವರ ಸಾಂಸ್ಕೃತಿಕ ಪಯಣ ದ 40 ನೇ ವರ್ಷದ ಈ ಯಕ್ಷಗಾನ ಉತ್ಸವವು 2026 ರ ಮೇ 4 ರ ಸೋಮವಾರದಂದು ಶೃಂಗೇರಿ ಮಾನುಗಾರಿನಲ್ಲಿರುವ ಜ್ಞಾನಭಾರತೀ ಶಾಲಾ ಮೈದಾನದಲ್ಲಿ ರಾತ್ರಿ 7 ರಿಂದ ಆಯೋಜಿಸಲಾಗಿದೆ.
Karnataka Yakshagana Academy ಬಡಗುತಿಟ್ಟಿನ ಪ್ರಸಿದ್ದ ವೃತ್ತಿಪರ ಯಕ್ಷಗಾನ ತಂಡವಾದ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಪೆರ್ಡೂರು ಇವರು ಪೌಂಡ್ರಕ ವಾಸುದೇವ, ಲಂಕಾ ದಹನ ಮತ್ತು ಕಾರ್ತವೀರ್ಯ – ರಾವಣ ಕಾಳಗ ಎಂಬ ಮೂರು ಪೌರಾಣಿಕ ಪ್ರಸಂಗಗಳನ್ನು ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರ ಭಾಗವತಿಕೆ ಮತ್ತು ಪ್ರಧಾನ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಪ್ರದರ್ಶನದಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಪೌಂಡ್ರಕ ವಾಸುದೇವ ನ ಪಾತ್ರವನ್ನೂ, ನಿಲ್ಕೋಡು ಶಂಕರ ಹೆಗ್ಡೆ ಹನುಮಂತ ನ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದ್ದು, ಈ ಪ್ರದರ್ಶನ ದಲ್ಲಿ ಬಾಳ್ಕಲ್ ಪ್ರಸನ್ನ ಭಟ್, ಯಲಗುಪ್ಪ ಸುಬ್ರಮಣ್ಯ, ಚಂದ್ರಹಾಸ ಗೌಡ ಹೊಸ ಪಟ್ಟಣ , ಕಾರ್ತಿಕ್ ಚಿಟ್ಟಾಣಿ ಮೊದಲಾದ ಪ್ರತಿಭಾವಂತ ಕಲಾವಿದರ ದಂಡು ಈ ಪ್ರದರ್ಶನದಲ್ಲಿ ಪೌರಾಣಿಕ ವೈಭವ ವನ್ನು ರಂಗಕ್ಕೆ ತರಲಿದ್ದಾರೆ. ಹೆಚ್ಚಿನ ಮಾಹಿತಿಗೆ ರಮೇಶ್ ಬೇಗಾರ್ ಇವರನ್ನು 9448101708 ಮೂಲಕ ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...