Sunday, August 2, 2026
Sunday, August 2, 2026

Karnataka Yakshagana Academy ಶೃಂಗೇರಿಯಲ್ಲಿ ಮೇ4 ರಂದು ಯಕ್ಷಗಾನ ಉತ್ಸವ

Date:

Karnataka Yakshagana Academy ಶೃಂಗೇರಿಯ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್ ಇವರು ಪ್ರದರ್ಶನ ಕಲೆಗಳ ಸಂವರ್ಧನೆ ಮತ್ತು ಸಂರಕ್ಷಣೆ ಉದ್ದೇಶದಿಂದ ಮಲೆನಾಡು ಮತ್ತು ಬೆಂಗಳೂರಿನಲ್ಲಿ ಪ್ರತಿ ವರ್ಷವೂ ಯಕ್ಷಗಾನ ಉತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ.
ಈ ಟ್ರಸ್ಟ್ ನ ಮತ್ತು ಉತ್ಸವದ ರೂವಾರಿ , ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ರಮೇಶ್ ಬೇಗಾರ್ ಇವರ ಸಾಂಸ್ಕೃತಿಕ ಪಯಣ ದ 40 ನೇ ವರ್ಷದ ಈ ಯಕ್ಷಗಾನ ಉತ್ಸವವು 2026 ರ ಮೇ 4 ರ ಸೋಮವಾರದಂದು ಶೃಂಗೇರಿ ಮಾನುಗಾರಿನಲ್ಲಿರುವ ಜ್ಞಾನಭಾರತೀ ಶಾಲಾ ಮೈದಾನದಲ್ಲಿ ರಾತ್ರಿ 7 ರಿಂದ ಆಯೋಜಿಸಲಾಗಿದೆ.
Karnataka Yakshagana Academy ಬಡಗುತಿಟ್ಟಿನ ಪ್ರಸಿದ್ದ ವೃತ್ತಿಪರ ಯಕ್ಷಗಾನ ತಂಡವಾದ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಪೆರ್ಡೂರು ಇವರು ಪೌಂಡ್ರಕ ವಾಸುದೇವ, ಲಂಕಾ ದಹನ ಮತ್ತು ಕಾರ್ತವೀರ್ಯ – ರಾವಣ ಕಾಳಗ ಎಂಬ ಮೂರು ಪೌರಾಣಿಕ ಪ್ರಸಂಗಗಳನ್ನು ಜನ್ಸಾಲೆ ರಾಘವೇಂದ್ರ ಆಚಾರ್ಯ ಇವರ ಭಾಗವತಿಕೆ ಮತ್ತು ಪ್ರಧಾನ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಪ್ರದರ್ಶನದಲ್ಲಿ ಪ್ರಸಿದ್ಧ ಹಾಸ್ಯ ಕಲಾವಿದ ರವೀಂದ್ರ ದೇವಾಡಿಗ ಪೌಂಡ್ರಕ ವಾಸುದೇವ ನ ಪಾತ್ರವನ್ನೂ, ನಿಲ್ಕೋಡು ಶಂಕರ ಹೆಗ್ಡೆ ಹನುಮಂತ ನ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದ್ದು, ಈ ಪ್ರದರ್ಶನ ದಲ್ಲಿ ಬಾಳ್ಕಲ್ ಪ್ರಸನ್ನ ಭಟ್, ಯಲಗುಪ್ಪ ಸುಬ್ರಮಣ್ಯ, ಚಂದ್ರಹಾಸ ಗೌಡ ಹೊಸ ಪಟ್ಟಣ , ಕಾರ್ತಿಕ್ ಚಿಟ್ಟಾಣಿ ಮೊದಲಾದ ಪ್ರತಿಭಾವಂತ ಕಲಾವಿದರ ದಂಡು ಈ ಪ್ರದರ್ಶನದಲ್ಲಿ ಪೌರಾಣಿಕ ವೈಭವ ವನ್ನು ರಂಗಕ್ಕೆ ತರಲಿದ್ದಾರೆ. ಹೆಚ್ಚಿನ ಮಾಹಿತಿಗೆ ರಮೇಶ್ ಬೇಗಾರ್ ಇವರನ್ನು 9448101708 ಮೂಲಕ ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...