Friday, April 24, 2026
Friday, April 24, 2026

ಅಣ್ಣಾವ್ರ ನೆನಪು…

Date:

ಡಾ.ಸುಧೀಂದ್ರ. ಕೆಲೈವ್.ನ್ಯೂಸ್

ಬೆಳ್ಳಿ ಎಂದರೆ ಅದೂ ನಾಚುತ್ತದೆ.
ನಿಮ್ಮ ನಗೆಗೆ.
ಚಿನ್ನವೆನ್ನಲೆ ಅದೂ ಅಷ್ಟೆ ಕರಗಿ ನೀರು.
ಇನ್ನೆನ್ನಲಿ
ವಜ್ರವೆ…!?
ನೀವಷ್ಟು ಕಠಿಣವಲ್ಲ…ll1.ll

ಚಂದಿರನೆ ಮುಖದಲ್ಲಿ.
ಕಣ್ಗಳಲಿ ರವಿತೇಜ.
ನುಡಿದರೆ ಕನ್ನಡಮುತ್ತು
ಉರುಳುರುಳಿ ಸಾಲು
ಅಭಿಮಾನದ ಅಣೆಕಟ್ಟೆ.

ಕನ್ನಡದ ಮನಸುಗಳು
ಕೊಟ್ಟ ಬಿರುದು ಸಮ್ಮಾನಗಳ ಮೀರಿದಿರಿ.
ಎತ್ತರೆತ್ತರ ನಿಮ್ಮದೇ ಖ್ಯಾತಿ.
ಸರಳ ಜೀವನ ಜ್ಯೋತಿ.

ಪದಗಳೇ ಸಾಲವು
ನಿಮ್ಮ ನುಡಿ ನಡೆಗಳ
ಹಾಸಿ ಹೆಣೆಯಲು.

ನಿಮಗೆ ನೀವೇ ಸಾಟಿ
ಎಂದೆಂದೂ ಅಮರ
ನಮ್ಮೆಲ್ಲರ
ರಾಜಕುಮಾರ.

.+ಡಾ.ಸುಧೀಂದ್ರ…

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related