ಶಿವಮೊಗ್ಗದ ‘ಶ್ರೀ ಶಂಕರ ಜಯಂತಿ ಸಭಾ “. ಇವರು ನಿರ್ಮಿಸಿದ್ದ “ದಿಂಡಿ ರಥ”ವನ್ನು ಶಿವಮೊಗ್ಗ ದ ದೊಡ್ಡ ಬ್ರಾಹ್ಮಣರ ರಸ್ತೆ (ಬಿಬಿ ಸ್ಟ್ರೀಟ್ ) ನಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ರಘುನಾಥ್ ಅವರು ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲಿ ವಿಪ್ರ ಮುಖಂಡರಾದ ಎಸ್ .ದತ್ತಾತ್ರಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರಾದ ಖ್ಯಾತ ವಕೀಲರಾದ ಶ್ರೀ ಬಿ ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಶ್ರೀ ಅನಂತಸ್ವಾಮಿ, ಮಾಜಿ ಶಾಸಕರಾದ ಶ್ರೀ ಪ್ರಸನ್ನ ಕುಮಾರ್, ಎ ಕೆ ಬಿ ಎಂ ಎಸ್ ನ ಜಿಲ್ಲಾ ಪ್ರತಿನಿಧಿ ಶ್ರೀ ರಘುರಾಮ್ , ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ನಟರಾಜ್ ಭಾಗವತ್, ಬ್ರಾಹ್ಮಣ ಸೇವಾ ಸಂಘ ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ನಾಡಿಗ್ ಇನ್ನಿತರ ಪ್ರಮುಖ ವಿಪ್ರಬಂಧುಗಳು ಉಪಸ್ಥಿತರಿದ್ದರು.
