Friday, June 19, 2026
Friday, June 19, 2026

ಸೋಲೊಪ್ಪದೇ ದೊಡ್ಡ ಸಂಕಲ್ಪದಿಂದ ಗುರಿಯನ್ನ ಸಾಧಿಸುವವರಿಗೆ ಭಗೀರಥ ಮಾದರಿ- ನಾಗರಾಜ್ ಕಂಕಾರಿ

Date:

ನಮ್ಮೂರ ಬಳಗದ ವತಿಯಿಂದ ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಇಂದು ಬೆಳಗ್ಗೆ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸುವ ಮುಖಾಂತರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮ್ಮೂರ ಬಳಗದ ಗೌರವ ಸಂಚಾಲಕರು ಮಾಜಿ ಮೇಯರ್ ನಾಗರಾಜ್ ಕಂಕಾರಿ ರವರು ಭಗೀರಥರ ಜೀವನ ಕೇವಲ ಪುರಾಣವಲ್ಲ ಅದು ಮನುಷ್ಯನ ಇಚ್ಛಾಶಕ್ತಿ ಮತ್ತು ಛಲದ ಸಂಕೇತ ಕುಟುಂಬದ ಏಳಿಗೆಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಒಬ್ಬ ವ್ಯಕ್ತಿ ಎಷ್ಟು ಕಷ್ಟಪಡಬಲ್ಲ ಎಂಬುದು ಇವರ ಜೀವನ ಒಂದು ಉತ್ತಮ ನಿರ್ದೇಶನ ಅಸಾಧ್ಯವಾದುದನ್ನು ಸಾಧಿಸಲು ಮಾಡುವ ಅತ್ಯಂತ ಕಠಿಣ ಪರಿಶ್ರಮವನ್ನು ಇಂದಿಗೂ ‘ಭಗೀರಥ ಪ್ರಯತ್ನ’ ಎಂದು ಕರೆಯಲಾಗುತ್ತದೆ ಸೋಲೊಪ್ಪದೆ ದೊಡ್ಡ ಸಂಕಲ್ಪದಿಂದ ಗುರಿಯನ್ನು ತಲುಪುವವರಿಗೆ ಭಗೀರಥ ಮಹರ್ಷಿ ಮಾದರಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಶ್ರೀ ರವಿ, ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್ .ಪಿ. ಗಿರೀಶ್, ರಾಜೇಶ್ ಮಂದಾರ, ಟಿ ಗುರುಪ್ರಸಾದ್, ಎಂ. ರಾಕೇಶ್, ಕೆ ಎಲ್ ಪವನ್, , ಮುರುಳಿ ಸಣ್ಣಕ್ಕಿ, ಬೊಮ್ಮನಕಟ್ಟೆ ಮಾಲ್ತೇಶ್ ,ಶ್ರೀಕಾಂತ್ ,ರವಿ ಶಾಸ್ತ್ರಿ , ಕೇಶವ ಸೀಗೆಹಟ್ಟಿ, ಪ್ರಶಾಂತ್ ರಾಯ್ ,ಜಯಪ್ರಕಾಶ್, ಕೇಶವಮೂರ್ತಿ, ಆಟೋ ನಂದನ್ , ಪೈಂಟರ್ ಕೃಷ್ಣಪ್ಪ, ಭವಾನಿ ರಾವ್, ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...