Wednesday, September 16, 2026
Wednesday, September 16, 2026

CM Siddharamaiah ಮಾನವನಿಂದ ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ

Date:

CM Siddharamaiah ಸಕಲ ಜೀವರಾಶಿಗಳಿಗೂ ವಾಸಿಸಲು ಯೋಗ್ಯವಿರುವ ಏಕೈಕ ಗ್ರಹ ಭೂಮಿ. ಪ್ರಕೃತಿಯಲ್ಲಿ ಮಾನವನ ತೀವ್ರ ತೆರನಾದ ಹಸ್ತಕ್ಷೇಪದಿಂದಾಗಿ ಕಾಲ ಕಳೆದಂತೆ ಭೂಮಿಯ ಸ್ಥಿತಿ ಅಧೋಗತಿಗೆ ತಲುಪುತ್ತಿದೆ. ಮನುಷ್ಯ ಮಾತ್ರವಲ್ಲ, ಪ್ರಾಣಿ – ಪಕ್ಷಿಗಳು, ಗಿಡ – ಮರಗಳು ಕೂಡ ತಮ್ಮ ಉಳಿವಿಗಾಗಿ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಎಂದು ವಿಶ್ವ ಭೂಮಿದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಳಜಿ ವ್ಯಕ್ತಪಡಿಸಿದ್ದಾರೆ

ಸಾವಿರಾರು ಜೀವ ಪ್ರಭೇದಗಳು ಈಗಾಗಲೇ ಕಣ್ಮರೆಯಾಗಿವೆ, ಇನ್ನೂ ನೂರಾರು ಜೀವ ಸಂಕುಲಗಳು ಅಳಿವಿನ ಅಂಚು ತಲುಪಿವೆ.

ಅರಣ್ಯನಾಶ, ವಾಯುಮಾಲಿನ್ಯ, ಜಲಮಾಲಿನ್ಯ, ಯುದ್ಧ ಮುಂತಾದ ಕಾರಣಗಳಿಂದಾಗಿ ಭೂಮಿಯ ಮೇಲಿನ ಪ್ರಾಕೃತಿಕ ಸಮತೋಲನ ಹಿಂದಿನಂತೆ ಇಂದಿಲ್ಲ.
ಗಾಳಿ, ನೀರು, ಬೆಳಕು, ಬದುಕು ಈ ಎಲ್ಲವನ್ನೂ ಕೊಟ್ಟಿರುವ ಭೂಮಿಗೆ ಮರಳಿ ಮನುಷ್ಯ ಕೊಡುತ್ತಿರುವುದು ಹಲವು ವಿಧದ ಮಾಲಿನ್ಯಗಳು. ಈ ನಡವಳಿಕೆ, ಮನಸ್ಥಿತಿ ಬದಲಾಗಬೇಕು, ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು.

ಭೂಮಿಯೊಂದಿಗಿನ ತನ್ನ ಸಖ್ಯವನ್ನು ವಿಮರ್ಷೆಗೊಡ್ಡಿಕೊಳ್ಳಲು ಮನುಕುಲಕ್ಕಿದು ಸಕಾಲ. ವಿಶ್ವ ಭೂದಿನವಾದ ಇಂದು ಭೂಮಿಯ ಸಂರಕ್ಷಣೆ, ಸಮತೋಲನ ಕಾಪಾಡುವ ಪ್ರತಿಜ್ಞೆ ಸ್ವೀಕರಿಸೋಣ.
ನಾವು ಬಾಳೋಣ, ಮುಂದಿನ ತಲೆಮಾರಿಗೂ ಸ್ವಸ್ಥ, ಸುಂದರ ಭೂಮಿಯನ್ನು ಉಳಿಸಿ ಹೋಗೋಣ.

CM Siddharamaiah ವಿಶ್ವ ಭೂದಿನವು ಸರ್ವರಲ್ಲೂ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲಿ ಎಂದು ಹಾರೈಸುತ್ತೇನೆ. ಎಂದು ಮುಖ್ಯಮಂತ್ರಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...