Sunday, August 2, 2026
Sunday, August 2, 2026

CM Siddharamaiah ಮಾನವನಿಂದ ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ

Date:

CM Siddharamaiah ಸಕಲ ಜೀವರಾಶಿಗಳಿಗೂ ವಾಸಿಸಲು ಯೋಗ್ಯವಿರುವ ಏಕೈಕ ಗ್ರಹ ಭೂಮಿ. ಪ್ರಕೃತಿಯಲ್ಲಿ ಮಾನವನ ತೀವ್ರ ತೆರನಾದ ಹಸ್ತಕ್ಷೇಪದಿಂದಾಗಿ ಕಾಲ ಕಳೆದಂತೆ ಭೂಮಿಯ ಸ್ಥಿತಿ ಅಧೋಗತಿಗೆ ತಲುಪುತ್ತಿದೆ. ಮನುಷ್ಯ ಮಾತ್ರವಲ್ಲ, ಪ್ರಾಣಿ – ಪಕ್ಷಿಗಳು, ಗಿಡ – ಮರಗಳು ಕೂಡ ತಮ್ಮ ಉಳಿವಿಗಾಗಿ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಎಂದು ವಿಶ್ವ ಭೂಮಿದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಳಜಿ ವ್ಯಕ್ತಪಡಿಸಿದ್ದಾರೆ

ಸಾವಿರಾರು ಜೀವ ಪ್ರಭೇದಗಳು ಈಗಾಗಲೇ ಕಣ್ಮರೆಯಾಗಿವೆ, ಇನ್ನೂ ನೂರಾರು ಜೀವ ಸಂಕುಲಗಳು ಅಳಿವಿನ ಅಂಚು ತಲುಪಿವೆ.

ಅರಣ್ಯನಾಶ, ವಾಯುಮಾಲಿನ್ಯ, ಜಲಮಾಲಿನ್ಯ, ಯುದ್ಧ ಮುಂತಾದ ಕಾರಣಗಳಿಂದಾಗಿ ಭೂಮಿಯ ಮೇಲಿನ ಪ್ರಾಕೃತಿಕ ಸಮತೋಲನ ಹಿಂದಿನಂತೆ ಇಂದಿಲ್ಲ.
ಗಾಳಿ, ನೀರು, ಬೆಳಕು, ಬದುಕು ಈ ಎಲ್ಲವನ್ನೂ ಕೊಟ್ಟಿರುವ ಭೂಮಿಗೆ ಮರಳಿ ಮನುಷ್ಯ ಕೊಡುತ್ತಿರುವುದು ಹಲವು ವಿಧದ ಮಾಲಿನ್ಯಗಳು. ಈ ನಡವಳಿಕೆ, ಮನಸ್ಥಿತಿ ಬದಲಾಗಬೇಕು, ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು.

ಭೂಮಿಯೊಂದಿಗಿನ ತನ್ನ ಸಖ್ಯವನ್ನು ವಿಮರ್ಷೆಗೊಡ್ಡಿಕೊಳ್ಳಲು ಮನುಕುಲಕ್ಕಿದು ಸಕಾಲ. ವಿಶ್ವ ಭೂದಿನವಾದ ಇಂದು ಭೂಮಿಯ ಸಂರಕ್ಷಣೆ, ಸಮತೋಲನ ಕಾಪಾಡುವ ಪ್ರತಿಜ್ಞೆ ಸ್ವೀಕರಿಸೋಣ.
ನಾವು ಬಾಳೋಣ, ಮುಂದಿನ ತಲೆಮಾರಿಗೂ ಸ್ವಸ್ಥ, ಸುಂದರ ಭೂಮಿಯನ್ನು ಉಳಿಸಿ ಹೋಗೋಣ.

CM Siddharamaiah ವಿಶ್ವ ಭೂದಿನವು ಸರ್ವರಲ್ಲೂ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲಿ ಎಂದು ಹಾರೈಸುತ್ತೇನೆ. ಎಂದು ಮುಖ್ಯಮಂತ್ರಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...