ಶ್ರೀ ಅಕ್ಕನ ಹುಣ್ಣಿಮೆಯ ಪ್ರಯುಕ್ತ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ ದ ವತಿಯಿಂದ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಮಹಾಪೂಜೆ ಕಾರ್ಯಕ್ರಮ ನೆರವೇರಿತು ಹಾಗೆ ಶರಬಿ ಗುಗ್ಗುಳ ಮತ್ತು ಕೆಂಡದಾರ್ಚನೆ ಕಾರ್ಯಕ್ರಮದೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಓಕಳಿ ಮತ್ತು ರಾಜಭೀದಿ ಉತ್ಸವ ನೆರವೇರಿತು. ಮೆರವಣಿಗೆಯಲ್ಲಿ ಶ್ರೀ ಅಕ್ಕಮಹಾದೇವಿಯ ಭಾವಚಿತ್ರದ ಉತ್ಸವ ನೆರವೇರಿತು ಹಾಗೆ ಬಸವೇಶ್ವರ ಸ್ವಾಮಿ ರಥೋತ್ಸವದಲ್ಲಿ ದಿವಂಗತ ಉಡುಗಣಿ ಶೇಖರಪ್ಪ ಮತ್ತು ಮಕ್ಕಳು ಪಾನಕ ಸೇವೆ ನೆರವೇರಿಸಿದರು ಕೋಸಂಬರಿ ಸೇವೆಯನ್ನು ದಿವಂಗತ ಬಿಜಿ ಮಲ್ಲೇಶಪ್ಪ ಹಾಗೂ ದೇವಂಗತ ಬಿಜಿ ಗಂಗಾಧರಪ್ಪ ಮಕ್ಕಳು ದಿವಂಗತ ಎಸ್ ಪಿ ಶಾಂತಪ್ಪ ಮತ್ತು ಮಕ್ಕಳು ಇವರುಗಳು ನೆರವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್ ಎಸ್ ಜ್ಯೋತಿಪ್ರಕಾಶ್. ನಿರ್ದೇಶಕರಾದ ಪಿ ರುದ್ರೇಶ್. ಮಹೇಶ್ ಮೂರ್ತಿ. ಮರುಳೆಶ್. ಹೆಚ್ ವಿ ಮಹೇಶ್ವರಪ್ಪ. ಶಿವಾನಂದ್. ಮಹೇಶ್ವರಪ್ಪ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ರುದ್ರಪ್ಪ ಚಿಲೂರು ಸಮಾಜದ ಭಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಅದ್ಧೂರಿಯಾಗಿ ನಡೆದ ಶ್ರೀಬಸವೇಶ್ವರ ಸ್ವಾಮಿಯ ರಥೋತ್ಸವ
Date:
