Friday, July 10, 2026
Friday, July 10, 2026

Rama Navami ಶ್ರೀರಾಮನವಮಿ: ಅರ್ಥಪೂರ್ಣವಾಗಿಸೋಣ.ಲೇ: ಎನ್.ಜಯಭೀಮ ಜೊಯ್ಸ್.

Date:

Rama Navami ಶ್ರೀವಿಷ್ಣುವಿನ ದಶಾವತಾರಗಳಲ್ಲಿ ಏಳನೆಯ ಅವತಾರ ಶ್ರೀರಾಮಾವತಾರ.ಶ್ರೀರಾಮ ಭರತಖಂಡದಲ್ಲಿ ಆದರ್ಶ ಪುರುಷನಾಗಿ ಬದುಕಿ,ರಾಜ್ಯವನ್ನಾಳಿ ಮಾನವತ್ವದಿಂದ ದೈವತ್ವಕ್ಕೇರಿ,ಮುಂದಿನ ಜನಾಂಗಕ್ಕೆ ಮಾರ್ಗದರ್ಶಕನಾದ.
ನಮ್ಮ ಪ್ರತಿಯೊಬ್ಬರ ಒಳಗೂ ಒಬ್ಬ ರಾಮನಿದ್ದಾನೆ
ಮತ್ತು ಒಬ್ಬ ರಾವಣನಿದ್ದಾನೆ. ರಾಮನು “ಮರ್ಯಾದ ಪುರುಷೋತ್ತಮ”ಅಂದರೆ ಮನುಷ್ಯನು ಮಿತಿಯೊಳಗೆ ಇದ್ದುಕೊಂಡು ಹೇಗೆಶ್ರೇಷ್ಠನಾಗಬಹುದು ಎಂಬುದಕ್ಕೆ ಸಾಕ್ಷಿ.ರಾಮನುಸಾತ್ವಿಕ ಗುಣದ ಪ್ರತೀಕ.ತನ್ನ ತಂದೆಯ ಮಾತನ್ನುಉಳಿಸಲು,ಸಿಗಬೇಕಿದ್ದ ರಾಜಪಟ್ಟವನ್ನೇ ತ್ಯಜಿಸಿ ಕಾಡಿಗೆಷಹೋದವನು ಶ್ರೀರಾಮ.ಇಲ್ಲಿ ರಾಜ್ಯಪಟ್ಟ
ಎಂದರೆ ಲೌಕಿಕ ಸುಖ ಮತ್ತು ಅಧಿಕಾರದ ಸಂಕೇತ.
ಅದನ್ನು ತ್ಯಜಿಸುವುದು ಎಂದರೆಅಹಂಕಾರವನ್ನುಬಿಡುವುದು ಎಂದರ್ಥ.ಮತ್ತೊಂದೆಡೆ,ರಾವಣನುಹತ್ತುತಲೆಗಳಅಸುರ.ಈ ಹತ್ತು ತಲೆಗಳು ಕೇವಲ ದೈಹಿಕ ರೂಪವಲ್ಲ,ಅವು ನಮ್ಮ ಐದು ಜ್ಞಾನೇಂದ್ರಿಯಗಳುlಮತ್ತು ಐದು ಕರ್ಮೇಂದ್ರಿಯಗಳ ಸಂಕೇತ.ರಾವಣನು ಮಹಾನ್ಶಪಂಡಿತ ನಾಗಿದ್ದರೂ,ವೇದ ಪಾರಂಗತನಾಗಿದ್ದರೂ ತನ್ನ ಇಂದ್ರಿಯಗಳ ಮೇಲೆ ಹತೋಟಿ ಹೊಂದಿರಲಿಲ್ಲ.ಯಾವಾಗ ಮನುಷ್ಯ ತನ್ನ ಇಂದ್ರಿಯಗಳಿಗೆ ದಾಸ ನಾಗುತ್ತಾನೋ,ಆಗ ಅವನುಎಷ್ಟೇಜ್ಞಾನಿಯಾಗಿದ್ದರೂ ರಾವಣನಂತೆ ಪತನ ಹೊಂದುತ್ತಾನೆ.ಶ್ರೀರಾಮನು ರಾವಣ
ನಿಂದಶಕಡೆಯ ಉಪದೇಶವನ್ನು ಲಕ್ಷ್ಮಣನಮುಖಾಂತರ ತಿಳಿಯಲಪೇಕ್ಷಿಸಿದಾಗ ಸಾವಿನ ದಡೆಯಲ್ಲಿದ್ದ ರಾವಣನು “ನಾನುಇಂದ್ರಿಯಗಳಿಗೆದಾಸನಾದೆ,ಪರಸ್ತ್ರೀಯನ್ನುವ್ಯಾಮೋಹಿಸಿದೆ,ಇದು ನನ್ನ ವಿನಾಶಕ್ಕೆ ಕಾರಣವಾಯಿತು”ಎಂದು ಅವನು ಒಪ್ಪಿಕೊಳ್ಳುತ್ತಾನೆ.ಇದು ಮಾನವಕುಲಕ್ಕೆ ನೀಡುವ ಎಚ್ಚರಿಕೆ,ಬುದ್ಧವಂತಿಕೆಗಿಂತ ಶೀಲ ಮುಖ್ಯ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.ಶ್ರೀರಾಮನು ಧರ್ಮವನ್ನು ಎತ್ತಿ ಹಿಡಿಯಲು “ಅರ್ಥ”ಎಂದರೆಸಂಪತ್ತು ಹಾಗೂ ರಾಜ್ಯವನ್ನು ಮತ್ತುಕಾಮಅಂದರೆಆಸೆಹಾಗೂಸುಖವನ್ನುಬದಿಗೊತ್ತಿದನು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವಂತೆ,”ಧರ್ಮಕ್ಕೆ ಅವಿರೋಧವಾದ ಕಾಮ ನಾನೇ” ಅಂದರೆ,ನಮ್ಮ ಆಸೆಗಳು ಧರ್ಮದ ಚೌಕಟ್ಟಿನಲ್ಲಿದ್ದಾಗ ಮಾತ್ರ ಅವು ಜೀವನಕ್ಕೆಶೋಭೆ ತರುತ್ತವೆ.ರಾವಣನು ಧರ್ಮವನ್ನು ಮೀರಿ ಕಾಮದ ಬೆನ್ನು ಹತ್ತಿದ್ದರಿಂದಲೇ ಸರ್ವನಾಶವಾದನು.ಶ್ರೀರಾಮನ ಚಾರಿತ್ರ್ಯ ಎಂತಆದಹುದುಎಂದರೆ,ಅವನಶತೃಗಳೂಅವನನ್ನುಗೌರವಿಸುತ್ತಿದ್ದರು.ಆಧ್ಯಾತ್ಮಿಕವಾಗಿ ಸೀತೆಯು “ಶಾಂತಿ”ಯಸಂಕೇತ.
ಆ ಶಾಂತಿಯನ್ನು ರಾವಣನೆಂಬ “ಅಹಂಕಾರ” ಮತ್ತು “ಕಾಮ” ಅಪಹರಿಸುತ್ತವೆ.ಆ ಶಾಂತಿಯನ್ನು ಮರಳಿ ಪಡೆಯಲು ರಾಮನೆಂಬ “ಆತ್ಮ ಹನುಮಂತ (ರಾಮನ ಅಂತರಂಗ ಭಕ್ತ) ನೆಂಬ “ಮನಸ್ಸಿನ” ಸಹಾಯದಿಂದ ಲಂಕೆ ಎಂಬ“ದೇಹ”ದಒಳಗೆಹೋಗಿಯುದ್ಧಮಾಡಬೇಕಾಗುತ್ತದೆ.ಈ ಯುದ್ಧವು ಹೊರಗಿನದಲ್ಲ.ನಮ್ಮೊಳಗಿನ ಅಜ್ಞಾನದ ವಿದುದ್ಧದ ಹೊರಾಟ.ರಾಮಾಯಣವು ನಮಗೆಸಂಬಂಧಗಳ ಮೌಲ್ಯವನ್ನುಕಲಿಸುತ್ತದೆ.ರಾಮನುಒಬ್ಬಆದರ್ಶಮಗನಾಗಿ,ಸಹೋದರನಾಗಿ,ಪತಿಯಾಗಿ ಮತ್ತು ರಾಜನಾಗಿ ಹೇಗೆ ವರ್ತಿಸಬೇಕುಎಂಬುದನ್ನುತೋರಿಸಿಕೊಟ್ಟಿದ್ದಾನೆ.ಅಧಿಕಾರಕ್ಕಾಗಿ ಹೊಡೆದಾಡುವ ಈ ಕಾಲದಲ್ಲಿ ತನಗೇ ಬರಬೇಕಾಗಿದ್ದ Rama Navami  ರಾಜ್ಯಪಟ್ಟವನ್ನು ತಮ್ಮ ಭರತನಿಗೆಬಿಟ್ಟುಕೊಡುವ ರಾಮ ಮತ್ತುಅಣ್ಣನಪಾದುಕೆಗಳನ್ನೇಇಟ್ಟುರಾಜ್ಯವಾಳುವಭರತ,ಇವರಿಬ್ಬರೂ ನಿಸ್ವಾರ್ಥತೆಯ ಪಾಠವನ್ನು ಕಲಿಸಿಕೊಡುತ್ತಾರೆ.
ರಾಮಾಯಣವುನಮಗೆನೀಡುವಸಂದೇಶಸ್ಪಷ್ಟವಾಗಿದೆ.”ಹೃದಯದಲ್ಲಿರಾಮನಿರುವಕಡೆಕಾಮವಿರುವುದಿಲ್ಲ,ಕಾಮವಿರುವ ಕಡೆ ರಾಮನಿರುವುದಿಲ್ಲ.ನಾವು ಹೊರಗಿನ ರಾಮನನ್ನು ಪೂಜಿಸುವುದರ ಜೊತೆಗೆ,ನಮ್ಮೊಳಗಿನ ರಾವಣತ್ವವನ್ನು ತೊಲಗಿಸಬೇಕಾಗಿದೆ.ಇಂದ್ರಿಯಗಳನ್ನು ಗೆದ್ದು ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ನಮ್ಮ ಜೀವನವೂ “ರಾಮರಾಜ್ಯ”ವಾಗಲು ಸಾಧ್ಯ.ರಾಮಾಯಣವು ಕೇವಲ ಹಿಂದಿನ ಕಥೆಯಲ್ಲ,ಅದುನಮ್ಮದೈನಂದಿನಬದುಕಿನಪ್ರತಿಕ್ಷಣ
ನಿರ್ಧಾರಗಳ ಸಂಕಲನ.
ಶ್ರೀರಾಮನವಮಿಆಚರಣೆಬರೇಪಾನಕ,ಕೋಸಂಬರಿ ಹಂಚಿಕೆಗೆ ಸೀಮಿತವಾಗದೇಶ್ರೀರಾಮನ ಆದರ್ಶಗಳನ್ನು
ಸ್ವಲ್ಪವಾದರೂಪಾಲಿಸುತ್ತೇವೆಂದುಪ್ರತಿಜ್ಞೆಮಾಡಿದರೆ,ರಾಮನವಮಿಆಚರಣೆ ಅರ್ಥಪೂರ್ಣವಾದೀತು!.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...