K.S. Eshwarappa ಜೆ ಸಿ ಐ ಶಿವಮೊಗ್ಗ ಭಾವನ ಹಾಗೂ ಶ್ರೀ ಸಾಯಿ ಇವೆಂಟ್ಸ್ ವತಿಯಿಂದ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿರುವ ಅವರೇ ಬೇಳೆ ಮೇಳ ಬೃಹತ್ ಮಾರಾಟ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ಉದ್ಘಾಟಿಸಿದರು
ನಂತರ ಮಾತನಾಡಿದ ಕೆ ಎಸ್ ಈಶ್ವರಪ್ಪನವರು ಮಹಿಳೆಯರು ಸ್ವಹಾಲಂಬಿಯಾಗಿ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇಂತಹ ಮೇಳಗಳು ಅತ್ಯವಶ್ಯಕ ಜೆ ಸಿ ಐ ಭಾವನದಿಂದ ಮಾಡಿರುವ ಈ ಮೇಳವು ಉತ್ತಮವಾಗಿದ್ದು ನಮ್ಮ ದೇಸಿ ಪರಂಪರೆಗಳನ್ನು ಪ್ರಚುರ ಪಡಿಸುತ್ತದೆ ಎಂದು ತಿಳಿಸಿದರು
K.S. Eshwarappa ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾದ ಕೆ ರಂಗನಾಥ್ ಜೆ ಸಿ ಐ ವಲಯ ಅಧ್ಯಕ್ಷರಾದ ಮಧುಸೂದನ್ ನಾವಡ, ವಲಯ ಉಪಾಧ್ಯಕ್ಷರಾದ ಕಾರ್ಕಳ ಗಣೇಶ್, ಪೈ ,ವಲಯ ನಿರ್ದೇಶಕರಾದ ರೇಖಾ ರಂಗನಾಥ್,ಜೆ ಸಿ ಐ ಶಿವಮೊಗ್ಗ ಭಾವನ ಅಧ್ಯಕ್ಷರಾದ ಕರಿಬಸಮ್ಮ ಆನಂದ , ಸಾಯಿ ಇವೆಂಟ್ಸ್ ನ ಸೋಮೇಶ್, ಸತೀಶ್ ಹಾಗೂ ಇತರರು ಇದ್ದರು
