Wednesday, May 6, 2026
Wednesday, May 6, 2026

ಜ. 28ಕ್ಕೆ ಕೆಂಡದಾರ್ಚನೆ, ಕೃತಿ ಬಿಡುಗಡೆ ಕಾರ್ಯಕ್ರಮ

Date:

ಶಿವಮೊಗ್ಗ ನಗರದ ಗೆಟ್ಟೇನಹಳ್ಳಿ ರಸ್ತೆಯಕೆ.ಹೆಚ್.ಬಿ.ಪ್ರೆಸ್ ಕಾಲೋನಿಯಲ್ಲಿರುವ
ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಇಲ್ಲಿ ಮೂರನೇ ಕೆಂಡದಾರ್ಚನೆ ಕಾರ್ಯಕ್ರಮ ಜ. 28 ಬುಧವಾರದಂದು ಬೆಳಿಗ್ಗೆ 7 ಗಂಟೆಯಿಂದ ಗಂಗಾ ಪೂಜೆಯಿಂದ ಪ್ರಾರಂಭವಾಗಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಎಮ್ ಎನ್ ಸುಂದರರಾಜು, ಅಂದು ಬೆಳಗ್ಗೆ ದೊಡ್ಡಮ್ಮ ದೇವಿ ಉತ್ಸವ ಮೂರ್ತಿ ಮೆರವಣಿಗೆ ಇದೆ. ಬೆಳಿಗ್ಗೆ 9.30ಕ್ಕೆ ಸಾವಿರ ಮಹಿಳೆಯರಿಂದ ಆರತಿ ಮುಂಭಾಗದಲ್ಲಿ ಬೆಳಿಗ್ಗೆ 10 ರಿಂದ “ ಶ್ರೀ ದೊಡ್ಡಮ್ಮ ದೇವಿ ಕೆಂಡದಾರ್ಚನೆ” ಹಮ್ಮಿಕೊಳ್ಳಲಾಗಿದೆ.
ಕೆಂಡದಾರ್ಚನೆ ಸಂಬಂಧ 27 ರಂದು ಗಣಪತಿ ಪೂಜೆ, ಪುಣ್ಯಾಹವಾಚನ, ದೇವಿ ಆರಾಧನಾ ಪೂಜೆ ನಂತರ ಚಂಡಿಕಾ ಬೀಜಾಕ್ಷರ ಹೋಮವಿದೆ ಎಂದರು.
ಬೆಳಿಗ್ಗೆ 8 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ನಂತರ ಬೆಳಿಗ್ಗೆ 11 ಗಂಟೆಗೆ ರಾಧಾ ಎಂ. ಸಿದ್ಧಪ್ಪಾಜಿ ಸಂಗ್ರಹಿಸಿರುವ ಶ್ರೀ ಸಿದ್ಧಪ್ಪಾಜಿಯವರ ನುಡಿಮುತ್ತುಗಳ ಸಂಗ್ರಹ “ತಾಯಿನುಡಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಪ್ರೊ. ಶಾಂತಾರಾಮ ಪ್ರಭು, ನಿಟ್ಟೂರು ಇವರು ಆಗಮಿಸಲಿದ್ದಾರೆ. ಸಾಹಿತಿ ಎಂ.ಎನ್.ಸುಂದರ ರಾಜ್, ಉಪಸ್ಥಿತರಿರುತ್ತಾರೆ ಎಂದರು.
ಅಂದು ನಡೆಯುವ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಬಿ. ಶ್ರೀನಿವಾಸ ರೆಡ್ಡಿ, ಸಂಸ್ಥಾಪಕರು ರಮಣ ಮಹರ್ಷಿ ಆಶ್ರಮ, ಬೆಂಗಳೂರು, ಡಾ!! .ಪ್ರಸನ್ನ ಬಸವರಾಜಪ್ಪ, ಸರ್ಜಿಕಲ್ ಗ್ಯಾಸ್ಟ್ ಆಂಡೋಲಜಿಸ್ಟ್, ಮ್ಯಾಕ್ಸ್ ಆಸ್ಪತ್ರೆ, ಶಿವಮೊಗ್ಗ, ಡಿ.ಎಂ.ದೇವರಾಜ್, ಸಂಸ್ಥಾಪಕರು, ರಾಮಕೃಷ್ಣ ವಸತಿ ವಿದ್ಯಾಲಯ, ಎಂ.ಎಲ್.ಹಳ್ಳಿ, ವಾಸುದೇವ್, ಹಿರಿಯ ಭೂ ವಿಜ್ಞಾನಿಗಳು, ಬೆಂಗಳೂರು ಇವರಿಗೆ ಸನ್ಮಾನವಿದೆ. ಸಿದ್ಧಪ್ಪಾಜಿ, ದೇವಿ ಉಪಾಸಕರು, ಶಿವಮೊಗ್ಗ ಇವರು ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಅಂದು ಬೆಳಿಗ್ಗೆ 8 ಗಂಟೆಯಿಂದ ದೇವಿ ಭಜನಾ ಕಾರ್ಯಕ್ರಮದಲ್ಲಿ ಗಾಯತ್ರಿ ಭಜನಾ ಮಂಡಳಿ ಶಿವಮೊಗ್ಗ, ಗಾಯತ್ರಿ ಭಜನಾ ಮಂಡಳಿ ಹೊನ್ನಾಳಿ, ಸಿರಿ ಭಜನಾ ಮಂಡಳಿ, ರಾಜೇಂದ್ರ ನಗರ, ಶಿವಮೊಗ್ಗ, ವಿದ್ಯಾ ಭಜನಾ ಮಂಡಳಿ, ವಿದ್ಯಾನಗರ ಶಿವಮೊಗ್ಗ, ಮೊದಲಾದವರಿಂದ ಭಜನೆ ನಡೆಯಲಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

K. R. Periyakaruppan ಒಂದೇ ಒಂದು ಮತದ ಅಂತರದಲ್ಲಿ ಸೋತ (ಮಂತ್ರಿ) ಡಿಎಂಕೆ ಅಭ್ಯರ್ಥಿ ಪೆರಿಯಾಕರುಪ್ಪನ್.

ಒಂದು ಮತ ತಾನೆ. ಎಂಬ ನಿರ್ಲಕ್ಷ್ಯ ಬಹಳ ಅಭ್ಯರ್ಥಿಗಳಲ್ಲಿದೆ. ಆದರೆ ಆ...

Ballari News ಪಾರಾಗುವ ಬಗೆ ಹೇಗೆ?. ಬಳ್ಳಾರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ನೀಡಿರುವ ಮಾಹಿತಿ ಎಲ್ಲರಿಗೂ ಅನ್ವಯ

Ballari News ಜಿಲ್ಲೆಯಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ...

S.N. Channabasappa ಪಶುವೈದ್ಯಕೀಯ ಮತ್ತು‌ ಮೀನುಗಾರಿಕೆ ವಿಜ್ಞಾನ ವಿವಿಗಳ ನೌಕರರಿಗೆ ನೀಡುತ್ತಿರುವ ಎನ್ ಪಿ ಎ ಕಡಿತ: ಶಾಸಕ ಚೆನ್ನಿ ಅವರಿಂದ ಖಂಡನೆ

S.N. Channabasappa "ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ...

Summer ಬೇಸಿಗೆಯ ಬಿರುಬಿಸಿಲು!. ಜಾನುವಾರು ರಕ್ಷಣೆಗೆ ಪಶುವೈದ್ಯಕೀಯ ಕಾಲೇಜಿನ ತಜ್ಞರ ಮಾರ್ಗದರ್ಶನ – ಮಾಹಿತಿ ಇಲ್ಲಿದೆ.

Summer ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮೇ ತಿಂಗಳಲ್ಲಿ ಬಿಸಿಲ ಧಗೆ ಹೆಚ್ಚಾಗುವ...