Wednesday, August 12, 2026
Wednesday, August 12, 2026

Malenadu Development Foundation ಎಲ್ಲರ ಮನ ಮೆಚ್ಚಿದ ಹರ್ಷದ “ನಾಲಂದೋತ್ಸವ

Date:

Malenadu Development Foundation ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ರಿ.) ,ಸಾಗರ ಕಾಯಕ ಫೌಂಡೇಶನ್ (ರಿ.), ಸಾಗರ , ಇವರ ಸಂಯುಕ್ತ ಆಶ್ರಯದಲ್ಲಿ,ಗ್ರಾಮ ಪಂಚಾಯಿತಿ ತಾಳಗುಪ್ಪ ಸಹಕಾರದೊಂದಿಗೆ ದು ಅದ್ದೂರಿಯಾಗಿ ನೆರವೇರಿತು.
ಕೇವಲ 7 ದಿನಗಳ ಹಿಂದೆ, ತೆಗೆದುಕೊಂಡ ನಿರ್ಣಯ ಕಾರ್ಯರೂಪಕ್ಕೆ ಬಂದು ಯಶಸ್ವಿಯಾಗಿದ್ದರ ಹಿಂದೆ, ಕಾಯಕ ಫೌಂಡೇಶನ್ (ರಿ.), ಬೆಂಗಳೂರು ಇದರ ಅಧ್ಯಕ್ಷರಾದ ಡಾ.ಮುರಿಗೆಪ್ಪ ಅಂಕದ ವಿಶ್ರಾಂತ ಕುಲಪತಿಗಳು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರೇರಣೆ,
ಮಾರ್ಗದರ್ಶನ, ಕಾಯಕ ಫೌಂಡೇಶನ್ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಅಂಕದ ಅವರ ಪ್ರೋತ್ಸಾಹವಿತ್ತು,
MDF ನ ಅಧ್ಯಕ್ಷರಾದ ಶ್ರೀ ಬಿ.ಆರ್.ಜಯಂತ್ ಸರ್, MDF ಕಾರ್ಯದರ್ಶಿಗಳಾದ ಡಾ.
ಶಿವಕುಮಾರ್, ಹೆಚ್ಇವರ ನಿರಂತರ ಕಾಳಜಿಯಿತ್ತು.
ಆತ್ಮ ವಿಶ್ವಾಸದ ನುಡಿ ಕಾರಣವಾಗಿತ್ತು.
ಹೀಗೆ ಪ್ರಾರಂಭವಾದ ನಾಲಂದೋತ್ಸವ ತಯಾರಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಉತ್ಸಾಹ ಮುಗಿಲು ಮುಟ್ಟಿತ್ತು,
ಸ್ವಲ್ಪ ತರಾತುರಿಯಂತೆ ಅನಿಸಿದರೂ ಅಂದುಕೊಂಡ ಕಾರ್ಯಗಳು ಗುರಿಯ ತಲುಪಿದವು. ವಿಜ್ಞಾನ ವಸ್ತು ಪ್ರದರ್ಶನ ಪ್ರಶಂಸೆಗೆ ಪಾತ್ರವಾಯಿತು .ವಿದ್ಯಾರ್ಥಿಗಳು ಅಲ್ಪ ಅವಧಿಯಲ್ಲಿ ಮೊಬೈಲ್ ನಿಂದ ತಮಗೆ ತಾವೇ ನೃತ್ಯ ತರಬೇತಿ ಮಾಡಿಕೊಂಡು ಚೆನ್ನಾಗಿ ನೃತ್ಯ ಮಾಡಿದರು.
Malenadu Development Foundation ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಸುಧಾರಣೆ ಬೇಕಾಗಿತ್ತು ಎನಿಸಿತು, ಶ್ರೀ ಸಂದೇಶ್ ಅವರು ನೀಡಿದ ಲೈಟಿನ ಸರದ ಸಹಾಯದಿಂದ ನಾಲಂದ ಶಾಲೆ ಜಗಮಗಿಸಿತು, BCM ಹಾಸ್ಟೆಲ್ ನ ವಾರ್ಡನ್ ಶ್ರೀ ವೆಂಕಟೇಶ್ ಅವರು ಸ್ವ ಇಚ್ಛೆಯಿಂದ ಭೋಜನಕ್ಕೆ ಜಿಲೇಬಿ ವ್ಯವಸ್ಥೆ ಮಾಡಿಸಿದ್ದರು, ಅಡೆಗೆಯವರಾದ ಶ್ರೀಮತಿ ಶಹಜಾದ್,ನೇತ್ರಾವತಿ , ಸಣ್ಣಜ್ಜಿ
ರುಚಿಯಾಗಿ ಅಡುಗೆ ಮಾಡಿದ್ದರು. ಪೋಷಕರಾದ ಶ್ರೀ ನಾರಾಯಣ ಗುಡ್ಡೇಮನೆ
ಅವರು ನಿರಂತರವಾಗಿ ನಮ್ಮ ಜೊತೆಗಿದ್ದು ನಮ್ಮ ತಯಾರಿಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು, ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಸೋಮಶೇಖರ ತಾಳಗುಪ್ಪ ಸಹಭಾಗಿಯಾದರು.BCM ಹಾಸ್ಟೆಲ್ ನ ದೇವರಾಜ್, ಹಾಗೂ ನಿತಿನ್
ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳಾಗಿ ಬೆರೆತು ಮಕ್ಕಳ ಜೊತೆಗಿದ್ದರು, ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ತಮ್ಮ ಪಾಲಿನ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು, ಶಾಮಿಯಾನದ ವ್ಯವಸ್ಥೆ ಅಚ್ಚುಕಟ್ಟು ತನದಿಂದ ಕೂಡಿತ್ತು, ಅಡುಗೆ ಮನೆ ಹತ್ತಿರ ,
ಹೆಣ್ಣು ಮಕ್ಕಳ ಶೌಚಾಲಯ ಹಾಗೂ ಪೆಂಡಾಲ್ ಹೊರಗಡೆ ಬೆಳಕಿನ ಅವಶ್ಯಕತೆಯ ಅರಿವಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಾರಾಯಣ ಬೆಕ್ಕೋಡುಗ್ರಾ.ಪಂ.ಸದಸ್ಯರಾದ ಆಗ್ನೇಲ್ ಡಿಸೋಜಾ ವೇದಿಕೆ ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಭಾಗಿಯಾದ
ಹಿರಿಯರು, ತಾಯಂದಿರು,ತರುಣರು,ತರುಣಿಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ನಾಲಂದೋತ್ಸವ ಚೆನ್ನಾಗಿತ್ತು ಎಂದು ಹೇಳಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...