Tuesday, February 3, 2026
Tuesday, February 3, 2026

Malabar Gold & Diamonds ಮಲಬಾರ್ ಗ್ರೂಪ್ಸ್ ಸಿಎಸ್ಆರ್ ಯೋಜನೆಗೆ ₹2.5 ಕೋಟಿ ಮೀಸಲಿರಿಸಿದೆ – ಎಂ.ಪಿ. ಅಹಮದ್

Date:

Malabar Gold & Diamonds ಭಾರತದ ಪ್ರಮುಖ ವ್ಯಾಪಾರ ಸಮೂಹ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಮಾತೃ ಕಂಪನಿಯಾದ ಮಲಬಾರ್ ಗ್ರೂಪ್ ಸಂಸ್ಥೆಯು ಆರೋಗ್ಯ ರಕ್ಷಣೆ, ಶಿಕ್ಷಣ, ಹಸಿವು ಮತ್ತು ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಮತ್ತು ಬಡವರಿಗೆ ವಸತಿಯ ಮೇಲೆ ಕೇಂದ್ರೀಕರಿಸಿದ ತನ್ನ ಸಿಎಸ್‌ಆರ್ ಯೋಜನೆಗಳನ್ನು ಹೆಚ್ಚಿಸಲು 2025-26ರಲ್ಲಿ 150 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿದೆ ಎಂದು ಮಲಬಾರ್ ಗ್ರೂಪ್ಸ್ನ ಅಧ್ಯಕ್ಷ ಎಂ.ಪಿ. ಅಹಮ್ಮದ್ ಹೇಳಿದರು. ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್& ಡೈಮಂಡ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲಬಾರ್ ಗೂಪ್ಸ್ ತನ್ನ ಪ್ರಮುಖ ಸಿಎಸ್‌ಆರ್ ಯೋಜನೆ “ಹಸಿವು ಮುಕ್ತ ಜಗತು”್ತ ಯೋಜನೆಯಡಿಯಲ್ಲಿ, ಭಾರತ ಮತ್ತು ಜಾಂಬಿಯಾದಲ್ಲಿ ಪ್ರತಿದಿನ 70,000 ಊಟಗಳನ್ನು ಸೌಲಭ್ಯ ವಂಚಿತರಿಗೆ ವಿತರಿಸಲು ಗುಂಪು ಬದ್ಧವಾಗಿದೆ. ಇದು 2025-26 ರಲ್ಲಿ ಒಟ್ಟು 2.50 ಕೋಟಿ ಊಟಗಳನ್ನು ವಿತರಿಸಿದೆ, ಕಳೆದ 3 ವರ್ಷಗಳಲ್ಲಿ 2.5 ಕೋಟಿ ಜನರಿಗೆ ಊಟಗಳನ್ನು ಪೂರೈಸಿದ ಎಂದು ಹೇಳಿದರು. Malabar Gold & Diamonds ಇದು ಮುಂದಿನ ದಿನಗಳಲ್ಲಿ ಗಮನಾರ್ಹವಾಗಿ ಏಳಿಗೆ ಕಂಡು ಬಡ ಸಮುದಾಯಗಳಿಗೆ ಆಹಾರ ಭದ್ರತೆಯ ಕಾರಣಕ್ಕಾಗಿ ಆಳವಾದ ಬದ್ಧತೆಯನ್ನು ಸೂಚಿಸುತ್ತದೆ. ಈ ಯೋಜನೆಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 2 – ಶೂನ್ಯ ಹಸಿವಿಗೆ ಹೊಲಿಕೆಯಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಎಸ್. ಭೂಮರೆಡ್ಡಿ, ಸಮುದಾಯ ಅಧಿಕಾರಿ ಅನುಪಮಾ, ಸಮಾಜ ಸೇವಕರುಗಳಾದ ಡಾ.ಎ.ಸತೀಶ್‌ಕುಮಾರ್‌ಶೆಟ್ಟಿ, ಪೀರ್‌ಷರೀಫ್, ಮಲಬಾರ್ ಗೋಲ್ಡ್ & ಡೈಮಂಡ್ಸ್ನ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...