Monday, February 2, 2026
Monday, February 2, 2026

Bharatiya Janata Party ಬಿಜೆಪಿ ಬಡವರ ಉದ್ಧಾರ ಮಾಡುವ ಪಕ್ಷವಲ್ಲ.- ವೈ.ಬಿ.ಚಂದ್ರಕಾಂತ್

Date:

Bharatiya Janata Party ಭಾರತೀಯ ಜನತಾಪಕ್ಷದ ನಾಯಕರೇನಾದರೂ ಈ ಬಾರಿ ಕಾಂಗ್ರೇಸ್ ಪಕ್ಷದ ಶಾಸಕರಿಗೆ ಕೋಟ್ಯಾಂತರ ರೂಪಾಯಿಗಳ ಆಮಿಷ್ಯ ಒಡ್ಡಿ ಶಾಸಕರ ಖರೀದಿಗೆ ಪ್ರಯತ್ನಿಸಿದರೆ ಅಂತಹ ಬಿ.ಜೆ.ಪಿ. ನಾಯಕರ ಆಮಿಷ್ಯಗಳ ಬಗ್ಗೆ ರೇಕಾರ್ಡ್ ಮಾಡಿಕೊಂಡು ಮುಖಕ್ಕೆ ಸಗಣಿ ಬಳಿಯಲು ಕಾಂಗ್ರೇಸ್ ಪಕ್ಷದ ಗುಂಪೊಂದು ನಿರ್ಧರಿಸಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿ.ಜೆ.ಪಿ. ಜನರ ಸೇವೆ ಮಾಡಲೆಂದು ಹುಟ್ಟಿಕೊಂಡಿರುವ ಪಕ ್ಷವಲ್ಲ. ಅದು ಬಡವರು, ಹಿಂದುಳಿದ ವರ್ಗಗಳ ಜನರನ್ನು ಶೋಷಣೆ ಮಾಡಲೆಂದೆ ಹುಟ್ಟಿಕೊಂಡಿರುವ ಪಕ ್ಷವಾಗಿದೆ. ಈ ವರ್ಗಗಳ ಜನರ ಏಳಿಗೆಗೆ ಶ್ರಮಿಸುತ್ತಿರುವ ಕಾಂಗ್ರೇಸ್ ಪಕ್ಷ ಮತ್ತು ಪಕ್ಷದ ನಾಯಕರ ಕಂಡರೆ ಬಿ.ಜೆ.ಪಿ. ನಾಯಕರಿಗೆ ಎಲ್ಲಿಲ್ಲದ ಉರಿ ಬೀಳುತ್ತದೆ. ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಮತದಾರರು ಬೆಂಬಲ ಕೊಡದಿದ್ದರೂ ಲೂಟಿ ಮಾಡಿದ ಹಣ ಬಳಸಿಕೊಂಡು ಶಾಸಕರ ಖರೀದಿಸಿ ಸರ್ಕಾರ ಮಾಡುವ ಲಜ್ಜೆಗೇಡಿತನ ಮಾಡಿಕೊಂಡು
ಬಂದಿದ್ದಾರೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ಟೀಕಿಸಿದ್ದಾರೆ.
Bharatiya Janata Party ಕಾಂಗ್ರೇಸ್ ಪಕ್ಷ ಆಡಳಿತಕ್ಕೆ ಬರುವ ರಾಜ್ಯಗಳಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರಿಗಾಗಿ ಉಚಿತ ಯೋಜನೆಗಳ ಜಾರಿಗೆ ತಂದಿರುವುದನ್ನು ಸಹಿಸಿಕೊಳ್ಳದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮೀತ್ ಷಾ ಸೇರಿದಂತೆ ಬಿ.ಜೆ.ಪಿ ನಾಯಕರು ಕಾಂಗ್ರೇಸ್ ಪಕ್ಷದ ಸರ್ಕಾರಗಳ ಆರ್ಥಿಕ ನೀತಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ಎಂದು
ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇನೊಂದು ಕಡೆಗೆ ದೇಶದ 19 ಶ್ರೀಮಂತ ಕಳ್ಳರು 16 ಲಕ್ಷ ಕೋಟಿ ರೂಪಾಯಿಗಳ ದೊಚಿಕೊಂಡು ದೇಶ ಬಿಟ್ಟು ಹೋದವರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾಲಮನ್ನಾ ಮಾಡಿದ್ದಾರೆ. ಇಂತಹ ಎಡಬಿಡಂಗಿ ಪ್ರಧಾನಿ ದೇಶಕ್ಕೆ ದೊರಕಿರುವುದು ಬಹುದೊಡ್ಡ ದುರಂತವೆಂದು ವೈ.ಬಿ.ಚಂದ್ರಕಾಂತ ಅವರು ಟೀಕಿಸಿದ್ದಾರೆ.
ದೇಶದಲ್ಲೆ ಮೊದಲ ಬಾರಿಗೆ ಶಾಸಕರ ಖರೀದಿಸಿ ರಾಜ್ಯದಲ್ಲಿ ಸರ್ಕಾರ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ
ಕಗ್ಗೊಲೆ ಮಾಡಿದ ಪಿತಾಮಹ ಎನ್ನುವ ಬಿರುದನ್ನು ಬಿ.ಎಸ್. ಯಡಿಯೂರಪ್ಪ ಅವರು ಪಡೆದಿದ್ದಾರೆ. ಬಿ.ಜೆ.ಪಿ ನಾಯಕರು ಇದೇ ರೋಗವನ್ನು ದೇಶದ ತುಂಬೆಲ್ಲಾ ಹರಡಿದ್ದಾರೆ. ಈಗ ಬಿ.ಎಸ್,ಯಡಿಯೂರಪ್ಪ ಸುಪುತ್ರ ಬಿ.ವೈ. ವಿಜಯೇಂದ್ರ ಮತ್ತು
ಕೆಲವು ಬಿ.ಜೆ.ಪಿ. ನಾಯಕರು ಇಂತಹದ್ದೆ ಲಜ್ಜೆಗೇಡಿ ಕೆಲಸಕ್ಕೆ ಇಳಿದಿದ್ದಾರೆ. ಇದರ ಬಗ್ಗೆ ಚರ್ಚಿಸಿರುವ ಕಾಂಗ್ರೇಸ್ ಶಾಸಕರು ತಮ್ಮನ್ನು ಖರೀದಿಸಲು ಬರುವ ಬಿ.ಜೆ.ಪಿ. ನಾಯಕರ ಮುಖಕ್ಕೆ ಸಗಣಿ ಬಳಿಯುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು
ನಿರ್ಧರಿಸಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ,ಬಿ, ಚಂದ್ರಕಾಂತ ಅವರು ಎಚ್ಚರಿಕೆನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...