Tungabhadra ನಿರ್ಮಲ ತುಂಗಭದ್ರಾ ಅಭಿಯಾನದ ಜನ ಜಾಗೃತಿ ಹಿನ್ನಲೆ ನದಿಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಾಭದ್ರ ತಂಡದಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನಾ ಮುರುಘರಾಜೇಂದ್ರ ಸ್ವಾಮೀಜಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Tungabhadra ತುಂಗಾಭದ್ರಾ ನದಿಗೆ ಸೇರುತ್ತಿರುವ ಕಲುಷಿತ ನೀರು ತಡೆಗಟ್ಟುವ ನಿಟ್ಟಿನಲ್ಲಿ ನ. 6 ರಿಂದ ಶೃಂಗೇರಿಯಿಂದ ತುಂಗಾಭದ್ರಾ ಅಭಿಯಾನ ಶುರುವಾಗಿದೆ.ತುಂಗಾ ಭದ್ರಾ ಉಳಿವಿಗಾಗಿ 400 ಕಿಲೋ ಮೀಟರ್ ತುಂಗಾ ಅಭಿಯಾನ ತಂಡ ಪಾದಯಾತ್ರೆ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಭಾಗಿಯಾದ ಸಾವಿರಾರು ಕಾಲೇಜು ವಿದ್ಯಾರ್ಥಿಗಳು,ಶಾಸಕ ಚನ್ನಬಸಪ್ಪ,ಎಂಎಲ್ಸಿ ಡಿ.ಎಸ್ ಅರುಣ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಭಾಗವಹಿಸಿದ್ದರು.
