Wednesday, July 8, 2026
Wednesday, July 8, 2026

Akhil Bharatiya Sahitya Parishad ಆದಿಕವಿ & ವಾಗ್ದೇವಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಮಾಹಿತಿ ಕೋರಿ ಅಭಾಸಾಪ ಪ್ರಕಟಣೆ

Date:

Akhil Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರತೀ ವರ್ಷ ಸಾಹಿತ್ಯದ ಹಿರಿಯ ಸಾಧಕರಿಗೆ “ಆದಿಕವಿ ಪ್ರಶಸ್ತಿ”ಯನ್ನೂ ಕಿರಿಯ ಸಾಧಕರಿಗೆ “ವಾಗ್ದೇವಿ ಪ್ರಶಸ್ತಿ”ಯನ್ನೂ ಪ್ರದಾನಿಸುತ್ತಿರುವುದು ತಮ್ಮ ಗಮನದಲ್ಲಿ ಇದ್ದೇ ಇದೆ. ಹಾಗೆಯೇ ಸಂಸ್ಕೃತ ಕ್ಷೇತ್ರದ ಸಾಧಕರನ್ನೂ ಸಮ್ಮಾನಿಸುತ್ತಿದೆ. ಈ ಮೂರೂ ಪ್ರಶಸ್ತಿ – ಸಮ್ಮಾನಗಳು ಒಂದು ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತವೆ. ಇದರ ಆಯ್ಕೆ ಪ್ರಕ್ರಿಯೆಗೆ ಪೂರಕವಾಗಿ ಈ ಹಿಂದೆ ನಮ್ಮ ನಮ್ಮ ಜಿಲ್ಲೆಯ/ವಿಭಾಗದ ವ್ಯಾಪ್ತಿಯಲ್ಲಿ ಇರುವ ಸಾಧಕರನ್ನು ಗುರುತಿಸಿ ಅವರ ಸಮಗ್ರ ವಿವರಗಳನ್ನು ಕಳಿಸುತ್ತಾ ಬಂದಿರುವಿರಿ.

ಈ ವರ್ಷ ಸಾಧಕರನ್ನು ಗುರುತಿಸುವ ಮತ್ತು ಆಯ್ಕೆ ಮಾಡುವ ಪ್ರಕ್ರಿಯೆ ಆಗಬೇಕಿದೆ. ಈ ಬಾರಿಯೂ ಇವುಗಳಿಗೆ ಸಂಬಂಧಿಸಿದ ಈವರೆಗಿನ ವಿವರಗಳನ್ನು ೨೦೨೪ ಸೆಪ್ಟೆಂಬರ್ ೧೦ರೊಳಗೆ ಕಳಿಸಿಕೊಡಬೇಕಾಗಿ ಮನವಿ.

Akhil Bharatiya Sahitya Parishad ಹಾಗೆಯೇ ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮವೂ ಈ ಬಾರಿ ೨೦೨೪ ನವೆಂಬರ್ ೧೦ ರಂದು ಕಲ್ಲಡ್ಕದ ಶ್ರೀರಾಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಅದಕ್ಕಾಗಿ ರಾಜ್ಯದಲ್ಲಿ ಇರುವ ಅನುದಾನರಹಿತ, ರಾಷ್ಟ್ರೀಯ ವಿಚಾರಧಾರೆಯಲ್ಲಿ ಕೆಲಸ ಮಾಡುವ, ನಮ್ಮ ಸಂಸ್ಕೃತಿ – ಪರಂಪರೆಗಳನ್ನು ಅನುಸರಿಸುವ ಕನ್ನಡ ಶಾಲೆಗಳನ್ನು ಗುರುತಿಸಬೇಕು. ನಮ್ಮ ನಮ್ಮ ಜಿಲ್ಲೆಗಳಲ್ಲಿ ಇರುವ ಇಂತಹ ಕನ್ನಡ ಶಾಲೆಗಳ ವಿವರಗಳನ್ನೂ ಸೆಪ್ಟೆಂಬರ್ ೧ರೊಳಗೆ ಕಳಿಸಿದರೆ ಅನುಕೂಲ.

ಎರಡೂ ವಿವರಗಳನ್ನು ಪ್ರಾಂತ ಜಾಲತಾಣ ಪ್ರಮುಖರಾದ ಶ್ರೀ ಗಣೇಶ ಅಡಿಗರಿಗೆ ಕಳಿಸಬೇಕು.
(ಗಣೇಶ ಅಡಿಗ +919036178263)

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...