Wednesday, August 12, 2026
Wednesday, August 12, 2026

Kadidal Gopal ಒಕ್ಕಲಿಗರ ಸಂಘಟನೆಯಲ್ಲಿ ಉನ್ನತ ಸೇವೆ ಸಲ್ಲಿಸುವೆ- ಕಡಿದಾಳ್ ಗೋಪಾಲ್

Date:

ಡಾ. ಕಡಿದಾಳ್ ಗೋಪಾಲ್ ಅವರಿಗೆ ಸನ್ಮಾನ

Kadidal Gopal ಯಾವುದೇ ಪ್ರಚಾರ ಇಲ್ಲದೆ ಹೆಚ್ಚು ಮತ ಗಳಿಸಿದ ಕಡಿದಾಳ ಗೋಪಾಲರಿಗೆ ಶ್ರೀನಿಧಿ ಎಜುಕೇಶನ್ ಟ್ರಸ್ಟ್ ಹಾಗೂ ಸಹ್ಯಾದ್ರಿ ಪ್ರೌಢಶಾಲೆಯ ಶಿಕ್ಷಕರ ವತಿಯಿಂದ ಹಾಗೂ ಇಂಟರ್ ಆಕ್ಟ್ ಕ್ಲಬ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಹತ್ತು ವರ್ಷಗಳ ನಂತರ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನೆಡದ ಚುನಾವಣೆಯಲ್ಲಿ ಕಡಿದಾಳ್ ಗೋಪಾಲರ ಸಿಂಡಿಕೇಟಿಗೆ ಬಹುಮತ ಲಭಿಸಿ ಎಲ್ಲರೂ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಡಾ. ಕಡಿದಾಳ ಗೋಪಾಲ್ ಮಾತನಾಡಿ, ಜನರು ನಮ್ಮ ತಂಡದ ಮೇಲೆ ಇಟ್ಟ ಭರವಸೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಹಾಗೂ ಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ಸಂಘದ ಸೇವೆ ಮಾಡುತ್ತಾ ಸಂಘವನ್ನು ಇನ್ನೂ ಅತಿ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ನುಡಿದರು.

Kadidal Gopal ಈ ವೇಳೆ ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಡಾ. ಕಡಿದಾಳ್ ಗೋಪಾಲ್ ಅವರು ರೋಟರಿಯ ಮಹಾದಾನಿ. ಅವರು ಹಲವಾರು ಸಂಘಟನೆಗಳಲ್ಲಿ ಸಮಾಜಮುಖಿಯಾಗಿ ದೊಡ್ಡ ಮಟ್ಟದ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ ಎಂದು ನುಡಿದರು.

ಸಮಾರಂಭದಲ್ಲಿ ಟ್ರಸ್ಟಿನ ನಿರ್ದೇಶಕ ಕೋಳಿಗೆ ವಾಸಪ್ಪ ಗೌಡ, ಶಿವಮೊಗ್ಗ ಜಿಲ್ಲೆಯ ವಾಣಿಜ್ಯ ಮತ್ತು ರೋಟರಿ ಅಧ್ಯಕ್ಷ ಅರುಣ್ ದೀಕ್ಷಿತ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಸಲ್ಮಾ, ಶಶಿಗಿರಿಗೌಡ, ಡಾ. ಧನಂಜಯ ರಾಂಪುರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...