Tuesday, October 1, 2024
Tuesday, October 1, 2024

Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ

Date:

Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ,ಸೌಹಾರ್ದತೆ ಕಾಪಾಡಿಕೊಂಡು ಸಹಬಾಳ್ವೆಯೊಂದಿಗೆ ಹಬ್ಬ ಆಚರಿಸಬೇಕು.ಸಾಮಾಜಿಕ ಜಾಲತಾಣಗಳಲ್ಲಿ ಬಕ್ರೀದ್ ಸಮಯದಲ್ಲಿ ಶಾಂತಿ ಕದಡುವ ಪೋಸ್ಟ್ ಗಳು,ಸುದ್ದಿ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷಕರಾದ ಗಜಾನನ ವಾಮನ ಸುತಾರ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಲವು ಕಿಡಿಗೇಡಿಗಳು ಕೋಮುಸೌಹಾರ್ಧತೆಯನ್ನು ಕದಡುವ,ಕಾನೂನನ್ನು ಕೈಗೆತ್ತಿಕೊಳ್ಳವ ಕೃತ್ಯದಲ್ಲಿ ಭಾಗವಹಿಸಿದರೆ ಹಾಗೂ ನೈತಿಕ ಪೊಲೀಸ್ ಗಿರಿ ನೆಡೆಸುವವರ ವಿರುದ್ಧ ಇಲಾಖೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳತ್ತದೆ ಎಂದರು.
ಹೊರರಾಜ್ಯದಿಂದ ಪಟ್ಟಣಕ್ಕೆ ವಾಸಿಸಲು ಬರುವವರಿಗೆ ಬಾಡಿಗೆ ಮನೆ ನೀಡುವವರು ಅಂತಹ ವ್ಯಕ್ತಿಗಳ ಸೂಕ್ತ ಗುರುತಿನ ಚೀಟಿಗಳ ಆಧಾರ್ ಕಾರ್ಡ್,ಓಟರ್ ಕಾರ್ಡ್ ಪಡೆದುಕೊಳ್ಳಬೇಕು ಜೊತೆಗೆ ಪೂರ್ವಪರ ಬಗ್ಗೆ ಜಾಗೃತಿ ವಹಿಸಬೇಕು,ಕೆಲಸಕ್ಕಾಗಿ ಹೊರ ಊರುಗಳಿಂದ ಬರುವ ಕಾರ್ಮಿಕರ ಬಗ್ಗೆ ಗುತ್ತಿಗೆದಾರರು ಜಾಗೃತಿವಹಿಸಿ ಕೆಲಸ ನೀಡಬೇಕು,ತಾಲೂಕಿನ ಮಾಳೂರು,ಆಗುಂಬೆ,ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಂತಹ ಯಾವುದೇ ಸಮಸ್ಯೆ ಉಂಟಾದರೆ ಪೊಲೀಸ್ ಇಲಾಖೆಯನ್ನು ಸಾರ್ವಜನಿಕರು ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದರು.
Bakrid Festival ಬಕ್ರೀದ್ ಆಚರಣೆ ಸಂದರ್ಭ ಶಾಂತಿಭಂಗ ಮಾಡಿದರೆ ಸೂಕ್ತಕ್ರಮ- ಗಜಾನನ ವಾಮನ ಸುತಾರ ಪಟ್ಟಣದ ವ್ಯಾಪ್ತಿಯ ಖಾಸಗಿ ಶಾಲೆಗಳ ವ್ಯಾನ್ ಗಳಲ್ಲಿ ಮಕ್ಕಳನ್ನು ಮಿತಿ ಮೀರಿ ತುಂಬಿಕೊಂಡು ಹೋಗುವ ಬಗ್ಗೆ ಇಲಾಖೆಯು ಗಮನಹರಿಸಿದ್ದು,ಈ ವಿಚಾರದ ಬಗ್ಗೆ ಆಯಾ ಶಾಲೆಯ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ ಎಂದರು.
ತಾಲೂಕಿನಾದ್ಯಂತ ಹಲವರು ಡಿಜಿಟಲ್ ಇನ್ವೆಸ್ಟ್ ಮೆಂಟ್ ನಲ್ಲಿ ಹಣ ತೊಡಗಿಸುತ್ತಿದ್ದಾರೆ,ಇಂತಹ ಡಿಜಿಟಲ್ ಕಂಪನಿಗಳ ಬಗ್ಗೆ ಎಚ್ಚರವಹಿಸಿ ಹಣ ತೊಡಗಿಸಿಕೊಳ್ಳುವ ಜವಾಬ್ದಾರಿ ಜನರದ್ದಾಗಿದೆ ಎಂದರು.
ತಾಲೂಕಿನಲ್ಲಿ ಎನ್ ಡಿ ಪಿ ಎಸ್ ಆಕ್ಟ್ ಪ್ರಕಾರ ಮಾದಕ ದ್ರವ್ಯಗಳ ಮಾರಾಟ,ಸಂಗ್ರಹ ವಿಚಾರದಲ್ಲಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕಾರ್ಯಾಚರಣೆ ನೆಡೆಸುತ್ತ ಬಂದಿದೆ,ಗಾಂಜಾ ಮುಕ್ತ ಶಿವಮೊಗ್ಗ ,ಗಾಂಜಾ ಮುಕ್ತ ತೀರ್ಥಹಳ್ಳಿ ಮಾಡುವುದು ಪೊಲೀಸ್ ಇಲಾಖೆಯ ಮುಖ್ಯಧ್ಯೇಯವಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...