Sunday, December 7, 2025
Sunday, December 7, 2025

Renukaswamy Chitradurga ರೇಣುಕಾಸ್ವಾಮಿ ಬರ್ಬರ ಹತ್ಯೆ: ಜಿಲ್ಲಾ ಜಂಗಮ ಸಮಾಜದಿಂದ‌ ಖಂಡನೆ

Date:

Renukaswamy Chitradurga ಜಂಗಮ ಸಮಾಜದ ಚಿತ್ರದುರ್ಗದ ರೇಣುಕಸ್ವಾಮಿ ಅವರನ್ನು ಚಲನಚಿತ್ರನಟ ದರ್ಶನ್ ಅಭಿಮಾನಿಬಳಗದ ಸದಸ್ಯರ ಮುಖಾಂತರ ಬೆಂಗಳೂರಿಗೆ ಕರೆಸಿ ಚಿತ್ರಹಿಂಸೆ ನೀಡಿ ನರಳಿ ನರಳಿ ಸಾಯುವಂತೆ ಮಾಡಿರುವ ಘಟನೆಯನ್ನು ಜಿಲ್ಲಾ ಜಂಗಮ ಸಮಾಜ ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಮಾಜದ ಮುಖಂಡರು, ರೇಣುಕಾ ಸ್ವಾಮಿಗೆ ತನ್ನ ಅಭಿಮಾನಿಗಳ ಮೂಲಕ ವಿವಿಧ ಆಯುಧಗಳಿಂದ ಅವರ ದೇಹದ ಅಂಗಗಳು ಊನಆಗುವಂತೆ ಹೊಡೆದು ಸಾಯಿಸಿರುವುದು ರಾಕ್ಷಸ ಪ್ರವೃತ್ತಿಯಾಗಿದೆ.

ಸಮಾಜಕ್ಕೆ ಚಲನಚಿತ್ರದ ಮೂಲಕ ನೀತಿ ಪಾತ್ರಗಳು ನೀತಿಪಾತ್ರಗಳನ್ನು ನಿರ್ವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಇಂತಹ ಗೋಮುಖ ವ್ಯಾಘ್ರತನದ ನಟರು ಮಾಡಿರುವ ಕೃತ್ಯವನ್ನು ಕರ್ನಾಟಕದ ಎಲ್ಲ ಜಂಗಮ ಬಂಧುಗಳು ಖಂಡಿಸುತ್ತಾರೆ ಎಂದಿದ್ದಾರೆ.

Renukaswamy Chitradurga ಚಿತ್ರಹಿಂಸೆ ನೀಡಿರುವ ಇವರಿಗೆ ಮರಣದಂಡನೆಯನ್ನು ವಿಧಿಸಿದರೂ ಶಿಕ್ಷೆ ಕಡಿಮೆಯೇ. ಅವರಿಗೂ ಅವರೊಡನೆ ಚಿತ್ರಹಿಂಸೆ ನೀಡಲು ಸಹಕರಿಸಿದ ಎಲ್ಲರಿಗೂ ಘೋರಶಿಕ್ಷೆ ವಿಧಿಸುವಂತೆ ಸಮಾಜದ ಮುಖಂಡರು ಆಗ್ರಹಿಸಿದ್ದಾರಲ್ಲದೆ, ಅವರ ಕೃತ್ಯವನ್ನು ಖಂಡಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...