ಭಾರತೀಯ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಘೋಷಿತ ಲಷ್ಕರೆ ತಯ್ಬಾ ಸಂಘಟನೆಯ ಪ್ರಮುಖ ಉಗ್ರ ಸೈಫುಲ್ಲಾನನ್ನು ಹತ್ಯೆಗೈದಿದ್ದಾವೆ.
2016ರಲ್ಲಿ ಅಕ್ರಮವಾಗಿ ಗಡಿಯಲ್ಲಿ ನುಸುಳಿ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಿದ್ದ ಪಾಕಿಸ್ತಾನದ ಕರಾಚಿ ಮೂಲದ ಸೈಫುಲ್ಲಾ ಲಷ್ಕರ್ ಸಂಘಟನೆಯ ದಾಳಿಗಳಿಗೆ ಭಾರತದಲ್ಲಿ ಸಂಚು ರೂಪಿಸುವ ಪ್ರಮುಖ ಹೊಣೆ ಹೊತ್ತಿದ್ದ ಎಂದು ತಿಳಿದುಬಂದಿದೆ.
ಶ್ರೀನಗರ ಹೊರಭಾಗದ ಹರ್ವಾನ್ ಪ್ರದೇಶದಲ್ಲಿ ಸೈಫುಲ್ಲಾ ಅಡಗಿರುವ ಬಗ್ಗೆ ಬಂದಂತಹ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಭದ್ರತಾ ಪಡೆಗಳ ಜೊತೆ ಸ್ಥಳೀಯ ಪೊಲೀಸರು ಕೈಜೋಡಿಸಿ ಜಂಟಿ ಶೋಧ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರ ಸೈಫುಲ್ಲಾ ಮೃತಪಟ್ಟಿದ್ದಾನೆ. ಮೃತ ಉಗ್ರ ಅಬ್ಬು ಖಾಲಿದ್ ಅಲಿಯಾಸ್ ಶಾವಾಜ್ ಎಂದೂ ಸಹ ಗುರುತಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
“ಸೈಫುಲ್ಲಾ ಹತ್ಯೆಯ ಮೂಲಕ ಕಳೆದ 33 ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಅಡಗಿದ್ದ ಮೂವರು ಪಾಕಿಸ್ತಾನ ಉಗ್ರರನ್ನು ಭಾರತೀಯ ಭದ್ರತಾ ಪಡೆ ಬೇಟೆಯಾಡಿದಂತಾಗಿದೆ. ನಾಗರಿಕ ಹತ್ಯೆಗಳ ಆತಂಕ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಭದ್ರತಾ ಪಡೆಗಳು ಉಗ್ರರನ್ನು ಹೊಡೆದುರುಳಿಸಿ ಕಾಶ್ಮೀರದ ಜನರ ಆತ್ಮಸ್ಥೈರ್ಯ ಹೆಚ್ಚಿಸಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.