ಶಿರಾಳಕೊಪ್ಪದ ಅಲ್ ಅಮೀನ್ ವಿದ್ಯಾಸಂಸ್ಥೆಯಲ್ಲಿ ಯುನಿಸೆಫ್ ಐಐಎಚ್ಎಂಆರ್ ಹಾಗೂ ಆರೋಗ್ಯವ ಇಲಾಖೆಯ ವತಿಯಿಂದ ನಡೆದ ಕೊರೊನಾ ಲಸಿಕೆ ಜಾಗೃತಿ ಮತ್ತು ಪ್ರಾಮುಖ್ಯ ಎಂಬ ಶಿಬಿರವನ್ನು ನಡೆಸಲಾಯಿತು.
‘ಅಲ್ಪಸಂಖ್ಯಾತ ಸಮುದಾಯದಲ್ಲಿ ಶಿಕ್ಷಣದ ಕೊರತೆಯಿಂದಾಗಿ ಲಸಿಕೆಯ ವಿಚಾರದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ದೇಶದ ಪ್ರಧಾನಿ, ರಾಷ್ಟ್ರಪತಿ ಮತ್ತು ಮಕ್ಕಾ, ಮದೀನ ದಲ್ಲಿ ಇರುವಂತಹ ಸಮುದಾಯದ ಗುರುಗಳು ಕೂಡ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಸಮಾಜದಲ್ಲಿ ಇರುವಂತಹ ಪ್ರಜ್ಞಾವಂತರು,ಮುಂದೆ ಬಂದು ಜನರಲ್ಲಿರುವ ಗೊಂದಲಗಳನ್ನು ಹೋಗಲಾಡಿಸಬೇಕು. ಈ ಮೂಲಕ ಕೊರೋನಾ ಜನರನ್ನು ಬಾಧಿಸದಂತೆ ತಡೆಗಟ್ಟಬಹುದು ಎಂದು ಡಾ. ಹಾಫಿಜ್ ಅವರು ತಿಳಿಸಿದರು.
‘ಯಾವುದೇ ರೀತಿಯಾದ ವದಂತಿಗಳಿಗೆ ಕಿವಿಗೊಡದೇ, ಆರೋಗ್ಯ ಸಿಬ್ಬಂದಿಯೊಂದಿಗೆ ಸಹಕರಿಸಿ ಲಸಿಕೆಯನ್ನು ಜನಸಾಮಾನ್ಯರು ಪಡೆಯಬೇಕು. ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಮೂರನೇ ಅಲೆ ಶುರುವಾಗಿದೆ. ಕೊರೋನಾ ಇನ್ನಷ್ಟು ಶಕ್ತಿಶಾಲಿಯಾಗಿ ಮನುಷ್ಯರ ಮೇಲೆ ದಾಳಿ ಮಾಡುವ ಆತಂಕ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಪ್ಪ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅನಿಲ್ ಕುಮಾರ್, ವೈದ್ಯರಾದ ಹೇಮಂತ್ ಕುಮಾರ್, ಜಾಮಿಯಾ ಮಸೀದಿಯ ಮುಖ್ಯಸ್ಥರಾದ ಬಾಷಾ ಸಾಬ್ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಕೋವಿಡ್ ನಿರ್ನಾಮ ಮಾಡಲು ದೇಶದ ಪ್ರತಿಯೊಬ್ಬ ನಾಗರಿಕನೂ ತಪ್ಪದೇ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕು ಎಂದು ಸಾಹಿತಿ ಡಾ. ಹಾಫಿಜ್ ಕರ್ನಾಟಕಿ ಅವರು ಸಲಹೆ ನೀಡಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.