Puneeth Rajkumar ತಂದೆ ಮತ್ತು ಪುತ್ರ ಇಬ್ಬರು ಕರ್ನಾಟಕ ಸರ್ಕಾರದ ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಪಡೆದಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿ ಎಂದು ಅಪ್ಪು ಸ್ನೇಹ ಬಳಗದ ವೈಭವ್ ಬಸವರಾಜ್ ತಿಳಿಸಿದರು.
ಬಸ್ಟಾಂಡ್ ಆವರಣದಲ್ಲಿರುವ ಪುನೀತ್ ರಾಜಕುಮಾರ್ ರಸ್ತೆ ನಾಮಫಲಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಪ್ಪು ಅಭಿಮಾನಿ ಬಳಗದ ಬಹುದಿನಗಳ ಆಸೆ ಈಡೇರಿದೆ, ಇದಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಎಂದರು.
ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷರಾದ ಈರೇಶ್ ಮಾತನಾಡಿ ಪ್ರತಿಯೊಬ್ಬರು ಪುನೀತ್ ರವರ ಆದರ್ಶವನ್ನು Puneeth Rajkumar ಮೈಗೂಡಿಸಿಕೊಂಡರೆ ಖಂಡಿತ ಅವರು ಸ್ವಲ್ಪಮಟ್ಟಿಗಾದರೂ ಅವರಂತೆ ಆಗಲು ಪ್ರಯತ್ನಿಸಬಹುದು. ಪ್ರತಿಯೊಬ್ಬರು ದುಡಿಮೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ದಾನ ಧರ್ಮಕ್ಕಾಗಿ ಸ್ವಲ್ಪ ಜೀವನವನ್ನು ಮೀಸಲಿಡಿ ಎಂದು ಕರೆ ನೀಡಿದರು.
Puneeth Rajkumar ಶಿಕಾರಿಪುರದಲ್ಲಿ ಡಾ.ಪುನೀತ್ ರಾಜ್ ಕುಮಾರ್ ರಸ್ತೆ ನಾಮಫಲಕ ಅನಾವರಣ
Date: