Friday, April 18, 2025
Friday, April 18, 2025

Jatra Mahotsava ರಾಮೇನಕೊಪ್ಪದಲ್ಲಿ ಸಡಗರದ 27 ನೇ ಜಾತ್ರಾ ಮಹೋತ್ಸವ

Date:

Jatra Mahotsava ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪ ಗ್ರಾಮದ ಶನೇಶ್ವರ ಸ್ವಾಮಿ ಮತ್ತು ಚಕ್ಕಾಪುರದಮ್ಮ ಮೂಲ ದೇವಾಲಯ ಹಾಗೂ ಮೊರಬ ವೀರಭದ್ರ ಸ್ವಾಮಿ ದೇವಾಲಯದ 27ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗಣ ಹೋಮ, ನವಗ್ರಹ ಹೋಮ, ಕುಂಭಾಭಿಷೇಕ, ಕೆಂಡಾರ್ಚನೆ, ಮಹಾ ಮಂಗಳಾರತಿ ಮತ್ತಿತರೆ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿ0ದ ನಡೆದವು.

ಪವನ್ ಭಟ್ ನೇತೃತ್ವದಲ್ಲಿ ಹೊಸಕೊಪ್ಪದ ಕೃಷಿಕ ಎಸ್. ಕೇಶವಮೂರ್ತಿ ಮತ್ತು ದುರ್ಗಿಬಾಯಿ ದಂಪತಿ ಗಣಹೋಮ ನಡೆಸಿಕೊಟ್ಟರು. ನಂತರ ಕುಂಬಾಭಿಷೇಕ ನಡೆಯಿತು. ಮೂಲತಃ ಕೂಡ್ಲಿಗಿ ತಾಲೂಕಿನವರಾದ ನೀಲಗುಂದ ವಂಶಸ್ಥರು ಚಳ್ಳಕೆರೆಯಿಂದ ಶಿವಮೊಗ್ಗ ಮಾರ್ಗವಾಗಿ ತಂದಿದ್ದ ಮೊರಬ ವೀರಭದ್ರ ಸ್ವಾಮಿ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ವಾದ್ಯಮೇಳದೊಂದಿಗೆ ಉತ್ಸವ ಮೂರ್ತಿಗಳನ್ನು ಪಲಕ್ಕಿಯಲ್ಲಿ ಹೊತ್ತು ವೀರಗಾಸೆ ಒಡಪು ಹಾಡುತ್ತ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಿ ದೇವಾಲಯದ ಆವರಣಕ್ಕೆ ತರಲಾಯಿತು.

ದೇವರಿಗೆ ಗಂಗಾಭಿಷೇಕದ ನಂತರ ವಿಶೇಷ ವಸ್ತç ಹಾಗೂ ಪುಷ್ಪದೊಂದಿಗೆ ಸಿಂಗರಿಸಲಾಯಿತು.

ಅರ್ಚಕರು ಅಗ್ನಿಕುಂಡವನ್ನು ಸಿದ್ಧಗೊಳಿಸಿ ಸಾಂಪ್ರದಾಯಿಕ ಪೂಜಾವಿಧಿಗಳು ಮತ್ತು ನೈವೇದ್ಯೆ ಸಮರ್ಪಣೆ ಮಾಡಿದರು. ದೇವರ ಪಲಕ್ಕಿ ಹೊತ್ತವರು ಭಗವಂತನ ನಾಮಸ್ಮರಣೆ ಮಾಡುತ್ತ ಕೆಂಡದ ರಾಶಿ ಹಾಯ್ದರು.

Jatra Mahotsava ಭಕ್ತರು ಇವರನ್ನು ಹಿಂಬಾಲಿಸಿದರು. ಪೂಜಾ ಹಾಗೂ ಸಕಲವಾದ್ಯ ಮೇಳದೊಂದಿಗೆ ದೇವಸ್ಥಾನಕ್ಕೆ ಮರಳಿದ ದೇವರ ಮೂರ್ತಿಗಳಿಗೆ ಮಹಾಮಂಗಳಾರತಿ ಮಾಡಲಾಯಿತು.

ಭಕ್ತರು ದೇವಿಗೆ ಉಡಿ ತುಂಬಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಏಪ್ರಿಲ್ 19 ಆಲ್ಕೊಳ ಫೀಡರ್ ಎ.ಎಫ್. 3 & 5 ರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-3 ಮತ್ತು...

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...