Saturday, September 28, 2024
Saturday, September 28, 2024

Election Bond ವಿವಾದ ಎಬ್ಬಿಸಿರುವ ಚುನಾವಣಾ ಬಾಂಡ್

Date:

Election Bond ಚುನಾವಣಾ ಬಾಂಡ್ ಗಳ ವಿವಾದ ಈಗ ಕೇಂದ್ರ ಸರ್ಕಾರಕ್ಕೆ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ
ಚುನಾವಣಾ ಬಾಂಡ್ ಯೋಜನೆಯಲ್ಲಿ ₹16,518,10 ಕೋಟಿ
ಹಣ ಬಾಂಡ್ ಮೂಲಕ ಸಂಗ್ರಹವಾಗಿದೆ.
ಈ ಬಾಂಡ್ ಗಳೆಲ್ಲವೂ 2019ರ ಏಪ್ರಿಲ್ 12 ರಿಂದ ನಗದೀಕರಣಗೊಂಡ ಮೊತ್ತವಾಗಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಚುನಾವಣಾ ಬಾಂಡ್ ರೂಪಗಳು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಈ ಫೆಬ್ರವರಿ 15 ರಂದು ತೀರ್ಪಿತ್ತಿದೆ.
ಬಾಂಡ್ ಸಂಗ್ರಹಿಸಿರುವ ಎಸ್ ಬಿ ಐ ಗೆ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಲು ಸುಪ್ರೀಂ ತಾಕೀತು ಮಾಡಿತ್ತು.
ಎಸ್ ಬಿಐ ಜೂನ್ 30 ರ ಗಡುವು ಕೇಳಿತ್ತು.
ಈ ಮನವಿಗೆ ಸುಪ್ರೀಂ ಸಮ್ಮತಿ ನೀಡದೇ ಮಾರ್ಚ್ 12 ರೊಳಗೆ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಲು ಸೂಚಿಸಿತ್ತು.
ಅಲ್ಲದೇ ಮಾರ್ಚ್ 15 ರಂದು ವೆಬ್ ಸೈಟ್ ನಲ್ಲಿ ಪ್ರಕಟಿಸಲೂ ಹೇಳಿದೆ.
ರಾಜಕೀಯ ಪಕ್ಷಗಳಾವುವೂ ಇದರ ಬಗ್ಗೆ ಚಕಾರವೆತ್ತಿಲ್ಲ. ಆದರೆ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾದ ಆದಿಶ್ ಅಗರವಾಲ್ ಅವರು ದೇಣಿಗೆ ನೀಡಿದವರ ಹೆಸರು ಬಹಿರಂಗಪಡಿಸದಿರಲು ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಸೂಚನೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.
Election Bond ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ವ್ಯಕ್ತಿ, ಸಂಸ್ಥೆಗಳ ಹೆಸರು ಬಹಿರಂಗವಾದಲ್ಲಿ
ಮುಂದೆ ಬಲಿಪಶುಗಳಾಗಬಹುದು. ಕಿರುಕುಳ ಅನುಭವಿಸಬಹುದು.
ಇವೇ ಮುಂತಾಗಿ ವಿಚಾರಗಳನ್ನ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ
. ಯಾವಯಾವ ಪಕ್ಷಗಳು ಬಾಂಡ್ ಪಡೆದಿವೆ? ಯಾರು ನೀಡಿದ್ದಾರೆ? ಎಷ್ಟು ನೀಡಿದ್ದಾರೆ? ಎಲ್ಲವೂ ತಿಳಿದಾಗ ರಾಜಕೀಯ ಕ್ಷೇತ್ರ ಹೇಗೆ ಸ್ಪಂದಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...