Sunday, October 6, 2024
Sunday, October 6, 2024

C. T. Ravi ಎಸ್,ಟಿ.ಸಮುದಾಯಕ್ಕೆ ಪರಿಪೂರ್ಣ ಸವಲತ್ತು ನೀಡಿ ಬೆಂಬಲಿಸಿರುವುದು ಬಿಜೆಪಿ ಮಾತ್ರ- ಸಿ.ಟಿ.ರವಿ

Date:

C. T. Ravi ಪರಿಶಿಷ್ಟ ಪಂಗಡ ಸಮುದಾಯದವನ್ನು ತಳಮಟ್ಟದಿಂದ ಎತ್ತಿಹಿಡಿದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಿಷ್ಟಗೊಳಿಸುವ ಮೂಲಕ ಜನಾಂಗದ ಬೆಳವಣಿಗೆಗೆ ಪಕ್ಷವು ನಿರಂತರವಾಗಿ ಸ್ಪಂದಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಜಿಲ್ಲಾ ಎಸ್.ಟಿ. ಮೋರ್ಚಾ ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಗಳ ಮುನ್ನೆಡೆ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ರಾಷ್ಟçಪತಿ ಹುದ್ದೆಯನ್ನು ಹಿಂದುಳಿದ ವರ್ಗದ ಮಹಿಳೆಗೆ ಕಲ್ಪಿಸಿ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನೆಂದು ತಕ್ಕ ಉತ್ತರ ನೀಡಿರುವುದು ಬಿಜೆಪಿ. ಅದಲ್ಲದೇ ಮದಕರಿ ನಾಯಕ, ಓನಕೆ ಓಬವ್ವ, ಬಿಸ್ಸಾ ಮುಂಡ, ವಾಲ್ಮೀಕಿ ಸೇರಿದಂತೆ ಜನಾಂಗದ ಮಹಾಪುರುಷರ ಜಯಂತಿಗೆ ಅಡಿಪಾಯ ಹಾಕಿರುವುದು ಭಾರತೀಯ ಜನತಾ ಪಾರ್ಟಿ ಎಂದು ಬಣ್ಣಿಸಿದರು.
ಜನಾಂಗದ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಶೇ.೩ ರಷ್ಟಿದ್ದ ಮೀಸಲಾತಿಯನ್ನು ಶೇ.೭ಕ್ಕೆ ಏರಿಕೆ ಗೊಳಿಸಿದೆ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ನಿಲ್ಲುವ ಮೂಲಕ ಸಮುದಾಯವನ್ನು ಮುನ್ನೆಡೆಗೆ ತರುವಲ್ಲಿ ಬಹಳಷ್ಟು ಶ್ರಮವಹಿಸಿದ್ದು ಹಲವಾರು ª ಜನಾಂಗದ ಮುಖಂಡರುಗಳಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕಿಸಿ ಕಾಳಜಿ ತೋರಿದೆ ಎಂದರು.
ರಾಜ್ಯದಲ್ಲಿ ಹಲವಾರು ಮಂದಿ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡು ಕೇವಲ ಜಾತಿ ರಾಜಕೀಯ ಮಾಡಿವೆ. ಆದರೆ ಎಸ್.ಟಿ. ಸಮುದಾಯಕ್ಕೆ ಪರಿಪೂರ್ಣ ಸವಲತ್ತು ಒದಗಿಸಿ ಬೆಂಬಲಿಸಿರುವುದು ಬಿಜೆಪಿ ಮಾತ್ರ ಎಂದ ಅವರು ಕಾಂಗ್ರೆಸ್ ರಾಮನ ಇತಿಹಾಸವನ್ನೇ ಕಾಲ್ಪನಿಕ ಎನ್ನುತ್ತಿವೆ. ಹಾಗಾದರೆ ರಾಮಾಯಣ ರಚಿಸಿದ ವಾಲ್ಮೀಕಿಯನ್ನು ಕಾಲ್ಪನಿಕ ಎನ್ನುವ ಮನಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಪ್ರಸ್ತುತ ಕಾಂಗ್ರೆಸ್ ಪಕ್ಷದವರು ಅಧಿಕಾರ ಆಸೆಗಾಗಿ ಮಾತ್ರ ಹಿಂದುಳಿದ ವರ್ಗಕ್ಕೆ ಬೆಂಬಲಿಸುವ ನಾಟಕ ವಾಡುತ್ತಿದೆಯೇ ಹೊರತು ನೈಜವಾಗಿ ಸ್ಪಂದಿಸುವ ಗುಣ ಅವರಲ್ಲಿಲ್ಲ. ಮೋದಿ ನೇತೃತ್ವದ ಕೇಂದ್ರ ಹಾಗೂ ಈ ಹಿಂದೆ ಅಧಿಕಾರ ನಿರ್ವಹಿಸಿದ ಬಿಜೆಪಿ ಸರ್ಕಾರ ಕೊಡುಗೆಗಳೇ ಎಸ್.ಟಿ. ಸಮುದಾಯಕ್ಕೆ ಆರ್ಥಿಕವಾಗಿ ಶಕ್ತಿ ನೀಡಿ ರುವುದು ಸ್ಪಷ್ಟವಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯ, ಚಿತ್ರದ ಕಲ್ಲಿನ ಕೋಟೆ ಸೇರಿದಂತೆ ಇನ್ನಿತರೆ ರಾಜಮಹಾರಾಜರ ಆಧಾರವಾಗಿ ವಾಲ್ಮೀಕಿ ಸಮಾಜ ನಿಂತಿತ್ತು. ಪರಿಶಿಷ್ಟ ಪಂಗಡಗಳ ಶೌರ್ಯ ಪರಂಪರೆಯನ್ನು ಬೇಡರ ಕಣ್ಣಪ್ಪ, ಬಿರ್ಸಾಮುಂಡಾ, ಸುರಪುರದ ವೆಂಕಟಪ್ಪ ನಾಯಕ ಹಾಗೂ ಸಿಂಧೂರ ಲಕ್ಷö್ಮಣ ಸಾರಿದ ಸರ್ವಶ್ರೇಷ್ಟರು ಎಂದು ತಿಳಿಸಿದರು.
C. T. Ravi ಬಹುತೇಕ ಪರಿಶಿಷ್ಟ ಜಾತಿ, ಪಂಗಡಕ್ಕೆ ಗುರುತಿಸಿ ಪ್ರೋತ್ಸಾಹಿಸಿರುವ ಬಿಜೆಪಿಗೆ ಮುಂದಿನ ಚುನಾವಣೆಯ ಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ನಿಮ್ಮಿಂದಾಗಬೇಕಿದೆ. ದೇಶದ ರಕ್ಷಣೆ ಹಾಗೂ ಭದ್ರತೆ ಹಿತದೃಷ್ಟಿಯಿಂದ ಒಂದು ಹೆಜ್ಜೆ ಮುಂದಿಟ್ಟು ನೀವು ಸೇರಿದಂತೆ ನಿಮ್ಮವರನ್ನು ಮನವರಿಸಿ ನರೇಂದ್ರ ಮೋದಿಗೆ ಮತ್ತೊಮ್ಮೆ ಪ್ರಧಾನಿ ಯಾಗಿಸಲು ನಿರ್ಭೀತರಾಗಿ ಕೈಜೋಡಿಸಬೇಕು ಎಂದರು.
ದೇಶದ ಆರ್ಥಿಕ ಭದ್ರತೆ ಮೆಚ್ಚುಗೆ ವ್ಯಕ್ತಪಡಿಸಿ ಮೋದಿಗೆ ಇಡೀ ಪ್ರಪಂಚದ ದೊಡ್ಡ ದೊಡ್ಡ ರಾಷ್ಟçದ ನಾಯ ಕರುಗಳು ಕಳಕಳಿ ವ್ಯಕ್ತಪಡಿಸಿದೆ. ಅಲ್ಲದೇ ಉಕ್ರೇನ್, ಸಿರಿಯಾ, ಪಾಕಿಸ್ತಾನ ಹಾಗೂ ಇಸ್ರೇಲ್‌ನಲ್ಲಿ ಸಿಲುಕಿರುವ ಭಾ ರತೀಯರನ್ನು ಸುರಕ್ಷಿತವಾಗಿ ತವರಿನತ್ತ್ತ ಕರೆತಂದಿರುವುದು ಮೋದಿಬಿಟ್ಟರೆ ಬರ‍್ಯಾವ ನಾಯಕರಿಂದ ಅಸಾಧ್ಯ. ಹೀಗಾಗಿ ಮೋದಿ ಬೆಂಬಲಿಸಿ ದೇಶ ಬೆಳೆಸಬೇಕಿದೆ ಎಂದರು.
ಮಾಜಿ ಗೃಹ ಸಚಿವ ಆರಗಜ್ಞಾನೇಂದ್ರ ಮಾತನಾಡಿ ಬಡವರು ಹಾಗೂ ಹಿಂದುಳಿದ ವರ್ಗದವರು ಚಿಕಿತ್ಸಾ ಸಮಯದಲ್ಲಿ ಹೆಚ್ಚು ಹಣಕಾಸು ಕಟ್ಟಲಾಗದೇ ಸಾವೇ ಕೊನೆಯಘಟ್ಟ ಅಂದುಕೊ0ಡಿದ್ದರು. ಆದರೆ ಕೇಂದ್ರ ಸರ್ಕಾ ರ ದೇಶದ ಪ್ರಜೆಗಳಿಗೆ 5ಲಕ್ಷ ರೂ. ಇನ್ಸೂರೆನ್ಸ್ ಕಲ್ಪಿಸುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸಬೇಕು ಎಂದರು.
ಕೇOದ್ರ ಸರ್ಕಾರದ ಜನಪರ ಯೋಜನೆಗಳು ದೇಶದ ಪ್ರತಿಯೊಂದು ಸಮಾಜಕ್ಕೆ ಸರ್ವಸಮಾನವಾಗಿ ಒದಗಿಸುತ್ತಿದೆ. ಮೋದಿ ಗ್ಯಾರಂಟಿಗಳೇ ಮುಂದಿನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯ. ಹೀಗಾಗಿ ಕಾ ರ್ಯಕರ್ತರು ಎಚ್ಚೆತ್ತುಕೊಂಡು ಲೋಕಸಭಾ ಸಮರದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ದೇಶದ ಬೆಳವ ಣಿಗೆ ಕಾರ್ಯೋನ್ಮುಖರಾಗಿ ದುಡಿಯಬೇಕು ಎಂದು ಸಲಹೆ ಮಾಡಿದರು.
ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ ರಾಜ್ಯಾದ್ಯಂತ ಅತ್ಯಂತ ಹಿಂದುಳಿದ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಪಕ್ಷ ಬಿಜೆಪಿ. ಸರ್ಕಾರ ರಚನೆಗೊಂಡ ಪ್ರತಿ ಸಾರಿಯು ಒಂದಲ್ಲೊAದು ಯೋಜನೆಗಳನ್ನು ಜನಾಂಗಕ್ಕೆ ರೂಪಿಸಿ ಏಳಿಗೆಗೆ ಸಹಕರಿಸುತ್ತಿರುವುದು ಮರೆಯಲಾಗದ ವಿಷಯ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಗ್ಯಾರಂಟಿ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಶಾಸಕ ಸಿ.ಟಿ.ರವಿಯವರ ಜನಾಂಗದ ಮೇಲಿನ ಸಹಕಾರದಿಂದ ಇಂದು ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ. ಕ್ಷೇತ್ರದಲ್ಲೂ ವಾಲ್ಮೀಕಿ ಭವನ ನಿರ್ಮಿಸಿ ಸಮುದಾಯಕ್ಕೆ ಪೂರಕವಾಗಿರುವ ರವಿ ಯವರ ಕಾಳಜಿ ಅವಿಸ್ಮರಣೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಟಿ. ಮೋರ್ಚಾ ಘಟಕದ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಪರಿಶಿಷ್ಟ ಜನಾಂಗದ ಮಹಾಪುರುಷರ ಹಿನ್ನೆಲೆಯನ್ನು ಅರಿತು ರಾಜ್ಯದಲ್ಲಿ ಅಧಿಕೃತ ಆಚರಣೆಗೆ ಸ್ಪಂದಿಸಿದ ಬಿಜೆಪಿಗೆ ಬೆಂಬಲಿಸಬೇಕು. ಜಿಲ್ಲೆಯ ಜನಾಂಗಕ್ಕೂ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಲು ಸಹಕರಿಸಿರುವ ಅನುಕೂಲ ಮಾಡಿಕೊಟ್ಟಿರುವ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸಿದರು.


ಇದೇ ವೇಳೆ ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಅವರಿಗೆ ರಾಜ್ಯಾಧ್ಯಕ್ಷ ಬಂಗಾರ ಹನು ಮಂತ ಪಕ್ಷದ ಬಾವುಟವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ವಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಅನಿಲ್‌ಕುಮಾರ್, ಕಾರ್ಯಕಾರಣಿ ಸಮಿತಿ ಸದಸ್ಯ ರಾಜು ಆಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಂ.ಮಧುಕುಮಾರ್, ಎಂ.ಟಿ.ಶOಕರ್, ಕಾರ್ಯದರ್ಶಿ ನಾಗರಾಜು, ನಗರಾಧ್ಯಕ್ಷ ಪ್ರದೀಪ್, ಮುಖಂಡರುಗಳಾದ ದೀಪಕ್‌ದೊಡ್ಡಯ್ಯ, ಸುನೀಲ್, ಜಗ ದೀಶ್, ಜ್ಞಾನಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದುಖ್ಯಾತ...

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...