Wednesday, February 4, 2026
Wednesday, February 4, 2026

Klive Special Article ನಮಗೆ ಸಂವಿಧಾನವೇ ಪರಮೋಚ್ಚ ಲೇ: ತುಳಸೀರಾಂ

Date:

Klive Special Article ಭಾರತದ ಸಂವಿಧಾನ ವನ್ನು ನಾವು ಒಪ್ಪಿಕೊಂಡು ದಿನಾಂಕ 26.01.1950ರಂದು ಜಾರಿಗೊಳಿಸಿದ ದಿನ ವನ್ನು ಪ್ರತಿವರ್ಷ ನಾವು ಗಣ ರಾಜ್ಯೋತ್ಸವ ದಿನವಾಗಿ ಆಚರಿಸುತ್ತೇವೆ.

ದೇಶದ ಪ್ರತಿಯೊಬ್ಬ ಪ್ರಜೆಗೂ ವ್ಯಕ್ತಿ ಸ್ವಾತಂತ್ರ್ಯ, ಸಹಸಮಾನ ಶಿಕ್ಷಣ, ಪ್ರಜೆಯ ಮೂಲಭೂತ ಹಕ್ಕುಮತ್ತು ಕರ್ತವ್ಯಗಳು , ಧಾರ್ಮಿಕ ಹಕ್ಕುಗಳನ್ನು ಪ್ರತಿಯೊಬ್ಬ ಪ್ರಜೆಗೂ ಒದಗಿಸಿಕೊಟ್ಟ ಈ ಸಂವಿಧಾನವೇ ನಮ್ಮ ಭಾರತದ ಸರ್ವೋಚ್ಚ ಕಾನೂನು ಮತ್ತು ಶಾಸನ. ಭಾರತದ ಸಂವಿಧಾನ ವಿಶ್ವದ ಅತೀ ದೊಡ್ಡ ಸಂವಿಧಾನ ನಮಗೆ ಆದರ್ಶಪ್ರಾಯ.

ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಈ ಐದು ಪ್ರಮುಖ ಮೌಲ್ಯಗಳುಳ್ಳ ಈ ಸಂವಿಧಾನದ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ಈ ಮಹತ್ವ ಪೂರ್ಣಶುಭ ದಿನಕ್ಕೆ ಕಾರಣರಾದ ಮಹಾನ್ ವ್ಯಕ್ತಿಗಳನ್ನು ಸಂಸ್ಮರಿಸುವ ದಿನವೇ ” ಗಣರಾಜ್ಯೋತ್ಸವ “.ಇಂದು ನಾವು 75 ನೇ ಗಣರಾಜ್ಯೋತ್ಸವ ವನ್ನು ಆಚರಿಸುತ್ತಿದ್ದೆವೆ.

ಈ ವರ್ಷ ನಮ್ಮ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ.

ನವದೆಹಲಿಯ ಕರ್ತವ್ಯಪಥದಲ್ಲಿ ಅತ್ಯಂತ ಭವ್ಯವಾದ ರಕ್ಷಣಾ ಪಡೆಗಳ ಪೆರೇಡ್ , ವಿವಿಧ ರಾಜ್ಯಗಳ ಅಭಿವೃದ್ಧಿ ಮತ್ತು ಮಹತ್ವ ಸಾರುವ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಸಾಗುವ ದೃಶ್ಯವಂತೂ ಕಣ್ಮನ ಸೆಳೆಯುತ್ತವೆ.

Klive Special Article ಪ್ರತಿ ವರ್ಷ ಗಣರಾಜ್ಯೋತ್ಸವ ಆಚರಿಸಿ ಸಂವಿಧಾನ ಕ್ಕೆ ಗೌರವ / ವಂದನೆ ಸಲ್ಲಿಸುವ ಈ ಕಾರ್ಯಕ್ರಮ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ.
ಜೈ ಹಿಂದ್.
75 ನೇ ಗಣರಾಜ್ಯೋತ್ಸವದ ಶುಭಾಶಯಗಳು.

ಲೇಖಕರು:
ಎಂ.ತುಳಸಿರಾಂ, ಮೈಸೂರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...