Thursday, October 3, 2024
Thursday, October 3, 2024

District Commissioner Office chikkamagalur ಪ್ರಸ್ತಾಪಿತ 16 ಎಕರೆ ಜಮೀನನ್ನು ವಸತಿರಹಿತರಿಗೆ ನೀಡಲು ಎಎಪಿ ಮನವಿ

Date:

District Commissioner Office chikkamagalur

ಚಿಕ್ಕಮಗಳುರು, ತಾಲ್ಲೂಕಿನ ಗವನಹಳ್ಳಿ ಸಮೀಪವಿರುವ ಸುಮಾರು 16 ಎಕರೆ ಭೂಮಿ ಮಂಜೂರುದಾರರಿಗೆ ಜಮೀನು ಮಾರಾಟ ನಡೆಸಲು ಅವಕಾಶ ನೀಡದೇ ವಸತಿರಹಿತ ಬಡ ಕುಟುಂಬಗಳಿಗೆ ಕಾಯ್ದಿರಿಸಬೇಕು ಎಂದು ಎಎಪಿ ಮುಖಂಡರು ಮಂಗಳವಾರ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಈ ಸಂಬoಧ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದ ಎಎಪಿ ಮುಖಂಡರುಗಳು ಪಂಚಾ ಯಿತಿ ವ್ಯಾಪ್ತಿಯಲ್ಲಿ ಹಲವಾರು ಮಂದಿ ನಿವೇಶನ ರಹಿತರಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ ಸಮರ್ಪಕವಾಗಿ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ಮುಖಂಡರುಗಳು 1978 ರಲ್ಲೇ ಭೂಮಿ ಮಂಜೂರು ಮಾಡಿಸಿಕೊಂಡಿ ರುವವರು ಕೃಷಿ ಚಟುವಟಿಕೆ ಅಥವಾ ಜೀವನೋಪಾಯಕ್ಕೆ ಬಳಸಿಕೊಳ್ಳಬೇಕು ಎಂದಿದೆ. ಆದರೆ ಮಂಜೂರುದಾ ರರು ಇದನ್ನು ಹೊರತುಪಡಿಸಿ ನಿರಂತರವಾಗಿ ಇತರರಿಂದ ಹಣ ಪಡೆದುಕೊಂಡು ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ 2008ರಲ್ಲಿ ಉಪವಿಭಾಗಾಧಿಕಾರಿ ದಯಾನಂದ್ ಅವರು ಪರಿಶೀಲನೆ ನಡೆಸಿ ಮಂಜೂರಾತಿ ಉದ್ದೇಶ ಪಾಲಿಸದಿರುವುದರಿಂದ ಹಾಗೂ ಸ್ವಾಧೀನಾನುಭವನದಲ್ಲಿ ಇಲ್ಲದ ಕಾರಣ ನೀಡಿ ಜಮೀನಿನ ಮಂಜೂರಾತಿಯನ್ನು ಸ್ಪಷ್ಟ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ರದ್ದುಗೊಳಿಸಿ ಶಿಫಾರಸ್ಸಿನ ಕಡಿತ ಹಿಂದಿರುಗಿಸಲಾಗಿದೆ ಎಂದು ಹೇಳಿದರು.

ಆದರೆ ಪುನಃ ಅದೇ ಫಲಾನುಭವಿಗಳು ಖಾಸಗೀ ವ್ಯಕ್ತಿಗಳಿಗೆ ವ್ಯಾಪಾರ ಒಪ್ಪಂದ ಮುಂದುವರೆಸಿ ನಾಲ್ಕು ದಶಕಗಳ ನಂತರ ಗೈರುವಿಲೆ ಭೂಮಾಫಿಯಾದ ಕಡತವನ್ನು ತಯಾರಿಸಿ ಮಾರಾಟಕ್ಕೆ ಮುಂದಾಗಿದೆ. ಅದಲ್ಲದೇ ಭೂಮಿ ಮಂಜೂರುದಾರುಗಳು ಹಣದ ಆಸೆಗಾಗಿ ಮಾರಾಟಕ್ಕೆ ಮುಂದಾಗಿರುವ ದೌರ್ಬಲ್ಯವನ್ನು ಬಳಸಿಕೊಂಡು ಕೆಲವು ಭೂಮಾಫಿಯಾ ವ್ಯಕ್ತಿಗಳು ಪಕ್ಕದ ಸರ್ಕಾರಿ ಜಾಗವನ್ನು ಕಬಳಿಸಲು ಸಂಚು ರೂಪಿಸಿದೆ ಎಂದರು.

ಜಮೀನಿನ ಪ್ರದೇಶವು ನಗರಕ್ಕೆ ಸಮೀಪವಿರುವ ಹಾಗೂ ವಸತಿ ಬಡಾವಣೆಗೆ ಸೂಕ್ತವಾಗಿರುವುದರಿಂದ ನಗರ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ಜಾಗ ಕಾಯ್ದಿರಿಸಿದರೆ ನೂರಾರು ಬಡ ಕುಟುಂಬ ಗಳಿಗೆ ಬಹಳಷ್ಟು ಅನುಕೂಲವಾಗಲಿದ್ದು ಸರ್ವೆ ನಂ.92ರ 16 ಎಕರೆ ಪ್ರದೇಶವನ್ನು ರಾಜೀವ್‌ಗಾಂಧಿ ವಸತಿ ನಿಗಮದಿಂದ ಹಣ ಪಾವತಿಸುವ ಮೂಲಕ ಬಡವರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.

District Commissioner Office chikkamagalurಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಎಎಪಿ ಮಾಧ್ಯಮ ಪ್ರತಿನಿಧಿ ಡಾ.ಕೆ.ಸುಂದರಗೌಡ, ಕಾರ್ಯದರ್ಶಿ ಎಂ.ಪಿ.ಈರೇಗೌಡ, ಮುಖಂಡ ಸುನೀಲ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...

Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ

Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ...

B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ

B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ,...

Mahatma Gandhi ಗಾಂಧಿ ಟೋಪಿ ಧಾರಣೆ ಕೇವಲ ತೋರಿಕೆಯಾಗಬಾರದು. ಆದರ್ಶಗಳ ಪಾಲನೆಯಾಗಬೇಕು-ಡಾ.ಎಚ್.ಬಿ.ಮಂಜುನಾಥ್.

Mahatma Gandhi ಗಾಂಧಿ ಟೋಪಿಯನ್ನು ಧರಿಸುವುದು ಕೇವಲ ತೋರಿಕೆಯಾಗದೆ ಮಹಾತ್ಮರ ಆದರ್ಶಗಳ...