Monday, February 2, 2026
Monday, February 2, 2026

Aam Admi Party ರೈತಸಂಘದ ಚಳವಳಿಗೆ ಆಮ್ ಆದ್ಮಿ ಬೆಂಬಲ- ಡಾ.ಕೆ.ಸುಂದರಗೌಡ

Date:

Aam Admi Party ರಾಜ್ಯಸರ್ಕಾರ ನಿರಂತರವಾಗಿ ಕೃಷಿಕರ ಸೌಲಭ್ಯಗಳಿಗೆ ಕತ್ತರಿಹಾಕಿ ಯಾವುದೇ ಸವಲತ್ತುಗಳನ್ನು ಒದಗಿಸದೇ ಕಂಗಾಲಾಗಿಸಿರುವ ರೈತರ ನೆರವಿಗೆ ರೈತ ಸಂಘವು ಚಳುವಳಿ ಹಮ್ಮಿ ಕೊಂಡಿದ್ದು ಇದಕ್ಕೆ ಆಮ್‌ಆದ್ಮಿ ಪಕ್ಷವು ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಮಾಧ್ಯಮ ಪ್ರತಿನಿಧಿ ಡಾ|| ಕೆ.ಸುಂ ದರಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಡಿ.13 ರಂದು ರೈತಪರ ಹೋರಾಟದಲ್ಲಿ ಸಹಕಾರ ನೀಡಿ ಬೆಂಬಲ ಸೂಚಿಸುವ ಮೂಲಕ ಸಮರ್ಪಕವಾಗಿ ರೈತರ ಸೌಲಭ್ಯಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.

ಇಡೀ ರಾಜ್ಯವನ್ನು ಬರಗಾರ ಪ್ರದೇಶವೆಂದು ಘೋಷಿಸಿರುವ ಸರ್ಕಾರ ಕೇವಲ ಎರಡು ಸಾವಿರ ಹೊರತು ಪಡಿಸಿದರೆ ಬರ‍್ಯಾವ ಸೌಲಭ್ಯ ಒದಗಿಸದೇ ಹಸಿದವನಿಗೆ ಮಜ್ಜಿಗೆ ಊಟ ಬಡಿಸುತ್ತಿದೆ. ಜನತೆಗೆ ಎಲ್ಲವು ಉಚಿತ ವೆಂದು ಗ್ಯಾರಂಟಿಗಳಲ್ಲಿ ಘೋಷಿಸಿದೆ. ಆದರೆ ಕೃಷಿ ಕ್ಷೇತ್ರವು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವ ವೇಳೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಒದಗಿಸದೇ ವಿಫಲತೆಯನ್ನು ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ತಾಲ್ಲೂಕುಗಳನ್ನು ಬರಪೀಡಿತ ಘೋಷಣೆಯಾಗಿದ್ದರೂ ಚಿಕ್ಕಮಗಳೂರು ತಾಲ್ಲೂಕ ನ್ನು ಮಾತ್ರ ಘೋಷಿಸಿಲ್ಲ. ಇದಕ್ಕೆಲ್ಲಾ ಸ್ಥಳೀಯ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ರೆವಿನ್ಯೂ ಇಲಾಖೆಯ ಅವ್ಶೆಜ್ಞಾನಿಕ ಸಮೀಕ್ಷೆಯ ಮೂಲ ಕಾರಣವೇ ಎಂದು ದೂರಿದ್ದಾರೆ.

Aam Admi Party ಕೃಷಿಕರು ಭಿತ್ತಿನ ಬೀಜದ ನಷ್ಟವನ್ನು ಸರಿದೂಗಿಸಲಾಗದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೀವ್ರ ಬರಗಾಲದಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯ ಅಭಾವ ಉಂಟಾಗಿದೆ. ಕೂಲಿ ಕಾರ್ಮಿಕರು ನಿಗಧಿತ ಕೆಲಸವಿಲ್ಲದೇ ಬಡತನಬೇಗೆಯಲ್ಲಿ ಬೇಯಿಸುತ್ತಿದ್ದು ಇದಕ್ಕೆಲ್ಲಾ ಸರ್ಕಾರಗಳ ದುರಾಡಳಿತವೇ ನೇರಹೊಣೆ ಎಂದಿದ್ದಾರೆ.
ಕೃಷಿ ಉತ್ಪತಿಗೆ ಸರ್ಕಾರಿ ನೌಕರರ ವೇತನದ ಸ್ಥಾನಮಾನ ನೀಡಬೇಕು. ಪ್ರತಿವರ್ಷ ವೇತನ ಏರಿಕೆಯಂತೆ ಕೃಷಿ ಉತ್ಪತ್ತಿಯ ಬೆಲೆ ಏರಿಸಬೇಕು. ಇನ್ಸೂರೆನ್ಸ್ ಸರ್ಕಾರವೇ ಭರಿಸಬೇಕು. ೬೦ ವರ್ಷ ಪೂರೈಸಿದ ರೈತರಿಗೆ ಸರ್ಕಾರಿ ನೌಕರರ ಮಾದರಿಯಲ್ಲೇ ಪಿಂಚಣ ವ್ಯವಸ್ಥೆ ಕಲ್ಪಿಸಬೇಕು. ಪ್ರತಿನಿತ್ಯ 07 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಚಳುವಳಿಯಲ್ಲಿ ಭಾಗಿಯಾಗುವುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...