Sunday, August 23, 2026
Sunday, August 23, 2026

Chandrayaan-3 ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಯಶಸ್ವಿ ಸ್ಪರ್ಶವಾಗಲೆಂದು ಶುಭ ಕೋರಿದ ವಿದ್ಯಾರ್ಥಿವೃಂದ

Date:

Chandrayaan-3 ಭಾರತದ ಅತ್ಯಂತ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋˌ ಚಂದ್ರಯಾನ-3ರ ಮೂಲಕ ಕಳುಹಿಸಿರುವ ವಿಕ್ರಂ ಲ್ಯಾಂಡರ್ ಉಪಗ್ರಹವು ನಾಳೆ ಅಂದರೆ ಆಗಸ್ಟ್ 23 ರ ಸಂಜೆ 6-05 ಕ್ಕೆ ಚಂದ್ರನ ನೆಲದ ಮೇಲೆ ಲ್ಯಾಂಡಿಂಗ್ ಆಗಲಿದ್ದು ಈ ಲ್ಯಾಂಡಿಂಗ್ ಅತ್ಯಂತ ಮೃದುವಾಗಿದ್ದು (soft landing) ವಿಜ್ಞಾನಿಗಳಿಗೆ ಬೇಕಾದ ಚಂದ್ರನ ಬಗೆಗಿನ ಎಲ್ಲ ಮೌಲಿಕ ಮಾಹಿತಿಗಳನ್ನು ರವಾನಿಸಲಿ ಎಂಬ ಶುಭ ಹಾರೈಕೆಗಳನ್ನು ರೋಟರಿ ಪೂರ್ವ ಆಂಗ್ಲ ಶಾಲೆಯ ಕಲಾಂ ಸ್ಪೇಸ್ ಕ್ಲಬ್ ನ ವಿದ್ಯಾರ್ಥಿಗಳುˌ ಶಿಕ್ಷಕರುˌ ಶಿಕ್ಷಕ ಮಾರ್ಗದರ್ಶಕಿ ಶ್ರೀಮತಿ ಸುಷ್ಮಾˌˌ ಪ್ರಾಂಶುಪಾಲ ಶ್ರೀ ಸೂರ್ಯನಾರಾಯಣನ್ ˌ ಆಡಳಿತ ಮಂಡಳಿಯ ಅಧ್ಯಕ್ಷˌ ರೊ. ಚಂದ್ರಶೇಖರಯ್ಯ ಎಂˌ ಖಜಾಂಚಿ ವಿಜಯ ಕುಮಾರ್ ಜಿˌಇನ್ನರ್ ವ್ಹೀಲ್ ಸದಸ್ಯೆ ಶ್ರೀಮತಿ ಬಿಂದು ವಿಜಯ ಕುಮಾರ್ ಮುಂತಾದವರು ಕೋರಿದರು.

Chandrayaan-3 ಇದೇ ಸಂದರ್ಭದಲ್ಲಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿˌ ರೊ. ಚಂದ್ರಶೇಖರಯ್ಯ ಎಂ ಇವರು ಇದೇˌ ಆಗಸ್ಟ್ 23 ರಂದು ಸಂಜೆ ನಡೆಯುವ ವೈಜ್ಞಾನಿಕ ಸನ್ನಿವೇಷವು ವಿಜ್ಞಾನ ಕ್ಷೇತ್ರದಲ್ಲಿ ಒಂದು ಮೈಲುಗಲ್ಲಾಗಿದ್ದು ಅದನ್ನು ರೋಟರಿ ಸಭಾಂಗಣದಲ್ಲಿ ಪ್ರೊಜೆಕ್ಟರ್ ಮೂಲಕ ಪರದೆಯ ಮೇಲೆ ತೋರಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ಟ್ರಸ್ಟ್ ನ ಉಪಾಧ್ಯಕ್ಷ ಹಾಗೂ ಕ್ಲಬ್ ನ ಮೆಂಟರ್ ಡಾ. ಪರಮೇಶ್ವರ್ ಇವರು ಮಾಡಿದ್ದುˌ ಈ ಕಾರ್ಯ ಕ್ರಮದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳುˌ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಪಡೆದುಕೊಳ್ಳಬೇಕೆಂದು ಕೋರಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...