Tuesday, December 16, 2025
Tuesday, December 16, 2025

Poet Vithalrao Gaddar ಕ್ರಾಂತಿಕಾರಿ ದಲಿತ ಕವಿ ಗದ್ದರ್ ಗೆ ಶ್ರದ್ಧಾಂಜಲಿ

Date:

Poet Vithalrao Gaddar ಕ್ರಾಂತಿಕಾರ ದಲಿತ ಕವಿ ಹಾಗೂ ಹೋರಾಟಗಾರ ವಿಠಲರಾವ್ ಗದ್ದರ್‌ರವರು ಅಗಲಿದ ಹಿನ್ನೆಲೆಯಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮುಖಂಡರುಗಳು ಶ್ರದ್ದಾಂಜಲಿ ಸಲ್ಲಿಸಿದರು.

ಈ ವೇಳೆ ದಸಂಸ ತಾಲ್ಲೂಕು ಅಧ್ಯಕ್ಷ ಜೆ.ರಾಮಚಂದ್ರ ಮಾತನಾಡಿ ಜನಸಾಮಾನ್ಯರ ಪ್ರಜಾಕವಿ ಹಾಗೂ ಕ್ರಾಂತಿಕಾರ ಹೋರಾಟಗಾರ ಗದ್ದರ್ ಅವರು ಶೋಷಿತರು ತುಳಿತ್ತಕೊಳಗಾದವರ ಪರವಾಗಿ ಹಾಡು ಬರೆದು ಜನರಲ್ಲಿ ಜಾಗೃತಿ ಮೂಡಿಸಿದವರು ಎಂದು ಹೇಳಿದರು.

೧೯೪೯ ರಲ್ಲಿ ಜನಿಸಿದ ಗುಮ್ಮಡಿ ವಿಠಲ್‌ರಾವ್, ತೆಲಂಗಾಣದ ಚಳುವಳಿಗೆ ಸೇರ್ಪಡೆಗೊಂಡರು. ಹಿಂದುಳಿದ ಜಾತಿಗಳು, ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದರು. ಹಾಡುಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡು ಹೆಚ್ಚಿನ ಜನಮನ್ನಣೆ ಪಡೆದುಕೊಂಡಿದ್ದರು. ಜೈ ಬೋಲೋ ತೆಲಂಗಾಣದ ಚಿತ್ರದಲ್ಲಿ ಹಾಡಿದ್ದ ಗದ್ದರ್ ಅವರಿಗೆ ನಂದಿ ಪ್ರಶಸ್ತಿ ಲಭಿಸಿತ್ತು ಎಂದರು.

Poet Vithalrao Gaddar ಗದ್ದರ್ ಅವರು ರಾಜ್ಯದ ಗಡಿಪ್ರದೇಶಗಳಲ್ಲಿ ತಮ್ಮ ಕ್ರಾಂತಿಗೀತೆಗಳು ಮತ್ತು ಕ್ರಾಂತಿಕಾರ ಎಡಪಂಥಿಯ ಹೋರಾಟ ಮೂಲಕ ಖ್ಯಾತರಾಗಿದ್ದರು. ಹಲವು ಬಾರಿ ಸೆರೆವಾಸ ಅನುಭವಿಸಿ ಪೊಲೀಸರಿಂದ ಶೋಷಣೆಗೆ ಒಳಗಾಗಿದ್ದವರು. ಇವರ ನಿಧನ ಹೋರಾಟಗಾರರಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ದಸಂಸ ತಾಲೂಕು ಸಂಘಟನಾ ಸಂಚಾಲಕರಾದ ಮೌಂಟ, ಲಕ್ಕವಳ್ಳಿ ಹೋಬಳಿ ಸಂಚಾಲಕ ಮುನಿಯಾ, ಮುಖಂಡರುಗಳಾದ ಕಿರಣ್, ವಿಕಾಸ್, ಮಂಜುನಾಥ್, ಮಹೇಂದ್ರಸ್ವಾಮಿ, ಎಂ.ಸಿ.ಹಳ್ಳಿ ರಮೇಶ್ ಮತ್ತತಿರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...