Karnataka Neeravari Nigam Limited 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಂಗಾ ಎಡದಂಡೆ
ಕಾಲುವೆಯಲ್ಲಿ ಮಳೆಯ ನೀರಿನ ಹರಿವಿನಿಂದ ಕಸಕಡ್ಡಿ ಮತ್ತು
ಮಣ್ಣು ಹರಿದು ಬಂದು ತುಂಗಾ ಎಡದಂಡೆ ಕಾಲುವೆಯ ಸರಪಳಿ
೨೦.೦೦ ಕಿ.ಮೀ. ನಲ್ಲಿರುವ ಸುರಂಗ ಮಾರ್ಗದಲ್ಲಿ
ಸಿಲುಕಿರುವುದರಿಂದ ಸುರಂಗ ಮಾರ್ಗದಲ್ಲಿ ನೀರು ಸರಾಗವಾಗಿ
ಹರಿದುಬರಲು ಅಡಚಣೆಯಾಗಿದೆ. ಈ ಸುರಂಗ ಮಾರ್ಗವನ್ನು
ಸ್ವಚ್ಛಗೊಳಿಸಲು ೩ ರಿಂದ ೫ ದಿನಗಳ ಕಾಲಾವಕಾಶ
ಬೇಕಾಗಿರುವುದರಿಂದ ಕಾಲುವೆಯಲ್ಲಿ ನೀರಿನ ಹರಿವಿನ ಪ್ರಮಾಣ
ಕಡಿಮೆಯಾಗುವ ಸಂಭವವಿದೆ.
Karnataka Neeravari Nigam Limited ತುಂಗಾ ಎಡದಂಡೆ ಕಾಲುವೆಯ
ಅಚ್ಚುಕಟ್ಟು ಭಾಗದ ರೈತರು ಸಹಕರಿಸುವಂತೆ ಕನೀನಿನಿ
ತುಂ.ಮೇ.ಯೋ.ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮನವಿ ಮಾಡಿದ್ದಾರೆ.
