Monday, May 4, 2026
Monday, May 4, 2026

Klive Special Article ಮಹಿಳೆಯರನ್ನ ಕೀಳಾಗಿ ಕಾಣುವ ಕಾಲ ಇನ್ನೂ ಕಳೆದಿಲ್ಲವೆ?

Date:

Klive Special Article ಯಾಕೋ ಈ ಭೂಮಿಯ ಮೇಲೆ ಬದುಕಲು ಭಯವಾಗುತಿದೆ;
ನಿನ್ನೆ ಅವಳು, ನಾಳೆ ನಾನೋ? ಅಥವಾ ಮನೆಯ ಅಕ್ಕ ತಂಗಿಯೋ , ಯಾವುದೋ ಕುಟುಂಬದ ಇನ್ಯಾವ ಹೆಣ್ಣೋ ಎಂಬ ಪ್ರಶ್ನೆ ಸದಾ ಕಾಡುತಿದೆ…

ಆಕೆಯ ಚಿತೆಗೆ ಬೆಂಕಿ ಇಟ್ಟ (ಬದುಕಿಗೆ) ಈ ಕೆಟ್ಟ ಸಮಾಜ , ನಾಳೆ ನಾವಾದರೇನು ? ಯಾರಾದರೇನು?….

ಬೆಂಕಿಯೇ ಹಚ್ಚುವರೋ , ಅಥವಾ ಕೊಳೆತು ಹಾಗೆಯೇ ಹೋಗಲಿ ಎಂದು ಬಿಟ್ಟು ಬಿಡುವರೋ ಒಂದೂ ಅರಿಯದು!….

ಮಾನವೀಯತೆಯನ್ನೇ ಮರೆತ ಮಾನವರು , ಇದ್ದರೂ ಧ್ವನಿ ಎತ್ತಿ ಮಾತನಾಡುವವರಿಲ್ಲ,
ಬೇಡದ ವಿಷಯಗಳಿಗೆ ಟೀಕಿಸಿ ಹಂಗಿಸುವ ಜನ ಇಂತಹ ಪರಿಸ್ಥಿತಿಯಲ್ಲಿ ಸುಮ್ಮನಿರುವುದೇಕೋ…?
ನ್ಯಾಯ ಎಲ್ಲಿದೆಯೋ ತಿಳಿಯದಾಗಿದೆ…..

ಮನೆಯಿಂದ ಹೊರಹೋಗಲೂ ಹತ್ತು ಸಲ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ..
ಹೆಣ್ಣು ದೇವತೆ, ಹೆಣ್ಣು ಶಕ್ತಿ ಎಂದೆಲ್ಲ ಹೇಳುವವರು ,ಈಗ ಆಕೆಯ ರಕ್ಷಣೆ ಸಮಯದಲ್ಲಿ ಮೌನಯಾಗಿರುವುದೇಕೋ?..

ಯಾಕೆ ಹೆಣ್ಣಿಗೆ ಇಷ್ಟೋಂದು ಶಿಕ್ಷೆ ತಿಳಿಯದು..

ಒಂಬತ್ತು ತಿಂಗಳು ತನ್ನ ಗರ್ಭದಲ್ಲಿಟ್ಟು ಜೀವನ ಪೂರ್ತಿ ಸಾಕಿ ಸಲಹಿದಕ್ಕೆ ಈ ಶಿಕ್ಷೆಯೋ?..
ನಿಸ್ವಾರ್ಥಿಯಾಗಿ ವರ್ಷದ ಮುನ್ನೂರ ಅರವತ್ತೈದು ದಿನ ವಿಶ್ರಾಂತಿ ಪಡೆಯದೇ , ತನ್ನ ಕುಟುಂಬಕ್ಕಾಗಿ ಜೀವಮಾನವನ್ನೆ ಸವೆಸಿದ್ದಕ್ಕಾಗಿ ಈ ಶಿಕ್ಷೆಯೋ?…

ಅಥವಾ ತಾನು ಉಪವಾಸವಿದ್ದು, ತನ್ನ ಕುಟುಂಬದವರಿಗೆ ಉಣಬಡಿಸಿದ್ದಕ್ಕಾಗಿ ಈ ಶಿಕ್ಷೆಯೋ..

ಇಲ್ಲವೇ, ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ಅತ್ತೆಯಾಗಿರುದಕ್ಕೋ….

ತನ್ನ ತವರನ್ನ, ಗಂಡನ ಮನೆಯನ್ನ ಬೆಳಗುವುದಕ್ಕಾಗಿ ಈ ಶಿಕ್ಷೆಯೋ?..

ಅಥವಾ ಹೆಣ್ಣಾಗಿ ಹುಟ್ಟಿದ್ದಕ್ಕಾಗಿಯೇ ಈ ಶಿಕ್ಷೆಯೋ…? ಒಂದೂ ತಿಳಯದೇ ಮಾತುಗಳು ಗಂಟಲಲ್ಲೇ ಮೌನ ತಾಳಿವೆ….

ದೇಶ ಕಾಯಲು ಗಡಿಯಲ್ಲಿ ಸೈನಿಕರಿದ್ದಾರೆ, ಆದರೆ ದೇಶದೊಳಗಿನ ಹೆಣ್ಣನ್ನು ಕಾಯಲು ಯಾರೂ ಇಲ್ಲ…

Klive Special Article ಬೇಲಿಯೇ ಎದ್ದು ಹೊಲ ಮೇಯುವುದು ಸತ್ಯವಾಗಿದೆ..
ಎಂತಹ ವಿಪರ್ಯಾಸ….

ಲೇ: ಅಂಜುಮ್.ಬಿ.ಎಸ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...