ಕೃಷಿ ಸಾಲ ವಿತರಣೆಯನ್ನು ಏಕೀಕೃತ ತಂತ್ರಾಶ ವ್ಯವಸ್ಥೆ ಈ ತನಕ ಇರಲಿಲ್ಲ. ಆ ದೋಷವನ್ನೇ ದುರ್ಬಳಕೆ ಮಾಡಿಕೊಂಡಿದ್ದ ರಾಜಕೀಯ ಪ್ರಭಾವಿಗಳು, ನಾನಾ ಹಣಕಾಸು ಸಂಸ್ಥೆಗಳಿಂದ ಸಬ್ಸಿಡಿ ಸಾಲ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಹಾಗೂ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ತಲುಪಿಸಲು ರಾಜ್ಯ ಸರ್ಕಾರವು ನೂತನ ತಂತ್ರಾಂಶ ವೇದಿಕೆ ಸಿದ್ಧಪಡಿಸಿದೆ.
ನೂತನ ತಂತ್ರಾಂಶದಿಂದ ಸಹಕಾರ ಕ್ಷೇತ್ರದ ಸೇವೆಯಲ್ಲಿ ಕೃಷಿ ಸಾಲ ವಿತರಣೆಯು ಕ್ರಾಂತಿಕಾರಿ ಬೆಳವಣಿಗೆ ಆಗಲಿದೆ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಶಂಕರ್ ಅವರು ತಿಳಿಸಿದ್ದಾರೆ.
ಬ್ಯಾಂಕಿಂಗ್ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಎಲ್ಲಾ ರೀತಿಯ ಕೃಷಿ ಸಾಲ ವಿತರಣೆ Fruits – Bank ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ವಾಣಿಜ್ಯ ಬ್ಯಾಂಕ್ ಗಳಲ್ಲಿ ಈಗಾಗಲೇ ಈ ಸೇವೆ ಆರಂಭವಾಗಿದೆ.
ಕೃಷಿ ಭೂಮಿಯ ಮಾರಾಟ, ಕೊಳ್ಳುವಿಕೆ, ಪಹಣಿಯಲ್ಲಿ ಸಾಲ ಇರುವ ಬಗ್ಗೆ ಇಸಿ ಸರ್ಟಿಫಿಕೇಟ್ ಒದಗಿಸುವುದು ಸೇರಿದಂತೆ ಇತರ ಕಾರ್ಯಗಳಿಗೆ ತಹಶೀಲ್ದಾರ್ ಕಚೇರಿಗಳು ಕಾವೇರಿ ತಂತ್ರಾಂಶ ಬಳಸುತ್ತಿವೆ. ಭೂ ದಾಖಲೆ ನೀಡುವ ನೊಂದಣಿ ಇಲಾಖೆಯ ಭೂಮಿ ತಂತ್ರಾಂಶ ದ ಜೊತೆಗೆ ರೈತರು ಪಡೆಯುವ ಸೌಲಭ್ಯಗಳ ತಂತ್ರಾಂಶ ಸಂಗ್ರಹಣೆಗೆ ಕೃಷಿ ಇಲಾಖೆಯು ಬೇರೆ ತಂತ್ರಾಂಶವನ್ನು ಬಳಸುತ್ತಿದೆ. ಇವನ್ನು ಸಂಯೋಜಿಸಿ ಸೃಷ್ಟಿಸಿರುವ ನೂತನ ವೆಬ್ ಪೋರ್ಟಲ್ ಫ್ರೂಟ್ಸ್ ಬ್ಯಾಂಕ್ ಆಗಿದೆ.
ಫ್ರೂಟ್ಸ್ ಬ್ಯಾಂಕ್ ವೆಬ್ ಪೋರ್ಟಲ್ ಮೂಲಕ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಲ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಕೃಷಿ ಕ್ಷೇತ್ರ ಸಾಲ ಸೌಲಭ್ಯ : ತಂತ್ರಾಂಶ ಸಿದ್ಧ
Date: