Sunday, November 16, 2025
Sunday, November 16, 2025

ಕಗ್ಗಂಟಾಗಿರುವ ಡೀಮ್ಡ್ ಲ್ಯಾಂಡ್.

Date:

ರಾಜ್ಯದ್ಯಂತ ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ ( ಸಿ ಆಂಡ್ ಡಿ) ಸಂಕೋಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ಸಿಲುಕಿದ್ದು, ರೈತರ ನೆಮ್ಮದಿಗೆ ಅಡ್ಡಿಯಾಗಿದೆ. ಅನೇಕ ದಶಕಗಳಿಂದ ಉಳುಮೆ ಕಾಣುತ್ತಿರುವ ಈ ಭೂಮಿಗೆ ದಾಖಲೆಗಳನ್ನು ಪಡೆಯಲು ರೈತರು ಹೆಣಗಾಡುತ್ತಿದ್ದಾರೆ. ಕಂದಾಯ ಮತ್ತು ಅರಣ್ಯ ಇಲಾಖೆ ನಡುವೆ ಡೀಮ್ಡ್ ಜಟಾಪಟಿಗೆ ಅಂತ್ಯವಿಲ್ಲದಂತಾಗಿದೆ.
ಕೃಷಿ ಚಟುವಟಿಕೆಗೆ ಪೂರಕವಲ್ಲದ ಬೆಟ್ಟ, ಬಾಣೆ, ಜಮ್ಮಾ,ಪೈಸಾರಿ,ಕಾನ, ಕುಮ್ಕಿ ಸೇರಿದಂತೆ ನೀರಾವರಿ ಪ್ರದೇಶವಲ್ಲದ ಭೂಮಿಯನ್ನು ಸಿ ಆಂಡ್ ಡಿ ಅಥವಾ ಡೀಮ್ಡ್ ಲ್ಯಾಂಡ್ ಎನ್ನಲಾಗುತ್ತದೆ.
ರಾಜ್ಯದಲ್ಲಿ 9.94 ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಅರಣ್ಯ ಪ್ರದೇಶದಲ್ಲಿದೆ. ಇದರಲ್ಲಿ 6.64 ಲಕ್ಷ್ಮಿ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಸರ್ಕಾರದಿಂದ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸುವಂತೆ ಅಂತಿಮ ಹಂತದಲ್ಲಿದೆ. ಈ ಸಮಸ್ಯೆ ಶೀಘ್ರ ಬಗೆ ಹರಿಯಲಿದೆ ಎಂದು ಕಂದಾಯ ಸಚಿವರಾದ ಆರ್.
ಅಶೋಕ್ ತಿಳಿಸಿದ್ದಾರೆ.
ಡೀಮ್ಡ್, ಸಿ ಆಂಡ್ ಲ್ಯಾಂಡ್ ವಿಚಾರ ಕೋರ್ಟ್ ನಲ್ಲಿದೆ. ಅರಣ್ಯ ಇಲಾಖೆ ವ್ಯಾಪ್ತಿಗೆ 4 ಲಕ್ಷ
ಹೆಕ್ಟೇರ್ ಭೂಮಿ ಒಳಪಡುವ ಬಗ್ಗೆ ಸರ್ವೆ ಮಾಡಿರುವ ಅಂಶ ಗಮನಕ್ಕೆ ಬಂದಿದೆ. ಅಂತಿಮವಾಗಿ ಕಂದಾಯ, ಅರಣ್ಯ ಇಲಾಖೆಗಳಿಗೆ ನಿರ್ದಿಷ್ಟ ಭೂಮಿಯನ್ನು ಬಿಟ್ಟು ಕೊಡುವ ವರದಿಯನ್ನು ಕೋರ್ಟ್ ಗೆ ಸರಕಾರ ಸಲ್ಲಿಸಿದೆ ಎಂದು ಅರಣ್ಯ ಸಚಿವರಾದ ಉಮೇಶ ಕತ್ತಿ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಶಿವಮೊಗ್ಗದ ಎಸ್.ಕೆ.ಮರಿಯಪ್ಪ ಅವರಿಗೆ “ಸಹಕಾರಿ ರತ್ನ” ಪ್ರಶಸ್ತಿ ಪ್ರದಾನ

CM Siddharamaiah ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ 72ನೇ...

World Diabetes Day ಮಧುಮೇಹವನ್ನ ಆರಂಭಿಕ ಪತ್ತೆ ಮತ್ತು ನಿಯಮಿತ ಪರೀಕ್ಷೆ ಮೂಲಕ ನಿಯಂತ್ರಿಸಬಹುದು- ಡಾ.ನಾಗರಾಜ ನಾಯ್ಕ್

World Diabetes Day ಮಧುಮೇಹವು ಸಾಂಕ್ರಾಮಿಕವಲ್ಲದ ಅತ್ಯಂತ ಅಪಾಯಕಾರಿ ಕಾಯಿಲೆಯಾಗಿದ್ದು, ಇದನ್ನು...

ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಶಿವಮೊಗ್ಗದ ಜಿ.ಎಂ.ಜಗದೀಶ್ ನಿರ್ದೇಶಕರಾಗಿ ಆಯ್ಕೆ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಗುತ್ತಿಗೆದಾರರ ಸಮಿತಿಗೆ ನಿರ್ದೇಶಕರಾಗಿ ಶಿವಮೊಗ್ಗ...