Monday, August 17, 2026
Monday, August 17, 2026

ಕೃಷಿ ಕ್ಷೇತ್ರ ಸಾಲ ಸೌಲಭ್ಯ : ತಂತ್ರಾಂಶ ಸಿದ್ಧ

Date:

ಕೃಷಿ ಸಾಲ ವಿತರಣೆಯನ್ನು ಏಕೀಕೃತ ತಂತ್ರಾಶ ವ್ಯವಸ್ಥೆ ಈ ತನಕ ಇರಲಿಲ್ಲ. ಆ ದೋಷವನ್ನೇ ದುರ್ಬಳಕೆ ಮಾಡಿಕೊಂಡಿದ್ದ ರಾಜಕೀಯ ಪ್ರಭಾವಿಗಳು, ನಾನಾ ಹಣಕಾಸು ಸಂಸ್ಥೆಗಳಿಂದ ಸಬ್ಸಿಡಿ ಸಾಲ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಹಾಗೂ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ತಲುಪಿಸಲು ರಾಜ್ಯ ಸರ್ಕಾರವು ನೂತನ ತಂತ್ರಾಂಶ ವೇದಿಕೆ ಸಿದ್ಧಪಡಿಸಿದೆ.
ನೂತನ ತಂತ್ರಾಂಶದಿಂದ ಸಹಕಾರ ಕ್ಷೇತ್ರದ ಸೇವೆಯಲ್ಲಿ ಕೃಷಿ ಸಾಲ ವಿತರಣೆಯು ಕ್ರಾಂತಿಕಾರಿ ಬೆಳವಣಿಗೆ ಆಗಲಿದೆ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಶಂಕರ್ ಅವರು ತಿಳಿಸಿದ್ದಾರೆ.
ಬ್ಯಾಂಕಿಂಗ್ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಎಲ್ಲಾ ರೀತಿಯ ಕೃಷಿ ಸಾಲ ವಿತರಣೆ Fruits – Bank ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ವಾಣಿಜ್ಯ ಬ್ಯಾಂಕ್ ಗಳಲ್ಲಿ ಈಗಾಗಲೇ ಈ ಸೇವೆ ಆರಂಭವಾಗಿದೆ.
ಕೃಷಿ ಭೂಮಿಯ ಮಾರಾಟ, ಕೊಳ್ಳುವಿಕೆ, ಪಹಣಿಯಲ್ಲಿ ಸಾಲ ಇರುವ ಬಗ್ಗೆ ಇಸಿ ಸರ್ಟಿಫಿಕೇಟ್ ಒದಗಿಸುವುದು ಸೇರಿದಂತೆ ಇತರ ಕಾರ್ಯಗಳಿಗೆ ತಹಶೀಲ್ದಾರ್ ಕಚೇರಿಗಳು ಕಾವೇರಿ ತಂತ್ರಾಂಶ ಬಳಸುತ್ತಿವೆ. ಭೂ ದಾಖಲೆ ನೀಡುವ ನೊಂದಣಿ ಇಲಾಖೆಯ ಭೂಮಿ ತಂತ್ರಾಂಶ ದ ಜೊತೆಗೆ ರೈತರು ಪಡೆಯುವ ಸೌಲಭ್ಯಗಳ ತಂತ್ರಾಂಶ ಸಂಗ್ರಹಣೆಗೆ ಕೃಷಿ ಇಲಾಖೆಯು ಬೇರೆ ತಂತ್ರಾಂಶವನ್ನು ಬಳಸುತ್ತಿದೆ. ಇವನ್ನು ಸಂಯೋಜಿಸಿ ಸೃಷ್ಟಿಸಿರುವ ನೂತನ ವೆಬ್ ಪೋರ್ಟಲ್ ಫ್ರೂಟ್ಸ್ ಬ್ಯಾಂಕ್ ಆಗಿದೆ.
ಫ್ರೂಟ್ಸ್ ಬ್ಯಾಂಕ್ ವೆಬ್ ಪೋರ್ಟಲ್ ಮೂಲಕ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಾಲ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಮುಖ ಧ್ಯೇಯವೇ ದೇಶಪ್ರೇಮ- ಶಕುಂತಳಾ ಚಂದ್ರಶೇಖರ್

Bharat Scouts and Guides ನಮ್ಮ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಭಾರತ್...

Chamber of commerce Shivamogga ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಜಾಗತಿಕವಾಗಿ ಗಂಭೀರ ಸಮಸ್ಯೆಯಾಗಿದೆ: ಆರ್.ಮನೋಹರ್

Chamber of commerce Shivamogga ಶಿವಮೊಗ್ಗ ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್...

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...