Thursday, December 11, 2025
Thursday, December 11, 2025

ಸೇನಾ ಕಾರ್ಯನಿರತರಿಗೆ ಉಕ್ಕಿನ ತಂಗುದಾಣ

Date:

ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡು ಎತ್ತರದ, ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ ಸಿಬ್ಬಂದಿಯು, ಜೀವನ ಗುಣಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಉಕ್ಕಿನಿಂದ ನಿರ್ಮಿಸಿದ ತಂಗುದಾಣ ಪಡೆಯಲಿದ್ದಾರೆ.
ಉಕ್ಕಿನ ಹಾಳೆಗಳನ್ನು ಬಳಸಿ ನಿರ್ಮಿಸಲಾದ ಶೌಚಾಲಯ, ಅಡುಗೆ ಕೋಣೆ, ವಿರಾಮ ಕೋಣೆಯ ಮಾದರಿಗಳನ್ನು ಎಸ್ ಡಿಎಲ್ ಗಳಲ್ಲಿ ಅಳವಡಿಸಲಾಗುತ್ತದೆ. ಮೊದಲ ಹಂತದ ಜಾರಿ ನಂತರ ಇನ್ನೂ ಹೆಚ್ಚಿನ ಎಸ್ ಬಿಎಂ ಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು ಎಂಬ ಮಾಹಿತಿ ದೊರೆತಿದೆ.
ಗಡಿಯ ಮುಂಚೂಣಿ ರಕ್ಷಣಾ ನೆಲೆ ಸಿಬ್ಬಂದಿಗಳ ಜೀವನ ಗುಣಮಟ್ಟ ಉತ್ತಮಗೊಳಿಸಲು ಕ್ರಮಕೈಗೊಳ್ಳಲಾಗಿದೆ.
ಬಿಎಸ್ಎಫ್ ಸಿಬ್ಬಂದಿ ಸ್ವತಂತ್ರವಾಗಿ ಅಥವಾ ಸೇನೆ ಜೊತೆಗೂಡಿ ಕಾರ್ಯ ನಿರ್ವಹಿಸಲಿದ್ದಾರೆ. ಗಡಿ ನಿಯಂತ್ರಣ ರೇಖೆಯ ವ್ಯಾಪ್ತಿ ಒಟ್ಟು 772 ಕಿ.ಮೀ. ಆಗಿದ್ದು, ಈ ಪೈಕಿ ಸುಮಾರು 430 ಕಿ.ಮೀ. ಉದ್ದದ ಅಂತರವು ಜಮ್ಮು ಮತ್ತು ಕಾಶ್ಮೀರದ ವ್ಯಾಪ್ತಿಯಲ್ಲಿದೆ.
ಬಿಎಸ್ಎಫ್ ನ ಅಧಿಕಾರಿ ಮೂಲಗಳ ಪ್ರಕಾರ, ಗಡಿನಿಯಂತ್ರಣ ರೇಖೆಯುದ್ದಕ್ಕೂ ಇರುವ ಇಂತಹ ಸುಮಾರು 115 ಎಫ್ ಡಿಎಲ್ ಗಳ ತಂಗುದಾಣಗಳನ್ನು ಉಕ್ಕಿನಿಂದ ನಿರ್ಮಿಸಿದ ವಿಶಾಲ ತಂಗುದಾಣಗಳಾಗಿ 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿ ಇದೆ.
ಪ್ರಧಾನ ನಿರ್ದೇಶಕರು ಈ ಬಗ್ಗೆ ಮರುಬಳಕೆ ಇಂಧನ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ, ಈ ಎಫ್ ಡಿಎಲ್ ಗಳಿಗೆ ಸೋಲಾರ್ ಆಧಾರಿತ ವಿದ್ಯುತ್ ಯೋಜನೆ ಮಂಜೂರಾತಿ ಕೋರಿದ್ದು, ಇದಕ್ಕೆ ಔಪಚಾರಿಕ ಸಮ್ಮತಿ ದೊರೆತಿದೆ. ಈ ತಂಗುದಾಣಗಳಲ್ಲಿ ಸದ್ಯ ಅಡುಗೆ ಇನ್ನಿತರ ಉದ್ದೇಶಗಳಿಗೆ ಸೀಮೆಎಣ್ಣೆ ಮತ್ತು ಡೀಸೆಲ್ ಅವಲಂಬಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Human Rights Commission ಹಕ್ಕು-ಕರ್ತವ್ಯ ಪಾಲನೆಯೊಂದಿಗೆ ಇತರರ ಹಕ್ಕುಗಳನ್ನು ಗೌರವಿಸಿ : ಹೇಮಂತ್ ಎನ್

Human Rights Commission ಎಲ್ಲರನ್ನು ಸಮಾನವಾಗಿ ಕಾಣುವುದು ಕೂಡ ಮಾನವ ಹಕ್ಕಾಗಿದ್ದು,...

ಅಬಕಾರಿ ದಾಳಿ: 51.75 ಲೀ ಗೋವಾ ಮದ್ಯ ಪತ್ತೆ

ಶಿವಮೊಗ್ಗ ತಾಲೂಕು ಗೋವಿಂದಪುರ ಗ್ರಾಮದ ಶಿವಕುಮಾರ್ ಬಿನ್ ವರದರಾಜ್ ಇವರಿಗೆ ಸೇರಿದ...

Sahyadri Narayana Hospital ವೈದ್ಯರ ಚಿಕಿತ್ಸೆಯಿಂದ ತಾಯಿಗೆ ದೃಷ್ಟಿ, ಅವಧಿಪೂರ್ವ ಮಗುವಿಗೆ ಜೀವದಾನ

Sahyadri Narayana Hospital 25 ವರ್ಷದ ಯುವತಿ ಗಂಡನ ಜೊತೆ ಸಂತೋಷವಾಗಿದ್ದಳು....

Akashavani Bhadravati ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್ ಮತ್ತು ಬದುಕು ಜಟಕಾಬಂಡಿ ವಿಶೇಷ ಕಾರ್ಯಕ್ರಮಗಳ ಪ್ರಸಾರ

Akashavani Bhadravati ಡಿ 15 ರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಪ್ರತಿದಿನ...