Thursday, July 9, 2026
Thursday, July 9, 2026

ಮಳೆ : ಸಂಶೋಧನಾ ಕೇಂದ್ರಕ್ಕೆ ಧಕ್ಕೆ

Date:

ಕಳೆದ ಎರಡು ವಾರಗಳಿಂದ ಬಿಟ್ಟು ಬಿಡದೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ.

ಜಕ್ಕೂರಿನ ಜವಾಹರ ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ನೆಲಮಹಡಿಯ ಪ್ರಯೋಗಾಲಯಗಳಿಗೆ ನೀರು ನುಗ್ಗಿದೆ. ಇದರಿಂದ ಸಂಶೋಧನೆಗೆಂದು ಬಳಸುತ್ತಿದ್ದ ಜೀವಕೋಶಗಳು, ಆಕಾರ ಕೋಶಗಳು, ವೈರಾಣುಗಳ ಮಾದರಿಗಳು ಹಾನಿಗೊಳಗಾಗಿವೆ. ಮಳೆಯಿಂದಾಗಿ ದಶಕಗಳ ಸಂಶೋಧನೆಗೆ ಧಕ್ಕೆಯಾಗಿದೆ.

ಸಂಶೋಧನೆ ಕೇಂದ್ರದ ಅಣು ಜೀವವಿಜ್ಞಾನ ಮತ್ತು ವಂಶವಾಹಿ ವಿಜ್ಞಾನದ ಪ್ರಯೋಗಾಲಯ ಸೇರಿದಂತೆ ಅನೇಕ ಪ್ರಯೋಗಗಳಿಗೆ ನಾಲ್ಕೈದು ಅಡಿಗಳಷ್ಟು ಮಳೆ ನೀರು ನುಗ್ಗಿದೆ. ಅತ್ಯಾಧುನಿಕ ಸೂಕ್ಷ್ಮ ದರ್ಶಕಗಳು, ಮೈನಸ್ 80 ಸೆಂಟಿಗ್ರೇಡ್ ವರೆಗೂ ಕಾಯ್ದುಕೊಳ್ಳುವ ಶೀತಲೀಕರಣ ಯಂತ್ರಗಳು ಸೇರಿದಂತೆ ಹಲವು ಉಪಕರಣಗಳು ಹಾಳಾಗಿವೆ.

20 ವರ್ಷ ಹಿಂದಿನಿಂದಲೂ ಸಂಗ್ರಹಿಸಿಟ್ಟಿದ್ದ ಜೀವಕೋಶಗಳ ಮಾದರಿಗಳು ಮಳೆಯಿಂದಾಗಿ ಅಪಾರ ನಷ್ಟಕ್ಕಿಡಾಗಿದೆ. ನಷ್ಟದ ಪ್ರಮಾಣವನ್ನು ಮತ್ತಷ್ಟು ಲೆಕ್ಕ ಹಾಕಬೇಕಿದೆ ಎಂದು ಜೆ ಎನ್ ಸಿ ಎ ಎಸ್ ಆರ್ ಅಧ್ಯಕ್ಷ ಪ್ರೊ. ಗಿರಿಧರ್.ಯು.ಕುಲಕರ್ಣಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

Rotary Club of Shivamogga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ...

Friends Center Organization ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಪ್ರಸಿದ್ಧಿ ಪಡೆದಿದೆ- ಎಸ್.ಎನ್.ಚನ್ನಬಸಪ್ಪ

Friends Center Organization ಸಮಾಜಮುಖಿ, ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಗಳನ್ನು...

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....