Thursday, March 19, 2026
Thursday, March 19, 2026

ಪಂಚರತ್ನ ಪಂಕ್ಚರ್ ಪ್ರಜಾಧ್ವನಿ ಬ್ರೇಕ್ ಫೇಲ್- ನಳಿನ್ ಕುಮಾರ್ ಕಟೀಲ್ ಕಟಕಿ

Date:

ಶಿವಮೊಗ್ಗದಲ್ಲಿ ಪೇಜ್ ಪ್ರಮುಖ್ ಸಮಾವೇಶ ನಡೆಯುತ್ತಿದೆ. ಈ ಸಮಾವೇಶಕ್ಕೆ
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಆಗಮಿಸಿದ್ದಾರೆ.

ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಸುಡುವ ಬಿಸಿಲಿನಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ.
ಕೆಲವರ ಹೊಟ್ಟೆಯಲ್ಲೂ ಬಿಸಿಮುಟ್ಟಿದ್ದೆ. ಹಾಗಾಗಿ ಪಂಚರತ್ನಯಾತ್ರೆ ಹೊರಟಿದೆ.
ಪಂಚರತ್ನ ಪಂಚರ್ ಆಗಿದೆ. ಪ್ರಜಾಧ್ವನಿ ಬ್ರೇಕ್ ಫೇಲ್ ಆಗಿದೆ.
ನಾನೂ ಪೇಜ್ ಪ್ರಮುಖರಿಗೆ ಪ್ರೇರಣೆ ನೀಡಲು ಬಂದಿಲ್ಲ.
ಬಿಜೆಪಿಯ ಶಕ್ತಿಕೇಂದ್ರ ಶಿವಮೊಗ್ಗ
ನಾನೂ ನಿಮ್ಮಿಂದ ಪ್ರೇರಣೆ ಪಡೆಯಲು ಬಂದಿದ್ದೇನೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಅವರು ತಿಳಿಸಿದರು.

ಬೂತ್ ಗೆದ್ದಾಗ ಮಾತ್ರ ಬಿಜೆಪಿ ಗೆದ್ದಹಾಗೆ ಆಗುತ್ತದೆ.ಗುಜರಾತ್ ನಲ್ಲಿ 7ನೇ ಬಾರಿಗೆ ಬಿಜೆಪಿಗೆ ಗೆಲ್ಲಲು ಕಾರಣ ಪೇಜ್ ಪ್ರಮುಖರಿಂದ ಆಗುತ್ತದೆ.
ರಾಜ್ಯದಲ್ಲಿ ಪೇಜ್ ಪ್ರಮುಖರ ಮೊದಲ ಸಮಾವೇಶ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ಎರಡು ಕಡೆ ಮಾತ್ರ ಉಳಿದಿದೆ. ಒಂದು ಡಿಕೆಶಿ ಮನೆಯಲ್ಲಿ ಇನ್ನೊಂದು ಸಿದ್ದರಾಮಯ್ಯ ಮನೆಯಲ್ಲಿ ಇದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮೂರು ತುಂಡಾಗುತ್ತದ್ದೆ.
ನಮ್ಮ ಮುಂದಿನ ಕಾರ್ಯ ಅಂತ್ಯೋದಯ
ಕಾಂಗ್ರೆಸ್ ಪೇಜ್ ಪ್ರಮುಖ ಸಭೆ ಮಾಡೋದು ಬಿಡಿ, ರಾಜ್ಯದ ಕಮಿಟಿ ಇಲ್ಲ.ಕಾಂಗ್ರೆಸ್ ಒಂದು ಡಾಕೋಟಾ ಬಸ್ ಎಂದು ಹೇಳಿದರು.

ರಾಷ್ಟ್ರೀಯ ಅಧ್ಯಕ್ಷ ಕೇರಳದ ಒಂದು ಗ್ರಾಮದ ಕಾರ್ಯಕರ್ತರ ಮನೆಗೆ ಬಂದು ಸಭೆ ಮಾಡುತ್ತಾರೆ.
ಅಲ್ಲಿಯ ವರೆಗೂ ಕೇರಳದ ಕಮ್ಯುನಿಸ್ಟ್ ಪಕ್ಷಕ್ಕೆ ಗೊತ್ತಿರಲ್ಲ.
ಅಮಿತ್ ಷಾ ಬಂದು ಹೋದ ನಂತರ ಬಿಸಿ ಮುಟ್ಟಿದೆ.
ಶಿವಮೊಗ್ಗದ ಪೇಜ್ ಪ್ರಮುಖರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಭಾರತದಲ್ಲಿ ಮಾತ್ರ ಅಲ್ಲ. ಅಮೇರಿಕಾದಲ್ಲಿ ಮೋದಿ ಪರ ಘೋಷಣೆ ಕೂಗುತ್ತಿದ್ದಾರೆ.
ಪಾಕಿಸ್ತಾನದ ಸಂಸತ್ತಿನಲ್ಲಿ ಭಾರತ್ ಮಾತಾಕೀ ಜೈ ಎನ್ನುವ ಘೋಷಣೆ ಕೂಗುವ ಸಮಯ ಬಂದಿದೆ.
ಕಾಶ್ಮೀರದಲ್ಲಿ ಭಾರತ್ ಮಾತಕೀ ಜೈ ಎಂದು ಘೋಷಣೆ ಕೂಗುವ ಹಾಗೆ ಇರಲ್ಲಿಲ್ಲ.
ಅಷ್ಟೇ ಅಲ್ಲ ಹುಬ್ಬಳ್ಳಿಯ ಈದ್ಗ ಮೈದಾನದಲ್ಲಿ ಭಾರತ ಬಾವುಟ ಹಾರಿಸಲು ಬಿಟ್ಟಿರಲಿಲ್ಲ.
ಉಕ್ರೇನ್ ನಲ್ಲಿ ಭಾರತದ ಧ್ವಜ ಹಾರುತ್ತಿದೆ.ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಹೇಳಿದ್ರು ಲಸಿಕೆ ತೆಗೆದುಕೊಳ್ಳಬೇಡಿ,
ಲಸಿಕೆ ತೆಗೆದುಕೊಂಡರೇ ಮಕ್ಕಳಾಗುವುದಿಲ್ಲ ಎಂದು.
ಹೀಗೆ ಹೇಳಿ ಬೆಳಗ್ಗೆ ಹೋಗಿ ಲಸಿಕೆ ತೆಗೆದುಕೊಂಡರು.
ಪ್ರಧಾನಿ ಮೋದಿ, ಮೊದಲು ಲಸಿಕೆ ತೆಗೆದು ಕೊಂಡಿಲ್ಲ ವೈದ್ಯರು ಪೊಲೀಸರು ದಾದಿಯರು ಹಾಗೂ ಆಶಾಕಾರ್ಯಕರ್ತರಿಗೆ ನೀಡಿ ದೇಶ ಉಳಿಸಿದರು ಎಂದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ, ಮೊದಲು ಸೋನಿಯಾ ಗಾಂಧಿಗೆ ನೀಡುತ್ತಿದ್ದರು.
ನಂತರ ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡುತ್ತಿದ್ದರು.
ಲಸಿಕೆ ಉಳಿದರೆ ಸಿದ್ದರಾಮಯ್ಯ, ಖರ್ಗೆಗೆ ನೀಡುತ್ತಿದ್ದರು.
ಬಿಜೆಪಿಗೆ ಹೊಸಬರು ಬರಬೇಕು, ನಾವು 60 ವರ್ಷ ಮೇಲ್ಪವರು ರಿಟೈಲ್ ಆಗಬೇಕು.
ಭಾರತ್ ಜೋಡೋ ಮಾಡಿದ್ದು ನರೇಂದ್ರ ಮೋದಿ.
ರಾಹುಲ್ ಗಾಂಧಿ ಮಾಡಿದ್ದು ಪಾದಯಾತ್ರೆ ಮಾತ್ರ ಮಾಡಿದ್ದಾರೆ.
ಗರೀಬಿ ಹಾಟಾವೋ ಘೋಷಣೆ ಕಾಂಗ್ರೆಸ್ ಘೋಷಣೆ ಆಗಿತ್ತು.
ಅದು ಸೋನಿಯಾ ಗಾಂಧಿ ಕುಟುಂಬದ ಗರೀಭಿ ಹಾಟಾವೋ ಆಯ್ತು, ಸಿದ್ದರಾಮಯ್ಯ ಖರ್ಗೆ ಹಾಗೂ ಶಿವಕುಮಾರ್ ಮನೆ ಗರೀಬಿ ಹಾಟಾವೋ ಆಗಿದೆ.
ಮೀಸಲಾತಿ ನೀಡಿದ್ದು ಸಿಎಂ ಬೊಮ್ಮಾಯಿ,
ಸಮಾಜವನ್ನು ಒಡೆದು ಹಾಕಿದ್ದು ಸಿದ್ದರಾಮಯ್ಯ.
ಟಿಪ್ಪು ಜಯಂತಿ ಹೆಸರಲ್ಲಿ ಹತ್ಯೆಯಾದಗ ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬಂದಿಲ್ಲ.
ಪಿಎಫ್ ಐ ಬ್ಯಾನ್ ಮಾಡ್ದಾಗ, 2000 ಕಾರ್ಯಕರ್ತರನ್ನು ಎಫ್ ಐ ಆರ್ ಮಾಡ್ದಾಗ ಕಣ್ಣೀರು ಬಂತು.
ನಿಮ್ಮ ತೀರ್ಥಹಳ್ಳಿಯವರು ಒಬ್ಬರು ಕುಕ್ಕರ್ ಹಿಡಿದು ಕೊಂಡು ಬಂದರು.
ಇದರಿಂದ ಮಂಗಳೂರಿನಲ್ಲಿ ಭಯಭಿತಾರಾದರು.
ಆಗ ಡಿಕೆಶಿಗೆ ಎರಡು ಕುಕ್ಕರ್ ಮೇಲೆ ಪ್ರೀತಿ ಬಂತು.
ಒಂದು ಬೆಳಗಾಂನಿ ಕುಕ್ಕರ್ ಇನ್ನೊಂದು ತೀರ್ಥಹಳ್ಳಿಯ ಕುಕ್ಕರ್ ಮೇಲೆ ಪ್ರೀತಿ ಬಂತ್ತು.
ಮುಂದಿನ ಮುಖ್ಯಮಂತ್ರಿ ಎಂದು ನಾಲ್ಕು ನಾಲ್ಕು ಶರ್ಟ್ ಹಾಗೂ ಶೂಟ್ ಹೊಲೆಸಿಕೊಂಡಿದ್ದಾರೆ ಎಂದು ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...