ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಹೋಬಳಿ ಘಟಕದ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಕೋರಿ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಎಲ್.ನಾಗರಾಜ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್.ಜಿ.ವಿಜಯರಾಜ್ ಮಾತನಾಡಿ, ಜನರಿಗೆ ತ್ವರಿತವಾಗಿ ಸುದ್ದಿ ಹಾಗೂ ಮಾಧ್ಯಮದ ಇತರೆ ಸೇವೆ ಒದಗಿಸುವ ಉದ್ಧೇಶದಿಂದ ಸಂಘವು ಅಸ್ತಿತ್ವಕ್ಕೆ ಬಂದಿದೆ. ಪತ್ರಿಕಾಗೋಷ್ಠಿ ಇಲ್ಲವೆ ಇತರೆ ಚಟುವಟಿಕಗಳು ನಡೆಸಬೇಕೆಂದರೆ ಶಿವಮೊಗ್ಗ ಅಥವಾ ಭದ್ರಾವತಿಗೆ ನಗರಕ್ಕೆ ಹೋಗಬೇಕಿದೆ. ಆದರೆ ಅವರಿಗೆ ಸ್ಥಳೀಯವಾಗಿಯೆ ಅವಕಾಶ ಕಲ್ಪಿಸಿ ಸ್ಥಳಿಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸಂಘದ ಆಶಯವಾಗಿದೆ. ಆದ್ದರಿಂದ ಇಲ್ಲಿ ಸುಸಜ್ಜಿತ ಪತ್ರಿಕಾ ಭವನದ ಅವಶ್ಯಕತೆ ಇದೆ ಎಂದು ಮುಖ್ಯಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.
ಮುಖ್ಯಾಧಿಕಾರಿ ಎಮ್.ಎಲ್.ನಾಗರಾಜ್ ಅವರು ಪ್ರತಿಕ್ರಿಯೆ ನೀಡಿ, ಸರಕಾರದ ಸುತ್ತೋಲೆಯ ಪ್ರಕಾರ ಕಾನೂನಿನ ಪರಿಮಿತಿಯೊಳಗೆ ಸೂಕ್ತವಾದ ಸ್ಥಳ ಆಯ್ಕೆ ಮಾಡಿ ಶೀಘ್ರ ಸ್ಥಳಾವಕಾಶ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೋಬಳಿ ಘಟಕದ ಪ್ರಧಾನ ಕರ್ಯದರ್ಶಿ ಕೆ.ರಂಗನಾಥ್ ಹಾಗೂ ಸದಸ್ಯರು ಇದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
