Saturday, April 26, 2025
Saturday, April 26, 2025

ಕ್ರೀಡಾಸಕ್ತಿಯಿಂದ ಮಕ್ಕಳು ಜೀವನದಲ್ಲಿ ಶಿಸ್ತುಬದ್ಧರಾಗಿರುತ್ತಾರೆ- ರವಿಕುಮಾರ್

Date:

ಇಂದು ಮಕ್ಕಳಿಗೆ ಸಂಸ್ಕೃತಯುತ ಶಿಕ್ಷಣ ನೀಡುವುದು ಅತೀ ಮುಖ್ಯ. ಜೊತೆಗೆ ಕ್ರೀಡಾ ಕೂಟಕ್ಕೂ ಹೆಚ್ಚಿನ ಮಹತ್ವ ನೀಡಿದಲ್ಲಿ ಮಕ್ಕಳು ಓದಿನಲ್ಲಿ ಹಾಗೂ ಬದುಕಿನಲ್ಲಿ ಶಿಸ್ತುಬದ್ಧರಾಗಿರಲು ಸಹಕಾರವಾಗು ತ್ತದೆ ಎಂದು ಕೆಪಿಸಿಸಿ ಸಂಯೋಜಕ ಎಸ್. ರವಿಕುಮಾರ್ ತಿಳಿಸಿದರು.

ಗುರುಪುರದ ದೆಹಲಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಾಲಾ ಮಕ್ಕಳ ಹಾಗೂ ಪೋಷಕರ ಕ್ರೀಡಾಕೂಟವನ್ನು ಪಾರಿಹಾಳ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿವಮೊಗ್ಗದಲ್ಲಿ ಉತ್ತಮ ಶಿಕ್ಷಣ ನೀಡುವ ಶಾಲೆಗಳ ಪೈಕಿ ದೆಹಲಿ ಇಂಟರ್ ನ್ಯಾಷನಲ್ ಶಾಲೆ ಕೂಡ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದ ಅವರು, ಕ್ರೀಡಾಕೂಟ ಹಾಗೂ ಓದಿನಲ್ಲಿ ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿರುವುದು ಹೆಮ್ಮೆಯ ವಿಷಯ. ಶಾಲೆಯು ಇನ್ನೂ ಉತ್ತಮ ಸಾಧನೆಗಳನ್ನು ಮಾಡಿ ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಡಿವೈಎಸ್‌ಪಿ ಬಾಲರಾಜ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂದೆ ತಾಯಿಯರು, ಅಜ್ಜಿ, ತಾತಂದಿರೊಂದಿಗೆ ಮಕ್ಕಳು ಬೆರೆತು ಕ್ರೀಡಾಕೂಟಗಳಲ್ಲಿ ತೊಡಗುವುದ ರಿಂದ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಅಂತಹ ಒಂದು ವಿಶೇಷ ವೇದಿಕೆ ಯನ್ನು ಈ ಶಾಲೆ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಶಿವಮೊಗ್ಗದಲ್ಲಿ ಡೆಲ್ಲಿ ಇಂಟರ್ ನ್ಯಾಷನಲ್ ಶಾಲೆಯು ಕಳೆದ 9 ವರ್ಷಗಳಿಂದ ವಿಶೇಷ ಹಾಗೂ ವಿನೂತನ ಶೈಲಿಯಲ್ಲಿ ಪಾಠ ಪ್ರವಚನ ನೀಡುತ್ತ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ಚಾಪನ್ನು ಮೂಡಿಸಿದೆ. ಶಾಲೆಯ ಶೈಕ್ಷಣಿಕ ಕಾರ್ಯವನ್ನು ಗುರಿತಿಸಿದ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಎಜುಕೇಷನ್ ಟುಡೇ ಪತ್ರಿಕೆಯು ಶೈಕ್ಷಣಿಕ ಸರ್ವೇ ನಡೆಸಿ ನಮ್ಮ ಶಾಲೆಗೆ ಎರಡು ಅತ್ಯುನ್ನತ ರಾಷ್ಟ್ರಮಟ್ಟದ ಎರಡು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ಫೌಂಡರ್ ಡೈರೆಕ್ಟರ್ ಡಾ. ಎಸ್.ಬಿ. ಜಗದೀಶ್ ಗೌಡ ಸಂತಸ ವ್ಯಕ್ತಪಡಿಸಿದರು.

ವಿಜೇತ ಮಕ್ಕಳು ಹಾಗೂ ಪೋಷಕರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾಕ್ಟ ರೇಟ್ ಪಡೆದುಕೊಂಡ ಜಗದೀಶ್ ಗೌಡರನ್ನು ಅತಿಥಿಗಳು, ಪೋಷಕರು ಸನ್ಮಾನಿಸಿ ಅಭಿನಂದಿಸಿದರು.

ಪಾಲಿಕೆ ಸದಸ್ಯ ಹೆಚ್.ಸಿ. ಯೋಗೀಶ್, ಮಾಜಿ ಸದಸ್ಯ ಐಡಿಯಲ್ ಗೋಪಿ ಹಾಗೂ ಬಂಟರ ಸಮಾಜದ ಮಾಜಿ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿö ಹಾಗೂ ಶಾಲೆಯ ಛೇರ್‌ಮನ್ ರಮ್ಯ ಜಗದೀಶ್ ಗೌಡ ಸೇರಿದಂತೆ ಶಾಲಾ ಶಿಕ್ಷಕಿಯರು ಸಿಬ್ಬಂದ್ದಿಯವರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Defense University ಪಠ್ಯಕ್ರಮದ ರಚನೆ & ಕೌಶಲ್ಯಾಭಿವೃದ್ಧಿಗೆಒತ್ತು-ರಾಷ್ಟ್ರೀಯ ರಕ್ಷಾ ವಿವಿಯಲ್ಲಿ ವೃತ್ತಿ ಸಮಾಲೋಚನೆ ಯಶಸ್ವಿ

National Defense University ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU), ಶಿವಮೊಗ್ಗ ಕ್ಯಾಂಪಸ್ನಲ್ಲಿ,...

Digital library ಹೊಸ ವಿಷಯ ಕಲಿಕೆ ಸಂಗಡ ಮಕ್ಕಳು ದೈಹಿಕ & ಮಾನಸಿಕ ದೃಢತೆ ಸಾಧಿಸಬೇಕು- ವೀರೇಶ್ ಕ್ಯಾತನಕೊಪ್ಪ

Digital library ಮಕ್ಕಳಿಗೆ ಬೇಸಿಗೆ ಶಿಬಿರಗಳು ಅತ್ಯಂತ ಅವಶ್ಯಕ ಎಂದು ಸೂಗುರು...

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...